Webdunia - Bharat's app for daily news and videos

Install App

ಸಂಗೀತ ಸಂಯೋಜಕ ಆದೇಶ್‌‌ ಶ್ರೀವಾಸ್ತವ್‌ ನಿಧನ

Webdunia
ಶನಿವಾರ, 5 ಸೆಪ್ಟಂಬರ್ 2015 (10:32 IST)
ಬಾಲಿವುಡ್‌‌ನ ಪ್ರಖ್ಯಾತ ಸಂಗೀತ ಸಂಯೋಜಕ ಆದೇಶ್‌‌ ಶ್ರೀವಾಸ್ತವ್‌ (51) ಅವರು ಶುಕ್ರವಾರ- ಶನಿವಾರದ ನಡುವಿನ ರಾತ್ರಿ 12.30 ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಕ್ಯಾನ್ಸರ್‌‌ನಿಂದ ಬಳಲುತ್ತಿದ್ದ ಅವರ ಆರೋಗ್ಯ ತೀರ ಹದಗೆಟ್ಟಿದ್ದರಿಂದ ಮುಂಬೈನ ಕೊಕಿಲಾಬೆನ್‌‌ ಧೀರೂಬಾಯಿ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕಳೆದ 40 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಅವರು ಇಂದು 12.30ರ ಸುಮಾರಿಗೆ ನಿಧನರಾಗಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ಖಚಿತ ಪಡಿಸಿದ್ದಾರೆ. ಕಾಯಿಲೆ ಕೊನೆಯ ಹಂತಕ್ಕೆ ತಲುಪಿದ್ದರಿಂದ ಆದೇಶ್‌‌ ಅವರಿಗೆ ಕಿಮೊತೆರಪಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಕೆಲದಿನಗಳಿಂದ ಕಿಮೊತೆರಪಿ ಚಿಕಿತ್ಸೆಗೆ ಅವರು  ಸ್ಪಂದಿಸದ ಕಾರಣ ಅದನ್ನು ನಿಲ್ಲಿಸಲಾಗಿತ್ತು ಎಂದು ಆದೇಶ್ ಹತ್ತಿರದ ಸಂಬಂಧಿಯೊಬ್ಬರು ಹೇಳಿದ್ದಾರೆ. 
 
2010ರಲ್ಲಿ ಅವರಿಗೆ ಮಲ್ಟಿಪಲ್ ಮೈಲೋಮಾ (ಪ್ಲಾಸ್ಮಾ ಕಣಗಳ ಕ್ಯಾನ್ಸರ್) ಕಾಯಿಲೆ ಇರುವುದು ಪತ್ತೆಯಾಗಿತ್ತು. ಆದರೆ ಎದೆಗುಂದದ ಅವರು ಅದನ್ನು ಮೆಟ್ಟಿ ನಿಲ್ಲುವಂತೆ ಬದುಕಿ ತೋರಿಸಿದ್ದರು. 
 
ಪತ್ನಿ, ನಟಿ ವಿಜೇತಾ ಪಂಡಿತ್, ಮಕ್ಕಳಾದ ಅನಿವೇಶ್, ಅವಿತೇಶ್  ಸಂಗೀತ ಸಂಯೋಜಕ ಸಹೋದರರಾದ  ಜತೀನ್ ಮತ್ತು ಲಲಿತ್ ಪಂಡಿತ್ ಅವರನ್ನವರು ಅಗಲಿದ್ದಾರೆ.
 
ಚಲ್ತೆ ಚಲ್ತೆ, ಬಾಗ್‌ಬನ್‌‌, ಕಭೀ ಖುಷಿ ಕಭೀ ಘಮ್‌‌‌ ಚಿತ್ರಗಳು ಅರಿಗೆ ಹೆಸರನ್ನು ತಂದುಕೊಟ್ಟಿದ್ದವು. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments