Webdunia - Bharat's app for daily news and videos

Install App

ಅಂದು ಅನುಷ್ಕಾ ಜೊತೆ ಏನಾಯ್ತು ಗೊತ್ತೆ?

Webdunia
ಸೋಮವಾರ, 21 ಏಪ್ರಿಲ್ 2014 (10:28 IST)
ಅಂದು ಅನುಷ್ಕಾ ಶರ್ಮ ನಟನೆಯ ಹೊಸ ಚಿತ್ರ ಎನ್ವಿಚ್ 10 . ಇದರ ಚಿತ್ರೀಕರಣ ರಾಜಸ್ತಾನದಲ್ಲಿ  ನೆರವೇರುತ್ತಿದೆ. ಇತ್ತೀಚೆಗೆ ಆ ಚಿತ್ರದ ನಿರ್ದೇಶಕ ನವದೀಪ್ಸಿಂಗ್  ನಟಿ ಅನುಷ್ಕಳಿಗೆ ಪಾತ್ರದ ವಿವರಣೆ ನೀಡಿದರು. ಸರಿ ಇನ್ನೇನು ನಟಿಸ ಬೇಕು ಅನ್ನುವಷ್ಟರಲ್ಲಿ ಸಣ್ಣ ಪ್ರಮಾಣದ ಗಾಳಿ ಆರಂಭ ಆಯಿತಂತೆ.
 
ಅದು ಎಲ್ಲರ ಮನಕ್ಕೆ ಆಹ್ಲಾದ ನೀಡಿತು.. ಅದರ ಸವಿಯನ್ನು ಸವಿಯುತ್ತಾ ಇದ್ದವರಿಗೆ ಆ ಗಾಳಿ ಪ್ರಮಾಣ ಮತ್ತಷ್ಟು ಹೆಚ್ಚಾದಾಗಲೂ ಏನೂ ಅನ್ನಿಸಲಿಲ್ಲ. ಆದರೆ ಅದರ ರಭಸ ಅದೆಷ್ಟು ಹೆಚ್ಚಾಯಿತು ಅಂದರೆ ಅಲ್ಲಿದ್ದ ಸಿನಿಮಾ ಯೂನಿಟ್ ನವರಿಗೆ ಏನು ಮಾಡ ಬೇಕು ಎಂದು ತಿಳಿಯದ ಪರಿಸ್ಥಿತಿ.
 
ಅಂದರೆ ಆ ಗಾಳಿ ಸುಂಟರಗಾಳಿಯಾಗಿ ಬದಲಾಗಿತ್ತು. ಅರ್ಧಗಂಟೆ ನಿರಂತರವಾಗಿ ಬೀಸಿ ಆ ಬಳಿಕ ತಣ್ಣಗಾಯಿತಂತೆ. ಆ ಸಮದಲ್ಲಿ ಎಲ್ಲರು ದಿಕ್ಕಾಪಾಲಾಗಿ ಬಿಟ್ಟಿದ್ದರಂತೆ. ಈ ಅನುಭವದ ಬಗ್ಗೆ ಅನುಷ್ಕ ಶರ್ಮ ಟ್ವೀಟ್ ಮಾಡಿ ತಿಳಿಸಿದ್ದಾಳೆ. ಒಂದು ಪುಟ್ಟ ಪ್ರಮಾಣದ ಗಾಳಿ ಅತಿ ದೊಡ್ಡ ಸುಂಟರ ಗಾಳಿ ಆಗಿ ಬದಲಾಯಿತು. ಯೂನಿಟ್ ಸದಸ್ಯರೆಲ್ಲರೂ ಆ ಗಾಳಿಯಿಂದ ದಿಕ್ಕಾಪಾಲಾದರು. ಹಾರಿ ಬರುತ್ತಿದ್ದ ಮರಳಿನಿಂದ ಅವರ ದೇಹವು ದಣಿದು ಹೋಯಿತು.ಎಲ್ಲರು ಎಲ್ಲೆಲ್ಲೊ ಬಿದ್ದಿದ್ದರು. ಒಂದು ಸ್ವಲ್ಪ ಸಮಯ ಆದ ಬಳಿಕ ಆ ಗಾಳಿಯು ತನ್ನ ಆರ್ಭಟ ನಿಲ್ಲಿಸಿತು . ಈ ತಿಂಗಳ 17  ಎಂದಿಗೂ ಮರೆಯಲಾಗದ ದಿನ ಎನ್ನುವ ಮಾತನ್ನು ಹೇಳಿದ್ದಾಳೆ ಆಕೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments