Webdunia - Bharat's app for daily news and videos

Install App

ಪಂಚತಾರಾ ಹೋಟೆಲ್‌ನಲ್ಲಿ ಪ್ರಭುದೇವ ಜತೆ ನಯನತಾರಾ!

Webdunia
ಶನಿವಾರ, 31 ಡಿಸೆಂಬರ್ 2016 (11:03 IST)
ನೃತ್ಯ ನಿರ್ದೇಶಕ, ನಟ, ದಿಗ್ದರ್ಶಕ ಪ್ರಭುದೇವ ಮತ್ತು ನಯನತಾರಾ ನಡುವಿನ ಪ್ರೇಮಾಯಣ ರಾಮಾಯಣ ಎಲ್ಲರಿಗೂ ಗೊತ್ತಿರುವುದೇ. ಪ್ರಭುದೇವ ಆಕ್ಷನ್ ಕಟ್ ಹೇಳಿದ್ದ ವಿಲ್ಲು ಚಿತ್ರದಲ್ಲೇ ನಯನತಾರಾ ನಾಯಕಿಯಾಗಿದ್ದರು. ಆಗಲೇ ಇವರಿಬ್ಬರ ನಡುವೆ ಮೊಳೆದದ್ದು ಪ್ರೇಮ ಬೀಜ.
 
ನಯನತಾರಾಳಿಗಾಗಿ ತನ್ನ ಪತ್ನಿ ರಾಮಲತಾಗೆ ಸೋಡಚೀಟಿ ಕೊಟ್ಟಿದ್ದ ಪ್ರಭುದೇವ. ಕ್ರಿಶ್ಚಿಯನ್ ಸಮುದಾಯದ ನಯನತಾರಾ ಪ್ರಭುಗಾಗಿ ಹಿಂದೂ ಧರ್ಮಕ್ಕೆ ಮತಾಂತಗೊಂಡಿದ್ದರು. ಆಮೇಲೆ ಇವರಿಬ್ಬರ ನಡುವೆ ಅದೇನಾಯಿತೋ ಏನೋ ಮನಸ್ಥಾಪದ ಕಾರಣ ನಾನೊಂದು ತೀರ ನೀನೊಂದು ತೀರ ಎಂಬಂತಾದರು.
 
ಪ್ರಭುದೇವ ಬಾಲಿವುಡ್‍ನಲ್ಲಿ ಬಿಜಿಯಾದ. ನಯನತಾರಾ ದಕ್ಷಿಣದಲ್ಲಿ ನಂಬರ್ ಒನ್ ನಟಿಯಾಗಿ ಗುರುತಿಸಿಕೊಂಡರು. ಈ ನಡುವೆ ವಿಘ್ನೇಶ್ ಶಿವ ಅನ್ನೋ ನಿರ್ದೇಶಕನ ಜತೆ ಸಹಜೀವನ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತು. ಅದಕ್ಕೆ ಸಂಬಂಧ ಪಟ್ಟ ಫೋಟೋಗಳು ತೇಲಾಡಿದವು. 
 
ವಿಷಯ ಹೀಗಿರಬೇಕಾದರೆ ಇತ್ತೀಚೆಗೆ ನಯನತಾರಾ ಮತ್ತು ಪ್ರಭುದೇವ ಪಂಚತಾರಾ ಹೋಟೆಲ್ ಒಂದರಲ್ಲಿ ಮುಖಮುಖಿಯಾಗಿದ್ದಾರೆ. ಆಗ ಇಬ್ಬರೂ ಮನಸ್ಸು ಬಿಚ್ಚಿ ಮಾತನಾಡಿಕೊಂಡಿದ್ದಾರೆ. ಕೋಡಂಬಾಕಂನಲ್ಲಿ ಸದ್ಯಕ್ಕೆ ಇದೊಂದು ಹಾಟ್ ಟಾಪಿಕ್ ಆಗಿದ್ದು ಗುಸುಗುಸು ಮಾತುಗಳು ಕೇಳಿಬರುತ್ತಿವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments