Select Your Language

Notifications

webdunia
webdunia
webdunia
webdunia

ಮುಸ್ಸಂಜೆ ಮಹೇಶ್ ಮುಂದಿನ ಚಿತ್ರದಲ್ಲಿ ಯುವರಾಜ್

ಮುಸ್ಸಂಜೆ ಮಹೇಶ್ ಮುಂದಿನ ಚಿತ್ರದಲ್ಲಿ ಯುವರಾಜ್
ಬೆಂಗಳೂರು , ಗುರುವಾರ, 29 ಸೆಪ್ಟಂಬರ್ 2016 (10:57 IST)
'ಅಸ್ತಿತ್ವ' ಚಿತ್ರದಲ್ಲಿ ನಟಿಸಿದ್ದ ಯುವರಾಜ್ ನಿಮಗೆ ಗೊತ್ತಿರಬಹುದು. ಅಸ್ತಿತ್ವ ಚಿತ್ರದ ಮೂಲಕ ನಟನೆ ಮಾಡಿದ್ದ ಯುವರಾಜ್ ಇದೀಗ ಮತ್ತೊಂದು ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮುಂದಿನ ಸಿನಿಮಾದಲ್ಲಿ ಮುಸ್ಸಂಜೆ ಮಹೇಶ್ ಜತೆಗೆ ಕೆಲಸ ಮಾಡುತ್ತಿ ದ್ದಾರೆ..
ಅಂದಹಾಗೆ ಚಿತ್ರದ ಟೈಟಲ್ 'ಜಿಂದಾ' ಎಂದು ಇಡಲಾಗಿದೆ. ಈ ಚಿತ್ರಕ್ಕಾಗಿ ನಿರ್ದೇಶಕ ಮುಸ್ಸಂಜೆ ಮಹೇಶ್ ಯುವರಾಜ್ ಅವರಿಗೆ ಆಫರ್ ನೀಡಿದ್ರು. ಇದೊಂದು ಪಕ್ಕಾ ಕಮರ್ಷಿಯಲ್ ಮೂವೀ ಎನ್ನುವ ನಿರ್ದೇಶಕರು, ಈ ಚಿತ್ರವು ನೇರವಾಗಿ ವಿಷಯ ವಿಭಿನ್ನವಾಗಿದೆ ಅಂತಾರೆ. ಸುಮಾರು 80ರ ದಶಕದಲ್ಲಿ ಆಗಿದ್ದ ನೈಜ ಘಟನೆಯನ್ನು ಆಧರಿಸಿ ಚಿತ್ರ ಕಥೆ ಒಳಗೊಂಡಿದೆ. 
 
ಅಲ್ಲದೇ ಚಿತ್ರದಲ್ಲಿ ಆ್ಯಕ್ಷನ್ ಸಿಕ್ವೇನ್ಸ್ ಸೀನ್ ಗಳನ್ನು ಸಹ ಇರಲಿವೆ ಎಂದು ನಟ ಯುವರಾಜ್ ತಿಳಿಸಿದ್ದಾರೆ. ಈ ಚಿತ್ರದಲ್ಲಿ ಮೇಘನಾ ರಾಜ್ ಲೀಡ್ ರೋಲ್‌ನಲ್ಲಿ ಮಿಂಚಿದ್ರೆ, ಇನ್ನೂ ಶ್ರೀನಿವಾಸ್ ಮೂರ್ತಿ, ರಾಜು ತಾಳಿಕೋಟೆ, ದೇವರಾಜ್ ಮುಂತಾದವರು ಕಲಾವಿದರು ನಟಿಸಿದ್ದಾರೆ. 
 

Share this Story:

Follow Webdunia kannada

ಮುಂದಿನ ಸುದ್ದಿ

ಕಡೆಗೂ ಅಪ್ಪು ಆಸೆ ನೆರವೇರಿತು