ಭಾರತದ ಚಿತ್ರರಂಗದಲ್ಲಿ ಕಲಾವಿದರಿಗೆ ಮುಕ್ತ ಅವಕಾಶವಿದೆ. ಇಲ್ಲಿ ಯಾರು ಬಂದಾದರು ನಟಿಸಲು ಅವಕಾಶವಿದೆ. ಆದ್ರೆ ದೇಶದಲ್ಲಿ ಕೆಲಸ ಮಾಡಲು ಯಾರಿಗೆ ಅವಕಾಶ ನೀಡಬೇಕು ಎಂದು ಬಾಲಿವುಡ್ ನಟ ಸೈಫ್ ಅಲಿ ಖಾನ್ ತಿಳಿಸಿದ್ದಾರೆ. ಉರಿ ದಾಳಿಯಿಂದಾಗಿ ಭಾರತದಲ್ಲಿ ಪಾಕ್ ಕಲಾವಿದರನ್ನು ನಿಷೇಧಿಸಬೇಕು ಎಂದು ಎಂಎನ್ಎಸ್ ಕರೆ ನೀಡಿದೆ.
ಅಲ್ಲದೇ ಪಾಕಿಸ್ತಾನ ಕಲಾವಿದರು ದೇಶ ತೊರೆಯದಿದ್ದಲಿ ಅಂಥ ಕಲಾವಿದರ ಚಿತ್ರಗಳಿಗೆ ಅಡ್ಡಿಪಡಿಸುತ್ತೇವೆ ಎಂದು ಎಂಎನ್ಎಸ್ ಧಮಕಿ ಹಾಕಿತ್ತು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸೈಫ್, ಭಾರತೀಯ ಚಿತ್ರರಂಗ ಎಲ್ಲಾ ಪ್ರತಿಭೆಗಳಿಗೆ ಮುಕ್ತ ಅವಕಾಶ ನೀಡಿದೆ. ಕಾಲಾವಿದರು ಶಾಂತಿ ಸಂದೇಶ ನೀಡುತ್ತಾರೆ. ಈ ದೇಶದಲ್ಲಿ ಯಾರಿಗೆ ಕೆಲಸ ಮಾಡಲು ಅವಕಾಶ ನೀಡಬೇಕು ಎಂದು ಸರ್ಕಾರ ನಿರ್ಧರಿಸಲಿದೆ ಎಂದಿದ್ದಾರೆ. ಈ ನಡುವೆ ಫವಾದ್ ಖಾನ್ ಸದ್ದಿಲ್ಲದೇ ದೇಶ ತೊರೆದಿದ್ದಾರೆ ಎಂಬ ವದಂತಿ ಹರಡಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ