ನಿನ್ನೆ ನಾವು ಬಾಲಿವುಡ್ ನ ವಿಲಕ್ಷಣ ನಿರ್ದೇಶಕ ರಾಮ್ ಗೋಪಾಲ್ ವರ್ಮ ಅವರ ಬಗ್ಗೆ ಹೇಳಿದ್ದೆವು. ಅವರು ಅನೇಕ ರೀತಿಯಲ್ಲಿ ದೇವರಿಗಿಂತ ದೆವ್ವ ಒಳ್ಳೆಯದು ಎನ್ನುವ ನಂಬಿಕೆಯನ್ನು ಹೊಂದಿರುವ ನಿರ್ದೇಶಕ. ಆದರೆ ಆತನ ಯಾವ ದೆವ್ವವು ಗೆಲುವು ನೀಡಿಲ್ಲ ಎನ್ನುವ ಸತ್ಯ ತಡವಾಗಿ ಗೊತ್ತಾಗಿ, ಅದರ ಆತ ಟ್ವಿಟ್ ಮಾಡಿ ಹೇಳಿದ್ದು ಹಳೆಯ ಕಥೆ. ಸದಾ ವಿವಾದಗಳತ್ತ ತನ್ನ ಗಮನ ಕೊಟ್ಟಿರುವ ಈ ನಿರ್ದೇಶಕ ಗಣೇಶ ಚತುರ್ಥಿಯಂದು ಮಾಡಿದ ಟ್ವಿಟ್ ನಿಂದ ಕೋರ್ಟ್ ಮೆಟ್ಟಿಲು ಹತ್ತುವ ಪರಿಸ್ಥಿತಿ ಉಂಟಾಗಿದೆ. ಈತನ ಮೇಲೆ ಬಿಜೆವೈಎಮ್ ಕಾರ್ಯದರ್ಶಿ ಗೋಪಾಲ್ ಕೇಸ್ ಹಾಕಿದ್ದಾರೆ. ಶಾಹಿನಾಲ್ ಗಂಜ್ ಪೊಲೀಸ್ ಠಾಣೆಯಲ್ಲಿ ಕೇಸ್ ನಮೂದಾಗಿದೆ.
ಅಂದು ಆತ ಇಂದು ಗಣೇಶ ಹುಟ್ಟಿದ ದಿನ... ಆತನ ತಂದೆ ಶಿವ ತಲೆ ಕತ್ತರಿಸಿದ ದಿನ ಎಲ್ಲರಿಗೂ ಶುಭಾಶಯಗಳು ಎಂದು ಟ್ವೀಟಿಸಿದ್ದರು. ಇದು ಗಣೇಶ ಭಕ್ತರ ಮನಕ್ಕೆ ನೋವು ಉಂಟಾಗಿತ್ತು. ಈ ವಿಷಯಕ್ಕೆ ಸಂಬಂಧಪಟ್ಟಂತೆ ಆತನ ಮೇಲೆ ಫಿರ್ಯಾದು ಮಾಡಿದ್ದಾರೆ ಗೋಪಾಲ್. ಇಂತಹ ವಿಲಕ್ಷಣ ಮಂದಿಯನ್ನು ನೋಡಿ ಇರಲಾರದೆ ಇರುವೆ ಬಿಟ್ಟುಕೊಂಡ ಎನ್ನುವ ಗಾದೆಯನ್ನು ನಮ್ಮ ಪೂರ್ವಿಕರು ಹೇಳಿರ ಬೇಕು !