Webdunia - Bharat's app for daily news and videos

Install App

ಮಹೇಶ್ ಭಟ್ ಮುಂದಿನ ಸಿನಿಮಾದಲ್ಲಿ ಬೇಗಂ ಆಗ್ತಿದ್ದಾರೆ ವಿದ್ಯಾ ಬಾಲನ್

Webdunia
ಮಂಗಳವಾರ, 9 ಫೆಬ್ರವರಿ 2016 (11:17 IST)
ತನಗೆ ಯಾವುದೇ ರೀತಿಯ ಪಾತ್ರಗಳನ್ನು ನೀಡಲಿ ಆ ಪಾತ್ರಕ್ಕೆ ಸರಿಯಾದ ನ್ಯಾಯ ನೀಡುತ್ತೇನೆ ಅಂತಾ ತೋರಿಸಿಕೊಟ್ಟ ನಟಿ ವಿದ್ಯಾ ಬಾಲನ್. ವಿದ್ಯಾ ಈಗಾಗಲೇ ಅನೇಕ ರೀತಿಯ ಪಾತ್ರಗಳನ್ನು ನಿರ್ವಹಿಸಿರುವ ವಿದ್ಯಾ ಮಾಡಿದ ಪಾತ್ರಗಳಿಗೆಲ್ಲಾ ಅಭಿಮಾನಿಗಳಿಂದ ಭೇಷ್ ಅನ್ನಿಸಿಕೊಂಡಿದ್ದಾರೆ. ಇದೀಗ ತಮ್ಮ ವೃತ್ತಿ ಬದುಕಿನ ಮತ್ತೊಂದು ವಿಭಿನ್ನ ಪಾತ್ರಕ್ಕೆ ರೆಡಿಯಾಗಿದ್ದಾರೆ ವಿದ್ಯಾ.


 
ಹೌದು.. ಈ ಬಾರಿ ವಿದ್ಯಾ ಬೇಗಂ ಆಗೋದಕ್ಕೆ ತಯಾರಾಗಿದ್ದಾರೆ. ಮಹೇಶ್ ಭಟ್ ನಿರ್ದೇಶಿಸುತ್ತಿರುವ ಮುಂದಿನ ಸಿನಿಮಾ ಬೆಂಗಾಳಿ ಚಿತ್ರ ರಾಜ್ ಕಹಾನಿಯಲ್ಲಿ ವಿದ್ಯಾ ಬಾಲನ್ ಅವರು ಬೇಗಂ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾದಲ್ಲಿ ವೇಶ್ಯಾಗೃಹದ ಒಡತಿಯಾಗಿ ವಿದ್ಯಾ ಬಾಲನ್ ಕಾಣಿಸಿಕೊಳ್ಳುತ್ತಿದ್ದಾರೆ. ಅಂದ್ಹಾಗೆ ಇದು ತುಂಬಾ ಚಾಲೆಂಜಿಂಗ್ ಪಾತ್ರವಾಗಿರೋದರಿಂದ ವಿದ್ಯಾ ಸಿನಿಮಾದ ಪಾತ್ರಕ್ಕಾಗಿ ಈಗಿನಿಂದಲೇ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದಾರಂತೆ. ಹಾಗಾಗಿ ಸಿನಿಮಾದ ಬಗ್ಗೆ ಅವರಿಗೆ ಸಾಕಷ್ಟು ನಿರೀಕ್ಷೆಗಳಿವೆ.
 
ಈಗಾಗಲೇ ಈ ಸಿನಿಮಾದ ಕೆಲಸಗಳು ಆರಂಭವಾಗಿದ್ದು ಸಿನಿಮಾಕ್ಕೆ ಉಳಿದ ನಟ ನಟಿಯರ ಆಯ್ಕೆಯೂ ನಡೆಯುತ್ತಿದೆಯಂತೆ. ಜೂನ್ ನಲ್ಲಿ ಸಿನಿಮಾ ಸೆಟ್ಟೇರುತ್ತಂತೆ. ಇನ್ನು ಈ ಹಿಂದೆ ವಿದ್ಯಾ ಬಾಲನ್ ಅಭಿನಯಿಸಿದ ಎಲ್ಲಾ ಸಿನಿಮಾಗಳಿಗಿಂತ ವಿಭಿನ್ನವಾಗಿ ಈ ಸಿನಿಮಾದಲ್ಲಿ ವಿದ್ಯಾ ಅವರನ್ನು ನೋಡಬಹುದಂತೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments