Webdunia - Bharat's app for daily news and videos

Install App

ಕೇಂದ್ರ ಬಜೆಟ್‍ ಬಗ್ಗೆ ಬಾಲಿವುಡ್ ತೀವ್ರ ನಿರುತ್ಸಾಹ

Webdunia
ಗುರುವಾರ, 2 ಫೆಬ್ರವರಿ 2017 (11:48 IST)
ಈ ಬಾರಿಯ 2017-18ನೇ ಸಾಲಿನ ಕೇಂದ್ರ ಬಜೆಟ್ ಬಗ್ಗೆ ಬಾಲಿವುಡ್ ತೀವ್ರ ನಿರುತ್ಸಾಹ ವ್ಯಕ್ತಪಡಿಸಿದೆ. ರೈತರಿಗೆ, ಗ್ರಾಮೀಣ ಜನರಿಗೆ, ಮಧ್ಯಮವರ್ಗದ ಕುಟುಂಬದ ಬಗ್ಗೆ ಹೆಚ್ಚಾಗಿ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಯಿತು. ಆದರೆ ಸಿನಿಮಾ ಕ್ಷೇತ್ರದ ಪ್ರಸ್ತಾಪವೇ ಇಲ್ಲದಿರುವ ಬಗ್ಗೆ ಬೇಸರ ವ್ಯಕ್ತವಾಗಿದೆ.
 
ಮನರಂಜನೆ ತೆರಿಗೆ ಬಗ್ಗೆಯಾಗಲಿ, ಅಧಿಕ ಮೌಲ್ಯದ ನೋಟು ನಿಷೇಧದಿಂದ ಹೊಡೆತ ತಿಂದ ಸಿನಿಮಾ ಕ್ಷೇತ್ರದ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲದಿರುವುದು ಖೇದಕರ. ಬಜೆಟ್‌ನಲ್ಲಿ ಸಿನಿಮಾ ಕ್ಷೇತ್ರದ ಬಗೆಗಿನ ಅಸಡ್ಡೆ ಇದೇ ಮೊದಲಲ್ಲ ಎಂದು, ಕಳೆದ ಕೆಲವು ವರ್ಷಗಳಿಂದ ಇದೇ ಪರಿಸ್ಥಿತಿ ಎಂಬ ಮಾತುಗಳು ಕೇಳಿಬಂದಿವೆ.
 
2017-18ರ ಬಜಟ್ ಬಗ್ಗೆ ಬಾಲಿವುಡ್ ನಿರ್ಮಾಪಕ ಹನ್ಸಲ್ ಮೆಹತಾ ಮಾತನಾಡುತ್ತಾ, ಇದು ಸರಕಾರದ ತಪ್ಪಲ್ಲ. ಕಳೆದ 20 ವರ್ಷಗಳಿಂದ ಸಿನಿಮಾ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಅನ್ಯಾಯ ನಡೆಯುತ್ತಾ ಬಂದಿದೆ. ಸಿನಿಮಾ ಕ್ಷೇತ್ರಕ್ಕೆ ಯಾವುದೇ ಪ್ರಾಧಾನ್ಯತೆ ಇಲ್ಲದ ಈ ಬಜೆಟ್‌ ಬಗ್ಗೆ ನಾನೇನು ನಿರೀಕ್ಷಿಸುತ್ತಿಲ್ಲ.
 
ಸಿನಿಮಾ ಕ್ಷೇತ್ರಕ್ಕೆ ಸಂಬಂಧಿಸಿದವರು ಸರಕಾರಕ್ಕೆ ತೆರಿಗೆ, ಮನರಂಜನಾ ತೆರಿಗೆ ಸಲ್ಲಿಸುತ್ತಿರುವಷ್ಟು ದಿನ ಅವರಿಗೆ ಬೇರೆ ವಿಷಯ ಬೇಕಿಲ್ಲ. ಯಾಕೆಂದರೆ ನಾವು ಎಲ್ಲವನ್ನು ಅಂಗೀಕರಿಸುತ್ತೇವೆ ಎಂಬ ಉದ್ದೇಶ ಅವರದು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
 
ಜನಪ್ರಿಯ ಗಾಯಕ ಕೈಲಾಶ್ ಖೇರ್ ಬಜೆಟ್ ಬಗ್ಗೆ ಮಾತನಾಡುತ್ತಾ, ಸೃಜನಾತ್ಮಕತೆ ಇರುವ ಸಿನಿಮಾ ಕ್ಷೇತ್ರವನ್ನು ಯಾರೂ ಗಂಭೀರವಾಗಿ ಪರಿಣಸುತ್ತಿಲ್ಲ. ಈ ಕ್ಷೇತ್ರದಿಂದ ಬರುವ ಆದಾಯ ಅಧಿಕ ಮೊತ್ತ ದೇಶದ ಅಭಿವೃದ್ಧಿಗೆ ಬಳಕೆಯಾಗುತ್ತಿದ್ದರೂ ಸರಕಾರ ಕೇವಲ ಸೇವಾ ತೆರಿಗೆ ಹೆಚ್ಚಿಸುವ ಮೇಲೆ ದೃಷ್ಟಿ ಇಟ್ಟಿದೆ ಹೊರತು ನಟಿ ನಟರಿಗೆ ಬೆಂಬಲ ಕೊಡುತ್ತಿಲ್ಲ ಎಂದು ಬಜೆಟ್ ಬಗ್ಗೆ ಕಿಡಿಕಾರಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Ravi Mohan:ಸುದೀರ್ಘ ದಾಂಪತ್ಯಕ್ಕೆ ಅಂತ್ಯ ಹಾಡಿದ ಬೆನ್ನಲ್ಲೇ ಗಾಯಕಿ ಜತೆ ಪೋಸ್ ಕೊಟ್ಟ ರವಿ ಮೋಹನ್‌

Operation Sindoor:ಶೀರ್ಷಿಕೆಗಾಗಿ ಬಾಲಿವುಡ್‌ ನಿರ್ಮಾಪಕರ ಮಧ್ಯೆ ಭಾರೀ ಪೈಪೋಟಿ

Operation Sindoor: ಶಾಂತವಾಗಿರಿ, ಜಾಗರೂಕರಾಗಿರಿ, ಗೆಲುವು ನಮ್ಮದೇ: ರಾಜಮೌಳಿ ಪೋಸ್ಟ್‌

Operation Sindoor: ದೇಶಕ್ಕಾಗಿ ದಿಟ್ಟ ಹೆಜ್ಜೆಯಿಟ್ಟ ಕಮಲ್ ಹಾಸನ್, ಬೇರೆಲ್ಲ ಆಮೇಲೆ ಎಂದ ನಟ

ಚಂದನ್ ಶೆಟ್ಟಿ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸೀತಾ ವಲ್ಲಭ ಸೀರಿಯಲ್ ನಟಿ ಸುಪ್ರೀತಾ

ಮುಂದಿನ ಸುದ್ದಿ
Show comments