Select Your Language

Notifications

webdunia
webdunia
webdunia
webdunia

ಶೋ ಕಥೆ ಕೇಳಿ ಕಣ್ಣೀರು ಹಾಕಿದ ನಟಿ ಆಲಿಯಾ ಭಟ್

ಶೋ ಕಥೆ ಕೇಳಿ ಕಣ್ಣೀರು ಹಾಕಿದ ನಟಿ ಆಲಿಯಾ ಭಟ್
ಮುಂಬೈ , ಗುರುವಾರ, 25 ಆಗಸ್ಟ್ 2016 (11:48 IST)
ಮಹೇಶ್ ಭಟ್ ಮುಂದಿನ ಟಿವಿ ಶೋ 'ನಾಮಕರಣ' ಎಂಬ ಕಾರ್ಯಕ್ರಮ ತೆರೆ ಮೇಲೆ ಬರುತ್ತಲಿದೆ. ಸ್ಟಾರ್ ಪ್ಲಸ್‌ನಲ್ಲಿ ಮೂಡಿ ಬರುತ್ತಿರುವ ಈ ಶೋನ್ನು ಮಹೇಶ್ ಭಟ್ ನಿರ್ಮಾಣ ಮಾಡುತ್ತಿದ್ದಾರೆ. ನಿರ್ಮಾಪಕ ಮಹೇಶ ಭಟ್ ಇದರಿಂದ ತುಂಬಾ ಉತ್ಸುಕರಾಗಿದ್ದಾರೆ. ಇನ್ನೂ ಈ ಶೋಗಾಗಿ ಮಹೇಶ್ ಭಟ್ ಕುಟುಂಬದ ಕಡೆಯಿಂದ ಪ್ರೋತ್ಸಾಹ ಕೂಡ ಸೀಗುತ್ತಿದೆ. 

 
ಆದ್ರೆ ಮಹೇಶ ಭಟ್ ತಮ್ಮ ಪುತ್ರಿ ಆಲಿಯಾಗೆ ತುಂಬಾ ಹತ್ತಿರವಾಗಿದ್ದಾರೆ. ಈ ಶೋಗಾಗಿ ಆಲಿಯಾ ಕೂಡ ತಂದೆಗೆ ತುಂಬಾ ಹೆಲ್ಪ್ ಮಾಡುತ್ತಿದ್ದಾರೆ. ಇದಕ್ಕಾಗಿ ಸಂಪೋರ್ಟ್ ಕೂಡ ಮಾಡುತ್ತಿದ್ದಾರೆ. 
 
ವಿಶೇಷವೆಂದ್ರೆ ಆಲಿಯಾ ಭಟ್ ಅಪ್ಪ ಮಹೇಶ್ ಭಟ್‌ಗೆ ಶುಭಾಷಯ ಕೂಡ ಹೇಳಿದ್ದಾರೆ.  ಶೋ ಕಥೆಯನ್ನು ಮಹೇಶ್ ಭಟ್ ಆಲಿಯಾಗೆ ಓದಿ ಹೇಳಿದ್ದರು. ಕಥೆಯಲ್ಲಿರುವ ಒಂದು ಲೈನ್ ಕೇಳಿ ಆಲಿಯಾ ತುಂಬಾ ಪ್ರಭಾವಿತಳಾಗಿದ್ದರಂತೆ. ಒಂದು ಹುಡುಗಿ ಹೆಸರು ತಂದೆಯಿಂದ ಪರಿಚಿತವಾಗಿದ್ರೆ, ಮತ್ತೊಂದು ಗಂಡನ ಹೆಸರಿನಿಂದ ಪರಿಚಿತವಾಗಿರುತ್ತದೆ. 
 
ಇದಕ್ಕಾಗಿ ಆಲಿಯಾ ತುಂಬಾ ಎಮೋಷನಲ್ ಆಗಿದ್ದಾರಂತೆ. ಇಂಥ ಶೋ ನಿರ್ಮಾಣ ಮಾಡುತ್ತಿರುವುದಕ್ಕೆ ಅಪ್ಪನ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾಳೆ ಆಲಿಯಾ. ಇದೇ ಅವಳಿಗೆ ಎಮೋಷನಲ್ ಆಗುವಂತೆ ಮಾಡಿತ್ತು. ಇನ್ನೂ ಈ ಕಾರ್ಯಕ್ರಮ ಸೆಪ್ಟೆಂಬರ್ 12ರಂದು ಆರಂಭವಾಗಲಿದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 

Share this Story:

Follow Webdunia kannada

ಮುಂದಿನ ಸುದ್ದಿ

ನಿಜ ಜೀವನದಲ್ಲೂ ಮಾನವೀಯತೆಗೆ ಸಾಕ್ಷಿಯಾದ ನಟ ನಟಿಯರು