ದಕ್ಷಿಣ ಭಾರತದ ನಟರಾದ ಪವನ್ ಕಲ್ಯಾಣ್, ಸೂರ್ಯ ಹಾಗೂ ಪೃಥ್ವಿರಾಜ್ ಸೇರಿದಂತೆ ಬಾಲಿವುಡ್ ನಟರಾದ ರಿತೇಶ್ ದೇಶಮುಖ್, ಜಾನ್ ಅಬ್ರಾಹಂ,ಅನೇಕರು ಮುಂಬೈ ಚಿತ್ರ ಫೆಸ್ಟಿವಲ್ಗೆ ಕೈ ಜೋಡಿಸಿದ್ದಾರೆ. ಮುಂಬೈ ಅಕಾಡೆಮಿ ಆಫ್ ಮೂವೀಂಗ್ ಇಮೇಜ್ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ.
ನಿರ್ಮಾಪಕರುಗಳ ಚಿತ್ರಗಳ ಕಲಾ ವೈವಿಧ್ಯಮಯ ಹಾಗೂ ಟ್ಯಾಲೆಂಟ್ನ್ನು ಬೆಳಕಿಗೆ ತರುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಇದಕ್ಕಾಗಿ ದೇಶದಲ್ಲಿ ಚಿತ್ರ ನಿರ್ಮಾಪಕರನ್ನ ಚಿತ್ರಗಳಿಗೆ ಬೆಂಬಲ ನೀಡಲು ನಾನು ಕೂಡ ಭಾಗಿಯಾಗಿರುವುದಕ್ಕೆ ತುಂಬಾ ಸಂತಸವಾಗುತ್ತಿದೆ ಎಂದು ಅನುಪಮ್ ಛೋಪ್ರಾ ತಿಳಿಸಿದ್ದಾರೆ. ಅದಲ್ಲದೇ ದಕ್ಷಿಣ ಭಾರತದ ನಾಯಕರಾದ ಪವನ್ ಕಲ್ಯಾಣ್,ಸೂರ್ಯ,ಪೃಥ್ವಿರಾಜ್ ಕೂಡ ಕೈ ಜೋಡಿಸಿದ್ದಾರೆ.
ಇನ್ನೂ ಕಳೆದ ವರ್ಷ ಆಲಿಯಾ ಭಟ್,ರಣಬೀರ್ ಕಪೂರ್, ವಿಧು ವಿನೋದ್ ಛೋಪ್ರಾ, ರಾಜಕುಮಾರ್ ಹಿರಾನಿ ಹಾಗೂ ಚೈತನ್ಯ ಭಾಗಿಯಾಗಿದ್ದರು. ಮುಂಬೈ ಅಕಾಡೆಮಿ ಆಫ್ ಮೂವೀಂಗ್ ಇಮೇಜ್ಗೆ ರಣಬೀರ್ ಸಿಂಗ್, ಅನುಷ್ಕಾ ಶರ್ಮಾ,ಸೂರ್ಯ ಎಲ್ಲರೂ ಬೆಂಬಲ ನೀಡಿದ್ದರು. ಚಿತ್ರ ಫೆಸ್ಟಿವಲ್ ಅಗಸ್ಟ್ 10ಕ್ಕೆ ಕೊನೆಗೊಳ್ಳಲಿದೆ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ