Webdunia - Bharat's app for daily news and videos

Install App

ಶ್ವೇತ ಬಸು ಮಾಡಿದ್ದು ತಪ್ಪು ಅಂತ ಹೇಳುವುದಕ್ಕಿಂತ ಆಕೆ ಪರಿಸ್ಥಿತಿ ಬಗ್ಗೆ ಯೋಚಿಸಿ

Webdunia
ಸೋಮವಾರ, 15 ಸೆಪ್ಟಂಬರ್ 2014 (10:41 IST)
ಬಾಲಿವುಡ್ ನ ಗೋಲ್ಡನ್ ಲೆಗ್ ಹುಡುಗಿ ದೀಪಿಕ ಪಡುಕೋಣೆ. ಸಾಮಾನ್ಯವಾಗಿ ತಾನಾಯ್ತು ತನ್ನ ಸಿನಿಮಾ ಹಾಗೂ ಮುತ್ತಿನ ಕಥೆ ಇಷ್ಟೇ ಪ್ರಪಂಚದಲ್ಲಿ ಇರುವ ಈ ಬಾಲೆ ಈಗ ಶ್ವೇತ ಬಸು ಪ್ರಸಾದ್  ವಿಷಯದಲ್ಲಿ ಯಾರೇ ಆಗಲಿ ಧೈರ್ಯವಾಗಿ ಹೇಳಲಾಗದೆ ಇರುವಂತಹ ಸಂಗತಿಯನ್ನು ಹೇಳಿ ಎಲ್ಲರು ಈಕೆಯತ್ತ ತಿರುಗಿ ನೋಡುವಂತೆ ಮಾಡಿದ್ದಾಳೆ. ಶ್ವೇತ ಬಸು ಬಗ್ಗೆ ಅನೇಕ ದಿನಗಳಿಂದ ಬೇರೆ ರೀತಿಯ ಪ್ರಚಾರ ನಡೆಯುತ್ತಿದೆ. ಈ ಬಗ್ಗೆ ಮಾತಾಡುತ್ತ ದೀಪಿಕ ತನ್ನ ಕುಟುಂಬ ರಕ್ಷಣೆಗಾಗಿ ಆಕೆ ಈ ರೀತಿಯ ನಿರ್ಧಾರಕ್ಕೆ ಬಂದಿದ್ದಾಳೆ ಒಬ್ಬರಿಗೆ ಇದು ಒಳ್ಳೆಯದು ಅನ್ನಿಸ ಬಹುದು ಅದೇ ರೀತಿ ಮತ್ತೊಬ್ಬರಿಗೆ ಇದು ಕೆಟ್ಟದ್ದು ಎಂದೆನಿಸಬಹುದು ಎನ್ನುವ ಮಾತನ್ನು ಹೇಳಿದ್ದಾಳೆ ಈ ಬೋಲ್ಡ್ ಗರ್ಲ್!
 
ಆಕೆ ಹೇಳಿದ ಮಾತುಗಳು ಮೀಡಿಯಾ ಸಾಕ್ಷಿಯಾಗಿ ಎಲ್ಲರ ಗಮನ ಸೆಳೆದಿದೆ. ಯಾಕೆಂದ್ರೆ ಈಕೆ ಹೇಳಿದ್ದು ನೇರ ಹಾಗು ನಿಷ್ಟುರ ಮಾತುಗಳು. ಮುಖ್ಯವಾಗಿ  ದೀಪಿ ಹೇಳೋದಿಷ್ಟೇ ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವುದಕ್ಕಿಂತ ಅವರನ್ನು ಮಾನಸಿಕವಾಗಿ ಮತ್ತಷ್ಟು ಕುಗ್ಗುವಂತೆ ಮಾಡುವುದಿದೆಯಲ್ಲ  ಅದರಷ್ಟು  ಕೆಡುಕಿನ ಸಂಗತಿ ಮತ್ತೊಂದಿಲ್ಲ ಎಂದು ಹೇಳಿದ್ದಾಳೆ ಈ ಭಾಮೆ. 
ಈಗ ಶ್ವೇತಾಗೆ ಹಿಂದಿ ಮತ್ತು ತೆಲುಗು ಚಿತ್ರಗಳಲ್ಲಿ ಅಭಿನಯಿಸಲು ಅವಕಾಶ ಸಿಕ್ಕಿರುವುದರಿಂದ ಆಕೆಯ ಬದುಕಲ್ಲಿ ಆಶಾಕಿರಣ ಮೂಡಿರಬಹುದು.. ಏನೇ ಆಗಿರಲಿ  ದೀಪಿಕಾಳಂತೆ  ನೇರವಾಗಿ ಹೇಳಲು ಜಾಸ್ತಿನೇ ಧೈರ್ಯ ಬೇಕು. ಇನ್ನಾದರೂ ಸಮಾಜ  ಆಕೆ ಬಗ್ಗೆ ಕೆಟ್ಟದಾಗಿ ಹೇಳೋದನ್ನು ಬಿಡಲಿ .!!

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments