ಮಂಡ್ಯ ಅಲ್ಲದೇ ಇಡೀ ರಾಜ್ಯದಲ್ಲಿ ಕಾವೇರಿ ಹೋರಾಟ ಜೋರಾಗಿದೆ. ಕಾವೇರಿ ಜೀವನದಿ ಹೋರಾಟದಲ್ಲಿ ಇಡೀ ಜನರು ಹಾಗೂ ಸ್ಯಾಂಡಲ್ವುಡ್ನ ನಟ -ನಟಿಯರು ಭಾಗಿಯಾಗಿದ್ರೆ, ಇತ್ತ ಮಾಜಿ ಸಂಸದೆ ನಟಿ ರಮ್ಯಾ ಸುಳಿವಿಲ್ಲ. ರಾಜ್ಯದೆಲ್ಲೆಡೆ ಜನರು, ಚಿತ್ರರಂಗದ ಕಲಾವಿದರು ಭಾಗಿಯಾಗಿದ್ರೆ ರಮ್ಯಾ ಮಾತ್ರ ಇದುವರೆಗೂ ಪ್ರತಿಭಟನೆಯಲ್ಲಿ ಭಾಗಿಯಾಗಿಲ್ಲ.
ಪ್ರತಿಭಟನೆಯಲ್ಲಿ ರಮ್ಯಾ ಭಾಗಿಯಾಗದ ಹಿನ್ನೆಲೆ ಕೆಲೆವೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ರಮ್ಯಾ ಮೇಡಂ ಎಲ್ಲಿದ್ದೀರಾ. ಯಾವಾಗ ಹೋರಗೆ ಬರುತ್ತೀರಾ ಎಂದು ಮಾಜಿ ಸಂಸದೆ ರಮ್ಯಾ ವಿರುದ್ಧ ಜನರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.
ಮಂಡ್ಯ ರೈತರ ಜತೆಯಲ್ಲೂ ರಮ್ಯಾ ಕಾಣಿಸಿಕೊಂಡಿಲ್ಲ. ರಾಜ್ಯದಲ್ಲಿ ಹೋರಾಟ ನಡೆದ್ರು ರಮ್ಯಾಗೆ ಅರಿವಿಲ್ಲ. ಹೋರಾಟದಲ್ಲಿ ಭಾಗಿಯಾಗಲು ನಿಮಗೆ ಸೆಕ್ಯೂರಿಟಿ ಬೇಕಾ? ಎಂದು ಪ್ರಶ್ನೆ ಮೂಡಿದೆ.
ಇನ್ನೂ ನನಗೆ ಪೊಲೀಸ್ ರಕ್ಷಣೆ ಕೊಟ್ಟರೆ ಮಾತ್ರ ಪ್ರತಿಭಟನೆಯಲ್ಲಿ ಭಾಗಿಯಾಗ್ತೀನಿ ಎಂದು ರಮ್ಯಾ ಮೊನ್ನೆ ಹೇಳಿದ್ರು. ಇದರಿಂದ ವ್ಯಾಪಕ ಆಕ್ರೋಶ ವ್ಯ.ಕ್ತವಾಗಿತ್ತು. ಜನರ ಬಳಿ ಬರಲು ಯಾವ ಭದ್ರತೆ ಬೇಕಿಲ್ಲ ಎದು ನಟ ದರ್ಶನ ಕೂಡ ಟಾಂಗ್ ನೀಡಿದ್ದರು.
ಇನ್ನೂ ಕಾವೇರಿ ನೀರಿಗಾಗಿ ಕರ್ನಾಟಕ ಬಂದ್ ಹಿನ್ನೆಲೆ ಕನ್ನಡ ಚಿತ್ರರಂಗದ ಇಡೀ ತಾರಾ ಬಳಿಕವೇ ಹೋರಾಟದಲ್ಲಿ ಭಾಗಿಯಾಗಿದೆ. ಬೆಂಗಳೂರಿನ ಚಲನಚಿತ್ರ ಮಂಡಳಿ ಎದರು ಇಡೀ ಚಿತ್ರರಂಗವೇ ಪ್ರತಿಭಟನೆ ಕೂತಿದೆ. ಕರ್ನಾಟಕ್ ಬಂದ್ಗೆ ಚಿತ್ರರಂಗವೇ ಸಾಥ್ ನೀಡುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ