Webdunia - Bharat's app for daily news and videos

Install App

ಔಟ್ ಎಂದು ಬೆರಳು ತೋರಿಸಲು ಹೋಗಿ ಸುಮ್ಮನಾದ ಅಂಪೈರ್

Webdunia
ಸೋಮವಾರ, 20 ಮಾರ್ಚ್ 2017 (09:54 IST)
ರಾಂಚಿಯಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದ ವೇಳೆ ಕುತೂಹಲಕರ ಘಟನೆ ನಡೆದಿದೆ. ಈ ಪ್ರಸಂಗ ಕಾಮೆಂಟೇಟರ್ಸ್, ಪ್ರೇಕ್ಷಕರು ಮತ್ತು ಆಟಗಾರರನ್ನ ನಗೆಗಡಲ್ಲಿ ತೇಲಿಸಿದ್ದಲ್ಲದೆ ಅಂಪೈರ್ ದಕ್ಷತೆ ಪ್ರಶ್ನಿಸುವಂತೆ ಮಾಡಿದೆ. ನ್ಯೂಜಿಲೆಂಡ್ ಅಂಪೈರ್ ಕ್ರಿಸ್ ಗೆಫನೆವ್  ನಡೆದುಕೊಂಡ ರೀತಿ ಇದಕ್ಕೆ ಕಾರಣ.

140 ರನ್ ಗಳಿಸಿ ಬ್ಯಾಟಿಂಗ್  ಮಾಡುತ್ತಿದ್ದ ಚೆತೇಶ್ವರ್ ಪೂಜಾರ, ಹೇಜಲ್ವುಡ್ ಎಸೆದ ಬೌನ್ಸರ್ ಅನ್ನ ಜೋರಾಗಿ ಬಾರಿಸಲು ಮುಂದಾದರು. ಆದರೆ, ಚೆಂಡು ಬ್ಯಾಟಿಗೆ ಸಿಗಲಿಲ್ಲ. ಬಾಲ್ ನೇರ ಕೀಪರ್ ಮ್ಯಾಥ್ಯೂ ವೇಡ್ ಕೈಸೇರಿತು. ಈ ಸಂದರ್ಭ ಬೌಲರ್ ಮತ್ತು ಕೀಪರ್ ಕಡೆಯಿಂದ ಅಗ್ರೇಸ್ಸಿವ್ ಅಪೀಲ್ ಬರಲಿಲ್ಲ. ಇದರಿಂದ ಕನ್ ಫ್ಯೂಶನ್`ಗೆ ಒಳಗಾದ ಅಂಪೈರ್ ಔಟ್ ಎಂದು ಬೆರಳನ್ನ ಮೇಲೆತ್ತಲು ಹೋಗಿ ಬಳಿಕ ತಲೆ ಕೆರೆದುಕೊಂಡು ಬೆರಳು ಕೆಳಗಿಳಿಸಿದರು. ಟಿವಿ ಪರದೆ ಮೇಲೆ ಈ ದೃಶ್ಯ ಕಂಡ ಅಭಿಮಾನಿಗಳು ನಗೆಗಡಲಲ್ಲಿ ತೇಲಿದರು.

ಅಂದಹಾಗೆ ಅಂಪೈರ್ ತಮ್ಮದೇ ನಿರ್ಧಾರ ಕೈಗೊಳ್ಳದೆ ಸಂಪೂರ್ಣ ಅಪೀಲ್ ಮೇಲೆ ಡಿಪೆಂಡ್ ಆಗಿರುತ್ತಿರಾ..? ಔಟ್ ಆಗಿದ್ದರೂ ಅಪೀಲ್ ಸರಿಯಾಗಿ ಆಗದಿದ್ದರೆ ನಿರ್ಧಾರ ಕೈಗೊಳ್ಳುವುದಿಲ್ಲವೇ..? ಕೊನೆಯ ಪಕ್ಷ ಮೂರನೇ ಅಂಪೈರ್`ಗೆ ಸೂಚಿಸುವುದನ್ನ ಮರೆತಿದ್ದೇಕೆ ಎಂಬ ಪ್ರಶ್ನೆ ಹುಟ್ಟುಹಾಕಿದೆ.

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ವೈಭವ್‌ ಸೂರ್ಯವಂಶಿಯ ಹಾದಿಯಲ್ಲಿ ಸ್ನೇಹಿತ ಅಯಾನ್‌ ರಾಜ್‌: ತ್ರಿಶತಕ ಸಿಡಿಸಿದ ಬಿಹಾರದ 13ರ ಪೋರ

ಭಾರತ, ಇಂಗ್ಲೆಂಡ್ ಸರಣಿಗೆ ನನ್ನ ಹೆಸರಿಡಬೇಡಿ ಎಂದ ಸಚಿನ್ ತೆಂಡುಲ್ಕರ್: ಕಾರಣ ಕೇಳಿದ್ರೆ ಹೆಮ್ಮೆ

Rohit Sharma: ಟೀಂ ಇಂಡಿಯಾ ಬಸ್ ನಲ್ಲಿ ರೋಹಿತ್ ಶರ್ಮಾ ಸೀಟ್ ಈಗ ಯಾರದ್ದು

ಲಂಡನ್‌ನಿಂದ ತುರ್ತಾಗಿ ವಾಪಸಾದ ಗೌತಮ್‌ ಗಂಭೀರ್‌: ವಿವಿಎಸ್​ ಲಕ್ಷ್ಮಣ್‌ಗೆ ಹೊಸ ಜವಾಬ್ದಾರಿ ನೀಡಲು ಚಿಂತನೆ

ಎಬಿಡಿ ವಿಲಿಯರ್ಸ್ ಗೆ ಒಂದೇ ತಿಂಗಳಲ್ಲಿ ಡಬಲ್ ಧಮಾಕ

ಮುಂದಿನ ಸುದ್ದಿ
Show comments