Webdunia - Bharat's app for daily news and videos

Install App

ಪ್ರಭಾಸ್`ಗಿಂತಲೂ ದೊಡ್ಡ ಹೆಸರು ಮಾಡುವ ಅವಕಾಶ ಕಳೆದುಕೊಂಡ ಶ್ರೀದೇವಿ: ರಾಮ್ ಗೋಪಾಲ್ ವರ್ಮಾ

Webdunia
ಮಂಗಳವಾರ, 9 ಮೇ 2017 (11:08 IST)
ಭಾರತೀಯ ಚಿತ್ರರಂಗದಲ್ಲೇ ಬಿಗ್ ಹಿಟ್ ಎನ್ನಲಾಗುತ್ತಿರುವ ಬಾಹುಬಲಿ ಮತ್ತು ಬಾಹುಬಲಿ-2 ಚಿತ್ರದಲ್ಲಿ ಅತ್ಯಂತ ಪರಿಣಾಮಕಾರಿ ಪಾತ್ರಗಳಲ್ಲಿ ಶಿವಗಾಮಿ ಪಾತ್ರವೂ ಒಂದು. ರಾಜಮಾತೆಯಾಗಿ ರಮ್ಯಾಕೃಷ್ಣ ನಟನೆ ಜನಮನ್ನಣೆ ಗಳಿಸಿದೆ. ಚಿತ್ರದಲ್ಲಿ ಅತ್ಯಂತ ಗಮನ ಸೆಳೆವ ಈ ಪಾತ್ರಕ್ಕೆ ರಾಜಮೌಳಿ ಶ್ರೀದೇವಿ ಆಫರ್ ಕೊಟ್ಟಿದ್ದರು. ಆದರೆ, ಸಂಭಾವನೆ ಹೆಚ್ಚು ಕೇಳಿದ್ದರಿಂದ ರಮ್ಯಾ ಕೃಷ್ಣರನ್ನ ಆಯ್ಕೆ ಮಾಡಲಾಯ್ತು ಎಂಬ ಮಾತುಗಳಿವೆ.

ಈ ಬಗ್ಗೆ ಟ್ವಿಟ್ಟರ್`ನಲ್ಲಿ ಪ್ರತಿಕ್ರಿಯಿಸಿರುವ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಶ್ರೀದೇವಿ ಬಾಹುಬಲಿ-2 ಚಿತ್ರದಲ್ಲಿ ನಟಿಸಲಿಲ್ಲ ಎಂಬುದು ನನಗೆ ಅಚ್ಚರಿ ಎನಿಸುತ್ತಿದೆ. ಆಕೆಯ ಸುದೀರ್ಘ ವೃತ್ತಿ ಜೀವನಕ್ಕೆ ಈ ಚಿತ್ರ ಮುಕುಟಪ್ರಾಯವಾಗಿರುತ್ತಿತ್ತು. ಇಂಗ್ಲೀಷ್ ವಿಂಗ್ಲೀಷ್ ಬಳಿಕ ದೊಡ್ಡ ಹೆಸರು ಮಾಡುವ ಅವಕಾಶ ಶ್ರೀದೇವಿ ಕಳೆದುಕೊಂಡುಬಿಟ್ಟರು. ಪ್ರಭಾಸ್`ಗಿಂತಲೂ ದೊಡ್ಡ ಹೆಸರು ಬರುತ್ತಿತ್ತು ಎಂದು ಟ್ವೀಟ್ ಮಾಡಿದ್ದಾರೆ.

ರಾಜಮೌಳಿ ಮನಸ್ಸಿನಲ್ಲಿ ಶಿವಗಾಮಿ ಪಾತ್ರಕ್ಕೆ ಶ್ರೀದೇವಿ ಹೆಸರು ಇತ್ತು. ರಾಘವೇಂದ್ರ ರಾವ್ ಮೂಲಕ ಶ್ರೀದೇವಿಯನ್ನ ಸಂಪರ್ಕಿಸಲಾಗಿತ್ತು. ಶ್ರೀದೇವಿ ಆ ಪಾತ್ರಕ್ಕೆ 5 ಕೋಟಿ ರೂ. ಸಂಭಾವನೆ ಕೇಳಿದ್ದರಂತೆ. ಹೀಗಾಗಿ, ಅವರ ಹೆಸರನ್ನ ಕೈಬಿಟ್ಟು 2.5 ಕೋಟಿ ರೂ. ಸಂಭಾವನೆ ಕೊಟ್ಟು ರಮ್ಯಾಕೃಷ್ಣಗೆ ಶಿವಗಾಮಿ ಪಾತ್ರ ನೀಡಲಾಯ್ತು ಎಂಬ ಸುದ್ದಿ ಇದೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments