Webdunia - Bharat's app for daily news and videos

Install App

`ವಿಕೆಟ್ ಕಿತ್ತು ಕೊಹ್ಲಿಗೆ ತಿವಿದು ಬಿಡಬೇಕೆಂದುಕೊಂಡಿದ್ದೆ’

Webdunia
ಶುಕ್ರವಾರ, 31 ಮಾರ್ಚ್ 2017 (17:49 IST)
ಮಳೆ ನಿಂತರೂ ಹನಿ ನಿಲ್ಲುವುದಿಲ್ಲ ಎಂಬಂತೆ ಟೆಸ್ಟ್ ಸರಣಿ ಮುಗಿದರೂ ವಾಗ್ದಾಳಿಗಳು ಮಾತ್ರ ನಿಂತಿಲ್ಲ. ಆಸೀಸ್ ಕ್ಯಾಪ್ಟನ್ ಸ್ಟೀವ್ ಸ್ಮಿತ್, ಆಸೀಸ್ ಮಾಧ್ಯಮಗಳ ಬಳಿಕ ಕೊಹ್ಲಿ ವಿರುದ್ಧ ಆಸ್ಟ್ರೇಲಿಯಾದ ಮಾಜಿ ಓಪನರ್ ಇ.ಡಿ. ಕೋವನ್ ವಾಗ್ದಾಳಿ ನಡೆಸಿದ್ದಾರೆ.

ಆ ಕ್ಷಣ ವಿಕೆಟ್ ಕಿತ್ತು ಕೊಹ್ಲಿಗೆ ತಿವಿದುಬಿಡಬೇಕೆಂದುಕೊಂಡಿದ್ದೆ ಎಂದು ಕೋವನ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಕೊವನ್`ಗೆ ಇಂಥಾ ಕೆಂಡದಂಥಾ ಕೋಪ ಬರಲು ಕೊಹ್ಲಿ ಮಾತು ಕಾರಣವಂತೆ. ಪಂದ್ಯವೊಂದರಲ್ಲಿ ಕೊಹ್ಲಿ ನನ್ನ ವಿರುದ್ಧ ವೈಯಕ್ತಿಕ ವಿಷಯವನ್ನ ಸೂಚಿಸುವ ಅಶ್ಲೀಲ ಪದ ಬಳಕೆ ಮಾಡಿದ್ದರು. ಆದರೆ, ಕೊಹ್ಲಿಗೆ ಅದು ಮನವರಿಕೆ ಆಗಲೇ ಇಲ್ಲ. ಅಷ್ಟರೊಳಗೆ ಅಂಪೈರ್ ಮಧ್ಯಪ್ರವೇಶಿಸಿ ಮನವರಿಕೆ ಮಾಡಿಕೊಟ್ಟ ಬಳಿಕ ಕ್ಷಮೆ ಕೋರಿದರು. ಆದರೆ, ಆ ಕ್ಷಣ ವಿಕೆಟ್ ಕಿತ್ತು ಚುಚ್ಚಿಬಿಡಬೇಕೆನ್ನಿಸಿತು ಎಂದು ಕೋವನ್ ಹೇಳಿದ್ದಾರೆ.

ಬೆಂಗಳೂರಲ್ಲಿ ನಡೆದ ಡಿಆರ್`ಎಸ್ ಡ್ರಾಮಾ ಬಳಿಕ ಆಸೀಸ್ ಆಟಗಾರರು ಒಬ್ಬರ ಹಿಂದೊಬ್ಬರಂತೆ ಕೊಹ್ಲಿ ವಿರುದ್ಧ ಮುಗಿಬೀಳುತ್ತಿದ್ದಾರೆ. ಸ್ಮಿತ್ ತಪ್ಪನ್ನ ಎತ್ತಿತೋರಿಸಿದ ನಾಯಕ ವಿರಾಟ್ ಕೊಹ್ಲಿಯನ್ನೇ ಖಳನಾಯಕನಂತೆ ಬಿಂಬಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಇದಕ್ಕೆ ಆಸಿಸ್ ಮಾಧ್ಯಮಗಳೂ ಸಾಥ್ ನೀಡಿರುವುದು ದುರಂತ.

 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2025: ಚೆನ್ನೈ ತಂಡದ ಮಹಾ ಎಡವಟ್ಟು: ನಿಯಮ ಮರೆತು ಪಂದ್ಯ ಸೋತ ಧೋನಿ ಪಡೆ

IPL 2025: ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ 16 ವರ್ಷಗಳ ಬಳಿಕ ಈ ದಾಖಲೆ ಬರೆದ ಆರ್‌ಸಿಬಿ

IPL 2025: ಚೆನ್ನೈ ವಿರುದ್ಧದ ರೋಚಕ ಪಂದ್ಯದಲ್ಲಿ ಗೆದ್ದ ಆರ್‌ಸಿಬಿ: ಮತ್ತೆ ಅಗ್ರಸ್ಥಾನದೊಂದಿಗೆ ಪ್ಲೇಆಫ್‌ಗೆ ಸನಿಹ

RCB vs CSK Match:ಶೆಫರ್ಡ್‌ ಅಬ್ಬರದ ಬ್ಯಾಟಿಂಗ್‌ಗೆ ನಲುಗಿದ ಚೆನ್ನೈ, ಆರ್‌ಸಿಬಿಯಿಂದ ಬಿಗ್ ಟಾರ್ಗೆಟ್‌

CSK vs RCB Match: ಟಾಸ್ ಗೆದ್ದ ಚೆನ್ನೈ, ಫೀಲ್ಡಿಂಗ್ ಆಯ್ಕೆ

ಮುಂದಿನ ಸುದ್ದಿ
Show comments