Webdunia - Bharat's app for daily news and videos

Install App

ಚಿರಂಜೀವಿ 150 ನೇ ಚಿತ್ರಕ್ಕೆ ಯಾರು ಮಾಡ್ತಾರೆ ನಿರ್ದೇಶನ .. ಅವರಾ ಇವರಾ ಮತ್ತೊಬ್ಬರಾ ?

Webdunia
ಮಂಗಳವಾರ, 26 ಆಗಸ್ಟ್ 2014 (10:16 IST)
ತೆಲುಗು   ಸಿನಿಲ್ಯಾಂಡ್ ನ ಬಾದಶ ಮೆಗಾಸ್ಟಾರ್ ಚಿರಂಜೀವಿ ಅವರ 150  ನೇ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲಗಳು ಇವೆ. ಈ ಚಿತ್ರದ ನಿರ್ಮಾಣ ಅದ್ಧೂರಿ ಬಜೆಟ್ ನಲ್ಲಿ ಅಥವಾ ಅದಕ್ಕೆ ಪೂರಕ ಆಗಿರುವ ಸಂಗತಿಗಳು ದಿನೇದಿನೇ ಹೆಚ್ಚು ಆಸಕ್ತಿ ಉಂಟು ಮಾಡುತ್ತಾ ಬಂದಿದೆ ಎಂದೇ ಹೇಳ ಬಹುದಾಗಿದೆ.

ಈ ಚಿತ್ರದ ಬಗ್ಗೆ ಒಂದು ಆಸಕ್ತಿಕರ ಸಂಗತಿ ಹೊರ ಬಂದಿದೆ ಎಂದೇ ಹೇಳ ಬಹುದಾಗಿದೆ, ಅದು ನಿರ್ದೇಶನದ ಬಗ್ಗೆ. ಏಕೆಂದರೆ 150 ನೇ ಚಿತ್ರದ ಸಂಗತಿ ಅತ್ಯಂತ ಪ್ರತಿಷ್ಟೆಯ ವಿಷಯ ಆಗಿದೆ ಚಿರು ತಾರ  ಬದುಕಲ್ಲಿ. ಅವರು ರಾಜಕೀಯ ಬದುಕಲ್ಲಿ ಇಷ್ಟು ದಿನ ಹಾಯಾಗಿದ್ದರು, ಆದರೆ ಮತ್ತೆ ಬಣ್ಣ ಹಚ್ಚುತ್ತಾ ಇರುವುದರಿಂದ ಅವರ ಅಭಿಮನಿಗಳಿಗೆ ಮಾತ್ರವಲ್ಲ ಇಡಿ ಚಿತ್ರರಂಗದ ದೃಷ್ಟಿ ಆ ಚಿತ್ರದತ್ತಲೇ ಇದೆ. 
 
ಈ ಸಿನಿಮಾವನ್ನು  ನಿರ್ದೇಶನ ಮಾಡುವವರು ಯಾರು ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ವಿನಾಯಕ್, ಕೃಷ್ಣವಂಶಿ, ಬೋಯಪಾಟಿ ರಂತಹ ಟಾಪ್ ನಿರ್ದೇಶಕರು ಈಗ  ಪಟ್ಟಿಯಲ್ಲಿ ಇದ್ದಾರೆ. ಈಗ ಈ ಚೆರ್ ಗೇಂ ನಲ್ಲಿ  ಶ್ರಿನಿವಾಸ ತ್ರಿವಿಕ್ರಂ ಸಹ ಸೇರ್ಪಡೆ ಆಗಿದ್ದಾರೆ. 

ಫಿಲಿಂ ನಗರದಲ್ಲಿ ಕೇಳಿ ಬರುತ್ತಿರುವ ಸುದ್ದಿ ಪ್ರಕಾರ ಚಿರಂಜೀವಿ ಬೇರೆ ನಿರ್ದೇಶಕರಿಗಿಂತ ತ್ರಿವಿಕ್ರಂ ಬಗ್ಗೆ ಹೆಚ್ಚು ಗಮನ ನೀಡುತ್ತಿರುವ ಮುಖ್ಯ ಉದ್ದೇಶ ಏನೆಂದರೆ ಈ ಚಿತ್ರವೂ ಕೌಟುಂಬಿಕ ಕಥಾ ಹಂದರ ಹೊಂದಿರುವ ಅಂಶಗಳನ್ನು ಒಳಗೊಂಡಿರ ಬೇಕು ಎನ್ನುವ ಆಶಯ ಹೊಂದಿದ್ದಾರೆ, ಇದಕ್ಕೆ ಪೂರಕವಾಗಿ ತ್ರಿವಿಕ್ರಂ ಸೂಕ್ತ ಎಂದು ಅನ್ನಿಸಿದ ಕಾರಣದಿಂದ ಇವರು ಇದಕ್ಕೆ ಆದ್ಯತೆ ನೀಡಲು ಸಿದ್ಧ ಆಗಿದ್ದಾರೆ ಎನ್ನುವ ಸುದ್ದಿಯು ಸಹಿತ ಕೇಳಿಬರುತ್ತಿದೆ.  

 
ಈಗ ಅಲ್ಲೂ ಅರ್ಜುನ್ ಅವರ ಸಿನಿಮಾ ಸಿದ್ಧ ಮಾಡಿರುವ ತ್ರಿವಿಕ್ರಂ ಚಿರು ಅವರ ಬೇಡಿಕೆ ಮನ್ನಿಸುತ್ತಾರ ಎನ್ನುವ ಪ್ರಶ್ನೆ ಫಿಲಿಂ ನಗರವಾಸಿಗಳನ್ನು ಕಾಡಿದೆ. ನಾಗಾರ್ಜುನ ಅವರ ಕಿರಿಯ ಮಗ ಅಖಿಲ್ ಸಿನಿಮಾ ನಿರ್ದೇಶನವನ್ನು ತ್ರಿವಿಕ್ರಂ ಮಾಡ ಬೇಕು ಎನ್ನುವ ಆಶಯ ಹೊಂದಿದ್ದಾರೆ ನಾಗ್. ಆದರೆ ಈ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ತೋರಿಸಿಲ್ಲವಂತೆ ತ್ರಿವಿಕ್ರಂ. ಅಂತಹುದರಲ್ಲಿ ಈಗ ಚಿರು ಬಗ್ಗೆ ಆತನ ನಿಲುವು ಏನಿದೆ ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments