ಮಾಜಿ ಕ್ರಿಕೆಟಿಗ ಜಿ.ಆರ್ . ವಿಶ್ವನಾಥ್ ಅವರು ರಕ್ತಹೀನತೆಯಿಂದ ಬಳಲುತ್ತಿದ್ದು ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದೆ. ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಆಸ್ಪತ್ರೆಗೆ ದಾಖಲಾಗಿದೆ. ಐಸಿಯುನಲ್ಲಿದ್ದ ಅವರನ್ನು ಜನರಲ್ ವಾರ್ಡ್ಗೆ ಶಿಫ್ಟ್ ಮಾಡಲಾಗಿದೆ.
ತಮ್ಮ ಕಲಾತ್ಮಕ ಶೈಲಿಯ ಬ್ಯಾಟಿಂಗ್ ಮೂಲಕ ಗಮನಸೆಳೆದಿದ್ದ ಗುಂಡಪ್ಪ ವಿಶ್ವನಾಥ್ ವೇಗದ ಎಸೆತವನ್ನು ಆಕರ್ಷಕ ರೀತಿಯಲ್ಲಿ ಸ್ಕೇರ್ ಕಟ್ ಮೂಲಕ ಬೌಂಡರಿ ಗೆರೆಗೆ ಕಳಿಸುವುದರಲ್ಲಿ ಸಿದ್ಧಹಸ್ತರಾಗಿದ್ದರು.
ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಮೊದಲ ಪಂದ್ಯದಲ್ಲಿ ಶತಕ ಗಳಿಸಿದ ಕೀರ್ತಿಗೆ ವಿಶ್ವನಾಥ್ ಪಾತ್ರರಾಗಿದ್ದಾರೆ. 1999 ರಿಂದ 5 ವರ್ಷಗಳವರೆಗೆ ಐಸಿಸಿ ರೆಫ್ರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಅಲ್ಲದೇ, ಬಿಸಿಸಿಐನ ಆಯ್ಕೆ ಮಂಡಳಿ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.