Webdunia - Bharat's app for daily news and videos

Install App

ರಜನಿಕಾಂತ್ ಹೆಸರು ಮಿಸ್ ಯೂಸ್ ಮಾಡಿದ ಬಾಲಿವುಡ್ ಮಂದಿ.. ಕೋರ್ಟ್ ಮೆಟ್ಟಿಲೇರಿದ ಸೂಪರ್ ಸ್ಟಾರ್

Webdunia
ಗುರುವಾರ, 18 ಸೆಪ್ಟಂಬರ್ 2014 (10:29 IST)
ಮತ್ತೊಂದು ಹೊಸ ಸಂಗತಿ ಈಗ ಹೆಚ್ಚು ಗದ್ದಲ ಉಂಟು ಮಾಡುತ್ತಿದೆ. ಸಾಮಾನ್ಯವಾಗಿ ಚಿತ್ರರಂಗದಲ್ಲಿ ಕಥೆ ಕದಿಯೋರು, ಅದೇ ರೀತಿ ತಮ್ಮ ಗೆಲುವಿಗಾಗಿ ಸ್ಟಾರ್ ನಟರ ಸಿನಿಮಾ ತುಣುಕುಗಳ ಬಳಕೆ ಮಾಡಿಕೊಳ್ಳುವುದು ಹೀಗೆ ಹತ್ತು ಹಲವಾರು ಸಂಗತಿಗಳು ಸದಾ ಒಂದಲ್ಲ ಒಂದು ರೀತಿ ರಂಪ ಮಾಡುತ್ತಲೇ ಇರುತ್ತದೆ. ಈಗ ಸೂಪರ್‌ಸ್ಟಾರ್  ರಜನಿಕಾಂತ್ ಅವರ ಹೆಸರಿನ ಬಗ್ಗೆಯೂ ಸಹಿತ ಸಾಕಷ್ಟು ಗದ್ದಲ ಉಂಟಾಗಿದೆ. ಅದಕ್ಕೆ ಕಾರಣ ಮೈ ಹೂ ರಜನಿಕಾಂತ್ ಎನ್ನುವ ಹಿಂದಿ ಚಿತ್ರ. ತನ್ನ ಹೆಸರಲ್ಲಿ ಚಿತ್ರ ನಿರ್ಮಿಸಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ರಜನಿಕಾಂತ್ ಈ ಬಗ್ಗೆ ಮದ್ರಾಸ್ ಹೈ ಕೋರ್ಟ್ ನಲ್ಲಿ ದೂರು ದಾಖಲು ಮಾಡಿದ್ದಾರೆ. ತನ್ನ ಹೆಸರಿನ ಚಿತ್ರ ನಿರ್ಮಾಣದ ಬಗ್ಗೆ ಆಕ್ಷೇಪ ಎತ್ತಿದ್ದಾರೆ. ಈ ಚಿತ್ರವನ್ನು ನಿಷೇಧಿಸ ಬೇಕೆಂದು ಮದ್ರಾಸ್ ಹೈಕೋರ್ಟ್‌ನಲ್ಲಿ ಪಿಟಿಷನ್ ದಾಖಲು ಮಾಡಿದ್ದಾರೆ ರಜನಿಕಾಂತ್. 
 
ತನ್ನ ಹೆಸರನ್ನು ಚಿತ್ರಕ್ಕೆ ಇದುವ ಮುನ್ನ ಯಾವುದೇ ಅನುಮತಿ ಪಡೆದಿಲ್ಲ ಎನ್ನುವ ಸಂಗತಿ ದೂರಿನಲ್ಲಿ ತಿಳಿಸಿದ್ದಾರೆ. ಅಲ್ಲದೆ ತನ್ನ ಹೆಸರನ್ನು ದುರ್ವಿನಿಯೋಗ ಮಾಡಿದ್ದಾರೆ ಎನ್ನುವುದನ್ನು ಸಹಿತ ಆರೋಪಿಸಿದ್ದಾರೆ. ಈ ವಿಚಾರಣೆಗೆ ಸಂಬಂಧಪಟ್ಟಂತೆ ಚಿತ್ರದ ಬಿಡುಗಡೆಗೆ ಮಧ್ಯಂತರ ಸ್ಟೇ ಆಜ್ಞೆ ನೀಡಿದೆ ಮದ್ರಾಸ್ ಹೈ ಕೋರ್ಟ್. ಇದರ ವಿಚಾರಣೆಯನ್ನು ಇದೆ ತಿಂಗಳ 22  ಕ್ಕೆ ನಡೆಸಲಾಗುವುದು.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments