Webdunia - Bharat's app for daily news and videos

Install App

ಪಿಯು ವಿದ್ಯಾರ್ಥಿಗಳಿಗೆ ನಟ ಯಶ್ ಹೇಳಿದ ಬುದ್ಧಿ ಮಾತೇನು?

Webdunia
ಶುಕ್ರವಾರ, 27 ಮೇ 2016 (10:26 IST)
ಬರದಿಂದ ಕಂಗೆಟ್ಟು ಹೋಗಿದ್ದ ಉತ್ತರ ಕರ್ನಾಟಕದ ಕೆಲ ಹಳ್ಳಿಗಳ ಮಂದಿಯ ನೋವಿಗೆ ನಟ ಯಶ್ ಅವರು ಸ್ಪಂದಿಸಿದ್ದರು. ತಮ್ಮ ಯಶೋ ಮಾರ್ಗ ಫೌಂಡೇಷನ್ ಮೂಲಕ ಅಲ್ಲಿನಹಳ್ಳಿಗಳ ಜನರಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಿ ಅವರ ನೀರಿನ ದಾಹ ತೀರಿಸಿದ್ದರು. ಇದೀಗ ಯಶ್ ತಾನು ರಿಯಲ್ ಲೈಫ್ ನಲ್ಲೂ ಹೀರೋ ಅನ್ನೋದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.

 ಮೊನ್ನೆ ತಾನೇ ಪಿಯುಸಿ ಫಲಿತಾಂಶ ಹೊರಬಂದಿದೆ. ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲಿ  ಆದ್ರೆ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಅವರ ಪೋಷಕರಿಗೆ ಕಿವಿ ಮಾತೊಂದನ್ನು ಫೇಸ್‌ಬುಕ್‌ ಮೂಲಕ ಹೇಳಿದ್ದಾರೆ. ನಿನ್ನೆಯಷ್ಟೇ ಪಿಯುಸಿ ರಿಸಲ್ಟ್‌ ಬಂದಿದೆ. ಅನೇಕರು ಗೆದ್ದಿದ್ದೀರಿ, ಸಂತೋಷಪಟ್ಟಿದ್ದೀರಿ. ಕೆಲವರಿಗೆ ಅಂದುಕೊಂಡಷ್ಟು ಸಾಧಿಸಲಾಗಿರುವುದಿಲ್ಲ.ಇನ್ನು ಕೆಲವರು ನಾನಾ ಕಾರಣಕ್ಕೆ ನಿರಾಶೆ ಹೊಂದಿರುತ್ತೀರಿ. ಆದರೆ, ನೆನಪಿಡಿ, ಸೋಲು ಎಂಬುದು ನಿಮ್ಮ ಬದುಕಿನ ಸೋಲಲ್ಲ, ಬದುಕನ್ನೇ ಕಳೆದುಕೊಳ್ಳುವಷ್ಟು ದೊಡ್ಡ ನಿರಾಶೆಯಲ್ಲ. ಧೈರ್ಯ ಕೆಡಬೇಡಿ ಅಂತಾ ಅವರು ಹೇಳಿದ್ದಾರೆ.
 
ಅಲ್ಲದೇ ನಡೆದುಹೋಗಿರುವುದು ಬರೀ ಒಂದು ಪರೀಕ್ಷೆ. ಅದೇ ಅಂತಿಮ ಅಲ್ಲ. ನಿರಾಶೆ ಬೇಡ, ನಾಳೆ ದೊಡ್ಡದೊಂದು ಯಶಸ್ಸು ನಿಮಗಾಗಿ ಕಾದಿದೆ. ಕಾಲ ಬದಲಾಗುತ್ತಲೇ ಇರುತ್ತದೆ, ತಾಳಿ ನಿಂತವನಿಗೆ ಗೆಲುವಿದೆ. ಹೆತ್ತವರೇ, ಮಕ್ಕಳನ್ನು ಕಡಿಮೆ ಮಾರ್ಕ್ಸ್ ತೆಗೆದುಕೊಂಡ ಕಾರಣಕ್ಕೆ ಬೈಯಬೇಡಿ. ಮಕ್ಕಳೇ, ಪರೀಕ್ಷೆಯಲ್ಲಿ ಮಾರ್ಕ್ಸ್ ಕಡಿಮೆ ಬಂತೆಂದು ಕುಗ್ಗಬೇಡಿ.
 
ಬದುಕಿಗಿಂತ ಯಾವುದೂ ದೊಡ್ಡದಲ್ಲ. ಪರೀಕ್ಷೆಯಲ್ಲಿ ಗೆದ್ದವರು ಮಾತ್ರ ಜಾಣರಲ್ಲ. ಇಂಗ್ಲಿಷ್ ಗೊತ್ತಿಲ್ಲದವರೆಲ್ಲ ದಡ್ಡರಲ್ಲ. ಚಿಯರ್ ಅಪ್. ಸ್ಮೈಲ್ ಎದ್ದು ನಿಂತು ಸುತ್ತಲೂ ನೋಡಿ. ಜಗತ್ತು ಸುಂದರವಾಗಿದೆ, ವಿಶಾಲವಾಗಿದೆ. ನಡೆಯಲು ಸಿದ್ಧನಾದವನಿಗೆ ನೂರಾರು ದಾರಿಯಿದೆ ಅಂತಾ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Pahalgam Attack, ದುಃಖದ ಸಮಯದಲ್ಲಿ ದೇಶ ಮೆಚ್ಚುವ ನಿರ್ಧಾರ ಕೈಗೊಂಡ ನಟ ಸಲ್ಮಾನ್ ಖಾನ್‌

Shruti Haasan, ಚೆನ್ನೈಗೆ ಸೋಲಾಗುತ್ತಿದ್ದ ಹಾಗೇ ಬಿಕ್ಕಿ ಬಿಕ್ಕಿ ಅತ್ತ ಸ್ಟಾರ್ ನಟಿ, Video Viral

Ranya Rao: ಗೋಲ್ಡ್ ರಾಣಿ ರನ್ಯಾ ರಾವ್ ಪರಿಸ್ಥಿತಿ ಏನಾಗಿದೆ ನೋಡಿ: ಶಾಕಿಂಗ್ ಸುದ್ದಿ

ಎರಡೇ ವಾರದ ಹಿಂದೆ ಪಹಲ್ಗಾಮ್ ಸ್ಥಿತಿ ಹೀಗಿತ್ತು : ಭಯಾನಕ ಸತ್ಯ ಬಿಚ್ಚಿಟ್ಟ ಗಣೇಶ್ ಕಾರಂತ್

Pahalgam Terror Attack:ಪಾಕ್‌ನ ನಟ-ನಟಿಯರಿಗೂ ತಟ್ಟಿದ ಬಿಸಿ, ಫವಾದ್ ಖಾನ್ ಸಿನಿಮಾಕ್ಕಿಲ್ಲ ಬಿಡುಗಡೆ ಭಾಗ್ಯ

ಮುಂದಿನ ಸುದ್ದಿ
Show comments