ಅದ್ಯಾಕೋ ಗೊತ್ತಿಲ್ಲ ಆಲಿಯಾ ಭಟ್ ಸಿಡುಕು ಮಾತುಗಳನ್ನು ಆಡುತ್ತಿದ್ದಾಳೆ ಎಂದು ಕೊಳ್ಳುತ್ತಿದ್ದಾರೆ ಬಾಲಿವುಡ್ ಮಂದಿ.ಇನ್ನು ಕೆಲವರು ಆಕೆಗೆ ಅಹಂಕಾರ ಹೆಚ್ಚಾಗಿದೆ ಎಂದೂ ಸಹಿತ ಹೇಳುತ್ತಿದ್ದಾರೆ. ಆದರೆ ನಿಜ ಸಂಗತಿ ಬಗ್ಗೆ ತಿಳಿದುಕೊಂಡರೆ ಯಾಕೆ ಆ ರೀತಿ ಆಲಿಯ ವರ್ತನೆ ಮಾಡುತ್ತಿದ್ದಾಳೆ ಎನ್ನುವುದು ತಿಳಿದು ಬರುತ್ತದೆ.
ಈಗ ಆಕೆ ಮತ್ತು ಅರ್ಜುನ್ ಕಪೂರ್ ಅವರ ನಡುವೆ ಪ್ರೇಮಾಯಣ ನಡೆಯುತ್ತಿದೆ ಎನ್ನುವ ಸುದ್ದಿ ಹರಡಿದೆ. ಯಾವುದೇ ಸಂದರ್ಶನದಲ್ಲಿ ಆಗಿರಲಿ ಈಕೆ ಬಳಿ ಪ್ರೇಮಕ್ಕೆ ಸಂಬಂಧಪಟ್ಟ ಪ್ರಶ್ನೆಗಳನ್ನು ಕೇಳುತ್ತಿರುತ್ತಾರಂತೆ. ಇದರಿಂದ ಈಕೆ ಕೋಪದ ಉತ್ತರ ನೀಡಲು ಆರಂಭ ಮಾಡಿದ್ದಾಳೆ.
ಅರ್ಜುನ್ ಹೇಳುತ್ತಿದ್ದಾರೆ ನಿಮಗೆ ಮುತ್ತು ಕೊಡುವ ಸನ್ನಿವೇಶಗಳು ತುಂಬಾ ಇಷ್ಟವಂತೆ ಅವರಿಗೆ ನಿಮ್ಮ ಅಭಿಪ್ರಾಯವೇನು ಎಂದು ಕೇಳಿದಾಗ ಸಿಟ್ಟಿನಿಂದ ಆಕೆ ಆ ಆಸೆ ಇರುವುದು ಅವನಿಗೆ ತಾನೇ ಆತನ ಬಳಿ ಕೇಳಿ ಎಂದು ಹರಿಹಾಯ್ದಿದ್ದಾಳಂತೆ. ಒಟ್ಟಾರೆ ಸಿನಿಮಾರಂಗದವರು ಏನೇ ಮಾಡಿದರು ಸುದ್ದಿ. ಅದೇ ರೀತಿ ಏನು ಮಾಡದಿದ್ದರೂ ಸಹಿತ ಸುದ್ದಿಯಾಗುತ್ತೆ. ಅದಕ್ಕೆ ತಾನೇ ಗಾಸಿಪ್ ಕಾಲಂ ಗಳು ಇರೋದು!!