ಶ್ರುತಿ ಹಾಸನ್ ಈಗ ಬಾಲಿವುಡ್ , ಟಾಲಿವುಡ್ ಮತ್ತು ಕಾಲಿವುಡ್ ಲಕ್ಕಿ ಗರ್ಲ್. ರೂಪದ, ಗ್ಲಾಮರ್ ಮೂಲಕ ಬಾಲಿವುಡ್ , ಟಾಲಿವುಡ್ ಮತ್ತು ಕಾಲಿವುಡ್ ನಲ್ಲಿ ಕೋಟಿಗಟ್ಟಲೆ ಹಣವನ್ನು ಸಂಪಾದಿಸುತ್ತಿರುವ ಈ ಚೆಲ್ವಿಗೆ ಈಗ ತನ್ನ ರೂಪದ ಬಗ್ಗೆ ಅಭಿಮಾನ ಕಡಿಮೆ ಆಗಿದೆ ಎಂದು ಕಾಣುತ್ತದೆ. ಅದಕ್ಕೆ ಕಾರಣ ಆಕೆಯ ಇತ್ತೀಚಿನ ಮಾತುಗಳು. ಕೇವಲ ರೂಪ ಇದ್ದರೆ ಮಾತ್ರ ಏನು ಪ್ರಯೋಜನ ಇಲ್ಲ ಬದಲಿಗೆ ಬುದ್ಧಿವಂತಿಕೆಯು ಸಹಿತ ಅತ್ಯಗತ್ಯ ಎಂದು ಹೇಳಿದ್ದಾಳೆ ಈ ಚೆಲುವೆ.
ತಿಳುವಳಿಕೆ -ಬುದ್ಧಿವಂತಿಕೆ ಇಲ್ಲದ ರೂಪವಿದ್ದರೆಷ್ಟು ಬಿಟ್ಟರೆಷ್ಟು ಏಕೆಂದರೆ ನಮ್ಮ ಬದುಕು ಸೂಕ್ತ ದಾರಿಯಲ್ಲಿ ನಡೆಯ ಬೇಕೆಂದರೆ ಬುದ್ಧಿವಂತಿಕೆಯಿಂದ ಕೂಡಿದ ನಿರ್ಧಾರಗಳು ತೆಗೆದು ಕೊಳ್ಳಬೇಕು. ಆಗಷ್ಟೇ ಗೆಲುವು ಕೈ ಹಿಡಿಯುತ್ತದೆ ಎಂದು ಕಮೆಂಟ್ ಮಾಡಿದ್ದಾಳೆ. ತೆರೆಯ ಮೇಲೆ ಸುಂದರವಾಗಿ ಕಾಣುವ ನಮ್ಮ ಸೌಂದರ್ಯ ನಮ್ಮದಲ್ಲ. ಮೇಕಪ್ ಮಾಡಲು ಒಬ್ಬರು, ಹೇರ್ ಸ್ಟೈಲ್ ಗೆ ಮತ್ತೊಬ್ಬರು, ಹೀಗೆ ಎಲ್ಲರು ತಿದ್ದಿ ತೀಡಿದ ಅಂದ ತಮ್ಮದು.
ಅಂದ ತಿದ್ದಲು , ಅದಕ್ಕೆ ಹೊಳಪು ತರಲು ಅನೇಕ ಮಂದಿ ಇರುತ್ತಾರೆ ಆದರೆ ಬುದ್ಧಿವಂತಿಕೆ , ತಿಳುವಳಿಕೆಗೆ ಹೊಂದಲು ನಾವೇ ಪ್ರಯತ್ನ ಪಡ ಬೇಕು, ನಾವು ಮಾಡಿದ ತಪ್ಪುಗಳು ನಮ್ಮ ಕಲಿಕೆಗೆ ದಾರಿ ಮಾಡಿ ಕೊಡುತ್ತದೆ ಎನ್ನುವ ವೇದಾಂತ ಹೊಂದಿದ್ದಾಳೆ ಈ ಚೆಲುವೆ. ಆದರೆ ತಿಳುವಳಿಕೆ ಬುದ್ಧಿವಂತಿಕೆ ಬಗ್ಗೆ ಮಾತಾಡುವ ಶ್ರುತಿ ಆಗಡು ಚಿತ್ರದಲ್ಲಿ ಮಾಡಿರುವ ಐಟಂ ಸಾಂಗ್ ಕಿಕ್ ನೀಡಿಲ್ಲ..ಯಾಕೆ ಅದನ್ನು ಸರಿಯಾಗಿ ಮಾಡುವ ತಿಳುವಳಿಕೆ ಆಕೆಗೆ ಇರಲಿಲ್ಲವೆ? ಈ ಬಗ್ಗೆ ಟಾಲಿವುಡ್ ಪ್ರೇಕ್ಷಕರು ಬೇಜಾರಾಗಿದ್ದಾರೆ.ಏನೇ ಇರಲಿ ಸೌಂದರ್ಯ ಮತ್ತು ಬುದ್ಧಿವಂತಿಕೆ ಎರಡು ಅಗತ್ಯ ಎನ್ನುವ ಶ್ರುತಿ ನಿರ್ಣಯ ಒಳ್ಳೆಯದ್ದು.. ಗೋ ಅಹೆಡ್ ಶ್ರುತಿ !