ಸಿಲ್ಲಿ ಲಲ್ಲಿ ಧಾರವಾಹಿ ಮೂಲಕ ಮನೆ ಮಾತಾಗಿದ್ದ ಮಿತ್ರ ಅವರು ಸೀರಿಯಲ್ ಮುಗಿದ ಬಳಿಕ ಮಾಯವಾಗಿ ಬಿಟ್ಟಿದ್ದರು. ಮಿತ್ರ ಅವರು ಎಲ್ಲಿದ್ದಾರೆ ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದ್ದು ಅವರು ಬಿಗ್ ಬಾಸ್ ಮನೆಗೆ ಬಂದಾಗಲೇ. ಬಿಗ್ ಬಾಸ್ ಶೋದ ಬಳಿಕ ಅವರ ಲೈಫೇ ಬದಲಾಗಿ ಹೋಗಿದೆ. ಇದೀಗ ಮಿತ್ರ ಸಿನಿಮಾದತ್ತ ವಾಲಿದ್ದಾರೆ,
ಮಿತ್ರ ಎಂಟರ್ಟೈನ್ಮೆಂಅಟ್ ಸಿನಿ ಕ್ರಿಯೇಷನ್ಸ್ ಎಂಬ ಸಂಸ್ಥೆಯನ್ನು ಹುಟ್ಟುಹಾಕಿರುವ ಅವರು, ಇನ್ನೂ ಹೆಸರಿಡದ ಚಿತ್ರದ ಮೂಲಕ ನಿರ್ಮಾಪಕರಾಗುತ್ತಿದ್ದಾರೆ. 'ಸ್ಟೈಲ್ ಕಿಂಗ್' ಚಿತ್ರವನ್ನು ಬರೆದು ನಿರ್ದೇಶಿಸಿದ್ದ ಪಿ.ಸಿ.ಶೇಖರ್, ಈ ಚಿತ್ರಕ್ಕೂ ಕಥೆ ಬರೆದು ನಿರ್ದೇಶಿಸುತ್ತಿದ್ದಾರಂತೆ. ಈ ಸಿನಿಮಾಕ್ಕೆ ಶೇಖರ್ ಹೇಳಿದ ಕಥೆಯೇ ಈ ಚಿತ್ರಕ್ಕೆ ಸ್ಫೂರ್ತಿಯಂತೆ.
ಆ ಕಥೆ ಕೇಳುತ್ತಿದ್ದಂತೆಯೇ, ತಾವೇ ಚಿತ್ರವನ್ನು ನಿರ್ಮಿಸುವ ನಿರ್ಧಾರಕ್ಕೆ ಬಂದರಂತೆ ಮಿತ್ರ. ಈ ಚಿತ್ರ ಎರಡು ಪ್ರಮುಖ ಪಾತ್ರಗಳ ಸುತ್ತ ಸುತ್ತಲಿದ್ದು, ಎರಡೂ ಪಾತ್ರಗಳಿಗೆ ಕಣ್ಣು ಕಾಣುವುದಿಲ್ಲವಂತೆ. ಮಿತ್ರ ಒಂದು ಪಾತ್ರದಲ್ಲಿದ್ದರೆ, ಇನ್ನೊಂದು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಭಾಮ.
ಈ ಸಿನಿಮಾಕ್ಕೆ ಅರ್ಜುನ್ ಜನ್ಯಾ ಸಂಗೀತ ಸಂಯೋಜಿಸುತ್ತಿದ್ದಾರಂತೆ. ಇನ್ನು ಮಿತ್ರ ಜೊತೆಗೆ ಕುಮಾರ್ ಮತ್ತು ಮಂಜುನಾಥ್ ಎನ್ನುವವರು ಚಿತ್ರಕ್ಕೆ ಹಣ ಹಾಕುವುದಕ್ಕೆ ಮುಂದೆ ಬಂದಿದ್ದಾರೆ. ಇನ್ಮುಂದೆ ವರ್ಷಕ್ಕೆ ಒಂದಾದರೂ ಚಿತ್ರವನ್ನು ಈ ಸಂಸ್ಥೆಯ ಮೂಲಕ ಮಾಡುವುದು ಮಿತ್ರ ಮತ್ತು ಅವರ ಗೆಳೆಯರ ಪ್ಲಾನ್ ನಂತೆ. ನಮ್ಮ ಕಡೆಯ ಅವರಿಗೆ ಆಲ್ ದಿ ಬೆಸ್ಟ್.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ