Select Your Language

Notifications

webdunia
webdunia
webdunia
webdunia

ನಾನೇನಾದರೂ ಎಂಪಿಯಾಗಿ ಆಯ್ಕೆಯಾದರೆ ಪ್ರತಿದಿನ ಪಾರ್ಲಿಮೆಂಟ್ ಗೆ ಹೋಗ್ತೀನಿ

ನಾನೇನಾದರೂ ಎಂಪಿಯಾಗಿ ಆಯ್ಕೆಯಾದರೆ ಪ್ರತಿದಿನ ಪಾರ್ಲಿಮೆಂಟ್ ಗೆ ಹೋಗ್ತೀನಿ
ಮುಂಬೈ , ಬುಧವಾರ, 17 ಸೆಪ್ಟಂಬರ್ 2014 (10:15 IST)
ರಾಜ್ಯಸಭೆಯ ಸದಸ್ಯತ್ವಕ್ಕೆ ಅವಕಾಶ ಸಿಕ್ಕರೆ ಖಂಡಿತವಾಗಿ ತಾನು ಅದರತ್ತ ಆದ್ಯತೆ ನೀಡುವುದಾಗಿ ಹೇಳಿದ್ದಾರೆ ಅಮೀರ್ ಖಾನ್. ರಾಷ್ಟ್ರಪತಿ ಕೋಟಾದಲ್ಲಿ ಎಂಪಿಯಾದ ಸಚಿನ್, ರೇಖಾರಂತೆ ನೀವು ಸಹಿತ ಆಯ್ಕೆಯಾಗಲು ಆಶಿಸುತ್ತಿರಾ ಎನ್ನುವ ಪತ್ರಿಕಾ ಪ್ರತಿನಿಧಿಗಳ ಮಾತಿಗೆ ಉತ್ತರಿಸಲು ನಿರಾಕರಿಸಿದ ಅಮೀರ್ ರೇಖಾ ಮತ್ತು ಸಚಿನ್ ಇಬ್ಬರು ತನ್ನ ಉತ್ತಮ ಸ್ನೇಹಿತರು ಎನ್ನುವ ಮಾತನ್ನು ಈ ಸಂದರ್ಭದಲ್ಲಿ ತಿಳಿಸಿದ್ದಾರೆ. 
 
ರಾಜ್ಯ ಸಭೆಗೆ ಆಯ್ಕೆಯಾದರೆ ಆ ಸಮಯದಲ್ಲಿ ಸಮಾಜಕ್ಕೆ ಯಾವ ರೀತಿಯ ಸಹಾಯ ಮಾಡ ಬಹುದು ಎನ್ನುವ ಬಗ್ಗೆ ಆಲೋಚಿಸುತ್ತೇನೆ , ಅಂತಹ ಅವಕಾಶ ಬಂದರೆ ಖಂಡಿತ ಅದರ ಬಗ್ಗೆ ಹೆಚ್ಚು ಗಮನ ನೀಡುತ್ತೇನೆ ಎಂದು ಹೇಳುವುದರ ಮೂಲಕ ಇಂಡೈರೆಕ್ಟಾಗಿ ತಮ್ಮ ಅಭಿಪ್ರಾಯ ಹೇಳಿದ್ದಾರೆ ಆಮೀರ್. ತಾನೇನಾದರು ಎಂಪಿಯಾಗಿ ಆಯ್ಕೆ ಆದರೆ ತಪ್ಪದೆ ಪ್ರತಿದಿನ ಅಂದರೆ ಸೆಷನ್ ನಡೆಯುವಾಗ ತಪ್ಪದೆ ಪಾರ್ಲಿಮೆಂಟ್ ಗೆ ಹೋಗೆ ಹೋಗ್ತೀನಿ ಎನ್ನುವ ಆಣೆಪ್ರಮಾಣ ಮಾಡಿದ್ದಾರೆ ಅಮೀರ್. ಈ ಆಣೆಗೆ ಬೆರಗಾಗಿ ಹಾಗೂ ಮನ ಕರಗಿ ಅವರಿಗೆ ಅವಕಾಶ ನೀಡುವ ಮನಸ್ಸು ರಾಷ್ಟ್ರಪತಿಗಳಿಗೆ ಆ ದೇವರು ನೀಡಲಿ. 

Share this Story:

Follow Webdunia kannada