ಅಂದು ಬಿಪಾಸ ಬಸು ಸಿದ್ಧವಾಗಿ ಶೂಟಿಂಗ್ ಲೋಕೇಶನ್ ಗೆ ಹೋದರು. ಅದರ ಬಗ್ಗೆಯೇ ಆಕೆ ಚಿಂತಿಸುತ್ತಾ ಇದ್ದರು. ಅದಕ್ಕೆ ಕಾರಣ ಅಂದು ಆ ಚಿತ್ರದಲ್ಲಿ ನಿರ್ದೇಶಕ ವಿಕ್ರಮ್ ಭಟ್ ಅತ್ಯಂತ ಕಷ್ಟಕರ ಸನ್ನಿವೇಶಗಳನ್ನು ಚಿತ್ರೀಅರನ ಮಾಡುವ ಯೋಜನೆ ಹಾಕಿಕೊಂಡಿದ್ದರು.
ಆತನ ನಿರ್ದೇಶನದ ಚಿತ್ರ ಕ್ರಿಯೇಚರ್ ತ್ರಿಡಿ . ಈ ಚಿತ್ರದ ಶೂಟಿಂಗ್ ನಲ್ಲಿ ನಡೆದ ಸಾಹಸ ದೃಶ್ಯದಲ್ಲಿ ಆಕೆಗೆ ಸಾಕಷ್ಟು ಗಾಯಗಳು ಆಯ್ತು. ಅದರಲ್ಲೂ ಮುಖ್ಯವಾಗಿ ಆಕೆಯ ಗುಲಾಬಿ ಕೆನ್ನೆಯ ಮೇಲೆ ಗಾಯಗಳಾಯ್ತು.
ಆದಿನ ಅಂತೂ ಇಂತೂ ಶೂಟಿಂಗ್ ಪೂರ್ಣ ಮಾಡಿ ಮನೆಗೆ ಹೋದಳು ಆ ಚೆಲುವೆ. ಮಾರನೆಯ ದಿನ ಆಕೆಗೆ ಸಂಬಂಧಪಟ್ಟಂತೆ ಕ್ಲೋಸ್ ಅಪ್ ತೆಗೆಯ ಬೇಕು ಎನ್ನುವ ನಿರ್ಧಾರಕ್ಕೆ ಬಂದರಂತೆ ವಿಕ್ರಮ್. ಆದರೆ ಆಕೆಯ ಗುಲಾಬಿ ಕೆನ್ನೆಯ ಮೇಲೆ ಇದ್ದ ಗೆರೆಗಳು ಕ್ಯಾಮರ ಕಣ್ಣಿಂದ ಮರೆ ಆಗಲಿಲ್ಲ. ಮತ್ತೊಮ್ಮೆ ಆಕೆ ಮೇಕಪ್ ಡೋಸ್ ಹೆಚ್ಚು ಮಾಡಿದಾಗ ಆ ಗಾಯ ಮತ್ತಷ್ಟು ಜಾಸ್ತಿ ಆಯ್ತಂತೆ. ಈ ವಿಷಯ ಹೇಳುತ್ತಾ ಆ ಚೆಲುವೆ ಫೈಟ್ಸ್ ಸೀನ್ ಗಳಲ್ಲಿ ನಟಿಸಲು ನಾನು ಎಂದಿಗೂ ಭಯ ಪಡಲ್ಲ. ಗಾಯ ಆದರು ಹೆದರಲ್ಲ. ಸಿನಿಮಾಗಾಗಿ ನನ್ನ ದೇಹವನ್ನು ಎಂತಹ ಕಷ್ಟಕ್ಕೆ ಬೇಕಾದರೂ ತೊಡಗಿಸಿ ಕೊಳ್ಳಲು ಸಿದ್ಧ ಎನ್ನುತ್ತಾ ತನ್ನ ವೃತ್ತಿ ಪರತೆ ಮೆರೆದಿದ್ದಾಳೆ ಈ ಚೆಲುವೆ.