ಹೆಚ್ಚು ಗಮನ ಸೆಳೆದ ಕ್ರಿಕೆಟ್ ಸಲಹಾ ಸಮಿತಿಯು ಭಾರತದ ಹೊಸ ಕೋಚ್ ನೇಮಕದ ಕುರಿತು ಬಿಸಿಸಿಐಗೆ ತನ್ನ ಅಂತಿಮ ವರದಿಯನ್ನು ಧರ್ಮಶಾಲಾದಲ್ಲಿ ಶುಕ್ರವಾರ ನಡೆಯುವ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಸಲ್ಲಿಸಲಿದೆ. ಅನಿಲ್ ಕುಂಬ್ಳೆ, ಪ್ರವೀಣ್ ಆಮ್ರೆ ಮತ್ತು ಲಾಲ್ ಚಂದ್ ರಜಪೂತ್ ತಮ್ಮ ಪ್ರಾತ್ಯಕ್ಷಿಕೆಗಳನ್ನು ನೀಡಿದರು.
ಅಭ್ಯರ್ಥಿಗಳ ಮೌಲ್ಯಮಾಪನಕ್ಕೆ ಇನ್ನೊಂದು ಸುತ್ತಿನ ಚರ್ಚೆ ಬಳಿಕ, ಬಿಸಿಸಿಐ ಕಾರ್ಯದರ್ಶಿ ಅಜಯ್ ಶಿರ್ಕಗೆ ಸಮಿತಿಯು ಶುಕ್ರವಾರ ತನ್ನ ವರದಿ ಸಲ್ಲಿಸಲು ನಿರ್ಧರಿಸಿದೆ.
ಅರ್ಜಿದಾರರು ಸಲ್ಲಿಸಿದ ಪ್ರಾತ್ಯಕ್ಷಿಕೆ ಆಧಾರದ ಮೇಲೆ ಆಯ್ಕೆಗಳು ಮತ್ತು ಸಾಧ್ಯತೆಗಳನ್ನು ಕುರಿತು ಚರ್ಚಿಸಲು ಸಮಿತಿಯು ಇಂದು ಭೇಟಿ ಮಾಡಿತು.
ಕುಂಬ್ಳೆ, ಆಮ್ರೆ ಮತ್ತು ರಾಜಪುತ್ ಅವರು ಸಮಿತಿ ಸದಸ್ಯರಾದ ಗಂಗೂಲಿ, ಲಕ್ಷ್ಮಣ್ ಮತ್ತು ಲಂಡನ್ನಿಂದ ವಿಡಿಯೊ ಕಾನ್ಫರೆನ್ಸ್ನಲ್ಲಿ ಸಚಿನ್ ಜತೆ ಮಾತನಾಡಿದರು. ರವಿ ಶಾಸ್ತ್ರಿ ಕೂಡ ವಿದೇಶದಲ್ಲಿದ್ದು, ವಿಡಿಯೊ ಕಾನ್ಫರೆನ್ಸ್ ಮೂಲಕ ಅವರ ಸಂದರ್ಶನ ಮಾಡಲಾಯಿತು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ