Webdunia - Bharat's app for daily news and videos

Install App

ಪರಿಚಿತರ ಅಂತ್ಯಸಂಸ್ಕಾರಕ್ಕೆ ಹೋಗದೆ ಇರಬೇಡಿ .. ಮತ್ತೆ ಅವರೆಂದಿಗೂ ನಮಗೆ ಸಿಗುವುದಿಲ್ಲ

Webdunia
ಮಂಗಳವಾರ, 9 ಸೆಪ್ಟಂಬರ್ 2014 (11:16 IST)
ಸ್ನೇಹಿತರ ದಿನದಂದು ಆಪ್ತ ಮಿತ್ರರು ವಿಶ್ ಮಾಡಿದಾಗ ತಕ್ಷಣ ಅವರಿಗೂ ವಿಶ್ ಮಾಡಿ ಬಿಡಿ, ಅಥವಾ ನಿಮಗೆ ಮೊದಲೇ ವಿಶ್ ಮಾಡ ಬೇಕು ಎಂದೆನಿಸಿದರೆ ತಪ್ಪದೆ ತಕ್ಷಣ ಮಾಡಿ ಬಿಡಿ ಸ್ನೇಹಿತರ ಮದುವೆ, ಇನ್ನು ಅನೇಕ ಸಂಭ್ರಮಗಳಿಗೆ ತಪ್ಪದೆ ಹೋಗಿ ಆನಂದಿಸಿ, ಒಂದು ವೇಳೆ ಇಂತಹ ಕಾರ್ಯಕ್ರಮಗಳು ಮಿಸ್ ಆದರೆ ತೊಂದರೆ ಇಲ್ಲ , ಆದರೆ ಆಪ್ತರು ಮತ್ತೆ ಹಿಂತಿರುಗಿ ಬಾರದ ಜಾಗಕ್ಕೆ ಹೊರಟು ಹೋದರೆ ಅಂತ್ಯಕ್ರಿಯೆಗಳಿಗೆ ಮಾತ್ರ ತಪ್ಪದೆ ಹಾಜರಾಗಿ.  ಏಕೆಂದರೆ ಆನಂತರ ಅವರನ್ನು ಎಂದಿಗೂ ಮತ್ತೆ ನೋಡಲಾಗುವುದಿಲ್ಲ ಎಂದು ಹೇಳಿದ್ದಾರೆ ಅಮಿತಾಬ್ ಬಚ್ಚನ್.
 
 ಬಿಗ್ ಬಿ ಇದ್ದಕ್ಕಿದ್ದ  ಹಾಗೆ ಹೀಗೆ ಹೇಳುವುದರ ಹಿಂದೆ ದೊಡ್ಡ ಕಾರಣವಿದೆ. 30  ವರ್ಷಗಳ ಕಾಲ ತಮ್ಮ ಮನೆ, ಕಚೇರಿಗೆ ಸಂಬಂಧಪಟ್ಟ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದ ಆತನ ಸ್ಟಾಫ್  ಮೆಂಬರ್ ಇದ್ದಕ್ಕಿದ್ದ ಹಾಗೆ ಮರಣಿಸಿದರು. ಆತನ ಬಗ್ಗೆ ಹೇಳುತ್ತಾ ನನ್ನ ಮಗ ಅಭಿಷೇಕ್ ಬಚ್ಚನ್, ಮಗಳು ಶ್ವೇತ  ಆತನ ಕೈಲೇ ಬೆಳೆದರು. ನಮ್ಮ ಮಕ್ಕಳು ಆತನನ್ನು ಅಂಕಲ್ ಎಂದು ಕರೆಯುತ್ತಿದ್ದರು. ಆರೋಗ್ಯವಾಗಿಯೇ ಇದ್ದ. ಸಾಯುವ ದಿನದ ಮುಂಜಾನೆ ನಾನು ಆತನ ಜೊತೆ ಮಾತನಾಡಿದೆ. ಫಂಕ್ಷನ್ ಇದೆ ಎಂದು ಕೇಳಿ ಒಂದು ವಾರ ರಜೆ ಕೇಳಿದ. ಆ ಬಳಿಕ ಊರಿಗೆ ಹೋದವನಿಗೆ ಇದ್ದಕ್ಕಿದ್ದ ಹಾಗೆ ಹೃದಯಾಘಾತವಾಗಿ ಮರಣಿಸಿದ. ಈ ಸಂಗತಿ ಕೇಳಿದಾಗ ದಿಗ್ಭ್ರಾಂತಿ  ಆಯ್ತು ನನಗೆ. ಎಲ್ಲರಿಗೂ ಗೊತ್ತು ಹುಟ್ಟಿದವ ಸಾಯಲೇ ಬೇಕು. ಆದರೂ ಇಂತಹ ಸಂಗತಿಗಳನ್ನು ಜೀರ್ಣಿಸಿಕೊಳ್ಳುವುದು ಕಷ್ಟ. ಮತ್ತೆ ಎಲ್ಲೋ ಹುಟ್ಟುತ್ತಾನೆ ಎಂದು ಮನವನ್ನು ಸಂತೈಸಿಕೊಳ್ಳುವುದಷ್ಟೇ ಈಗ ಉಳಿದಿರುವುದು ಎಂದು ಹೇಳಿದ್ದಾರೆ ಬಿಗ್ ಬಿ.. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments