Webdunia - Bharat's app for daily news and videos

Install App

ಶ್ವೇತಾ ಬಸು ಪ್ರಸಾದ್ ಈಗೇನು ಮಾಡುತ್ತಿದ್ದಾರೆ?

Webdunia
ಬುಧವಾರ, 1 ಮಾರ್ಚ್ 2017 (15:00 IST)
ಶ್ವೇತಾ ಬಸು ಪ್ರಸಾದ್ ವೃತ್ತಿಬದುಕು ಇನ್ನೇನು ಮುಗಿದೇ ಹೋಯಿತು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಈಗ ಮತ್ತೆ ಅವರು ಧೂಳೆಬ್ಬಿಸಲು ತಯಾರಾಗಿದ್ದಾರೆ. ಈ ಜಾರ್ಖಂಡ್ ಸುಂದರಿ ಈಗ ಮತ್ತೆ ಎರಡನೇ ಇನ್ನಿಂಗ್ಸ್ ಶುರುಮಾಡಿದ್ದಾರೆ.
 
ಟಾಲಿವುಡ್‌ನಲ್ಲಿ ಸಖತ್ ಬಿಜಿಯಾಗಿದ್ದ ಈ ಬೆಡಗಿ ಹೆಸರು ವೇಶ್ಯಾವಾಟಿಕೆ ಜಾಲದಲ್ಲಿ ಕೇಳಿಬಂದ ಬಳಿಕ ಚಿತ್ರೋದ್ಯಮ ಬೆಚ್ಚಿಬಿದ್ದಿತ್ತು. ಆ ಬಳಿಕ ಆ ಪ್ರಕರಣ ರದ್ಧಾಗಿ ಮುಂಬೈಗೆ ಹೋಗಿ ಸೆಟ್ಲ್ ಆಗಿದ್ದರು ಶ್ವೇತಾ. ಕೈಯಲ್ಲಿ ಚಿತ್ರಗಳಿಲ್ಲದ ಕಾರಣ ಹಾಗೂ ಕೆಲಸವಿಲ್ಲದೆ ಮೈತೂಕ ಹೆಚ್ಚಾಗಿತ್ತು. ಮತ್ತೆ ಯೋಗ, ವ್ಯಾಯಾಮದ ಮೂಲಕ ಬಳುಕುವ ಬಳ್ಳಿಯಂತೆ ತಯಾರಾಗಿದ್ದರು.
 
ಇದೀಗ ಹಿಂದಿಯ ಐತಿಹಾಸಿಕ ಧಾರಾವಾಹಿ ’ಚಂದ್ರನಂದಿನಿ’ಯಲ್ಲಿ ಮುಖ್ಯಪಾತ್ರದಲ್ಲಿ ಅಭಿನಯಿಸುವ ಛಾನ್ಸ್ ಹೊಡೆದಿದ್ದಾರೆ. ಧಾರಾವಾಹಿ ಜತೆಗೆ ಬಾಲಿವುಡ್‍ನಲ್ಲಿ ತಯಾರಿಸಿದ ಬಿಗ್ ಬಜೆಟ್ ಸಿನಿಮಾ ಬದ್ರಿನಾಥ್ ಕಿ ದುಲ್ಹನಿಯಾದಲ್ಲೂ ಸಣ್ಣ ಪಾತ್ರ ಪೋಷಿಸಿದ್ದ ಶ್ವೇತಾ ಈಗ ಮತ್ತೆ ಟಾಲಿವುಡ್ ಕಡೆಗೆ ಗಮನಹರಿಸಿದ್ದಾರೆ.
 
ಈಕೆಯ ಹೊಸ ಲುಕ್ ನೋಡಿದ ಟಾಲಿವುಡ್ ಮಂದಿ ಶಾಕ್ ಆಗಿದ್ದಾರೆ. ಬಳುಕುವ ಬಳ್ಳಿಯಂತಿರುವ ಈಕೆ ಎಲ್ಲರನ್ನೂ ಹಾಗೆಯೇ ಸೆಳೆದಿದ್ದಾರೆ. ಈ ಮೂಲಕ ಶ್ವೇತಾಗೆ ಮತ್ತೆ ಅವಕಾಶಗಳ ಬಾಗಿಲು ತೆರೆದುಕೊಂಡಿದೆ ಎಂದೇ ಭಾವಿಸಲಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಆಂಡ್ ಗ್ಯಾಂಗ್ ತೀರ್ಪು ಮತ್ತೆ ಮುಂದೂಡಿಕೆ

ಬಿಕ್ಲು ಶಿವು ಮರ್ಡರ್ ಕೇಸ್ ಆರೋಪಿಗಿದೆಯಾ ಸ್ಯಾಂಡಲ್ ವುಡ್ ತಾರೆಯರ ನಂಟು

ದರ್ಶನ್ ಜಾಮೀನು ತೀರ್ಪು ಇಂದು: ಸುಪ್ರೀಂಕೋರ್ಟ್ ನಲ್ಲಿ ದಾಸನ ಭವಿಷ್ಯ ಏನಾಗುತ್ತದೆ

ಚಿತ್ರೀಕರಣದ ವೇಳೆ ಶಿಲ್ಪಾ ಶಿರೋಡ್ಕರ್ ಗುಂಡಿಕ್ಕಿ ಸಾವು: ಪ್ರಚಾರದ ಗಿಮಿಕ್‌ಗೆ ಮನೆಯವರೆಲ್ಲರೂ ಶಾಕ್ ಎಂದ ನಟಿ

ದೊಡ್ಡ ಅಪಘಾತದಿಂದ ಜಸ್ಟ್‌ ಎಸ್ಕೇಪ್ ಆದ ನಟ ಅಜಿತ್‌ರ ನಂತರದ ನಡೆಗೆ ಫ್ಯಾನ್ಸ್ ಫುಲ್ ಶಾಕ್‌

ಮುಂದಿನ ಸುದ್ದಿ
Show comments