Webdunia - Bharat's app for daily news and videos

Install App

ನಾಸ್ತಿಕ ದೆವ್ವಗಳ ರಾಮ್ ಗೋಪಾಲ್ ವರ್ಮ್ ಆಸ್ತಿಕರಾಗಿದ್ದಾರೆ.. ಆಹಾ ಏನೀ ಬದಲಾವಣೆ!!

Webdunia
ಮಂಗಳವಾರ, 2 ಸೆಪ್ಟಂಬರ್ 2014 (09:32 IST)
ನಿನ್ನೆ ಮೊನ್ನೆ ಯವರೆಗೂ ದೇವರಿಗಿಂತ ದೆವ್ವ ಬೆಟರ್ ಎಂದು ದೆವ್ವವನ್ನು ಹಾಡಿ ಹೊಗಳುತ್ತಿದ್ದ ನಿರ್ದೇಶಕ  ರಾಮ್  ಗೋಪಾಲ್ ವರ್ಮ . ಅದ್ಯಾಕೋ ಗೊತ್ತಿಲ್ಲ ಗಣಪತಿ ಹಬ್ಬದ ಸಮಯದಲ್ಲಿ ದೇವರ ಬಗ್ಗೆ ಒಳ್ಳೆಯ ಮಾತಾಡಿದ್ದಾರೆ.ಆತನಿಗೆ ದೇವರ ಬಗ್ಗೆ ಸಕತ್ ಇಷ್ಟ  ಆಗಿದೆ. ಅದಕ್ಕೆ ಪೂರಕವಾಗಿ ಆತ ಭಯ ಭಕ್ತಿ ವ್ಯಕ್ತ ಪಡಿಸುವಂತೆ  ಟ್ವೀಟ್ ಮಾಡಿದ್ದಾರೆ.ಈ ಮುಖಾಂತರ ಆತ ನಾಸ್ತಿಕತೆಯಿಂದ ಆಸ್ತಿಕತೆಯತ್ತ ಸಾಗಿದ್ದಾರೆ ಎನ್ನುವ ಸಂಗತಿ ಸ್ಪಷ್ಟವಾಗಿ ಕಂಡು ಬಂದಿದೆ ಎಂದೇ ಹೇಳ ಬಹುದಾಗಿದೆ. 
 
ನನ್ನ ಸಿನಿಮಾಗಳು   ಸೋಲುವುದಕ್ಕೆ ಮುಖ್ಯ ಕಾರಣ ನಾನು ದೇವರನ್ನು ದೂಷಣೆ ಮಾಡಿರುವುದೇ ಆಗಿದೆ ಎನ್ನುವ ಸಂಗತಿಯನ್ನು ಆತ ತಿಳಿಸಿದ್ದಾರೆ. ಯಾವುದೇ ಅಪಘಾತ, ಸಾವು ನೋವುಗಳು ನಡೆದಾಗ ದೇವರು ಒಳ್ಳೆಯವನಾಗಿ ಇದ್ದಿದ್ದರೆ ಯಾಕೆ ಆ ಅಮಾಯಕರನ್ನು ರಕ್ಷಿಸುತ್ತಾ ಇರಲಿಲ್ಲವೇ ಎಂದು ಹೇಳಿ ತನಗೊಂದು ಹೊಸ ಇಮೇಜ್ ಸೃಷ್ಟಿ ಮಾಡಿಕೊಂಡಿದ್ದರು. ಅದೇರೀತಿ ಇತ್ತೀಚಿನ ಕೆಲವು ದಿನಗಳ  ಹಿಂದೆ ಆತ ಲಕ್ಷ್ಮಿಯನ್ನು ಬ್ಯಾಡ್ ಗಾಡ್ ಎಂದು, ಶಿವನ ಬಗ್ಗೆ ತನಗಿಷ್ಟ ಬಂದಂತೆ ಮಾತಾಡಿ ಈಗ ಗಣಪತಿ ಭಕ್ತ ಆಗಲು ಹೊರಟ ಸಂಗತಿ ಬಾಲಿವುಡ್ ಮಾತ್ರವಲ್ಲ ಟಾಲಿವುಡ್ ಮಂದಿಯನ್ನು ಸಹಿತ ಆಶ್ಚರ್ಯದ ಕಡಲಲ್ಲಿ ತೋಯಿಸಿದೆ.
 ಗಣನಾಥನ ಬಗ್ಗೆ ಅಂದು ಆತ ಚತುರ್ಥಿಯ ದಿನ  ಗಣೇಶ ಹುಟ್ಟಿದ ದಿನ .. ಇಂದು ಆತನ ತಂದೆ ಶಿವ ತಲೆಯನ್ನು  ಕತ್ತರಿಸಿದ ದಿನ ಎಂದು ಹೇಳಿ ಟ್ವಿಟ್ ಮಾಡಿದ್ದರು  ಅದು ಹಿಂದೂಗಳ ಅದರಲ್ಲೂ ಗಣೇಶನ ಭಕ್ತರ ಮನಕ್ಕೆ ನೋವು ಉಂಟು ಮಾಡಿತ್ತು. ಆದರೆ ಅದರ ಬಗ್ಗೆ ಆತ ಕ್ಷಮೆ ಕೇಳಿದ್ದಾರೆ. ಈರೀತಿ ಎಂದಿಗೂ ಆತ ಮಾಡಿದ ತಪ್ಪಿಗೆ ಕ್ಷಮೆ ಕೇಳೆ ಇರಲಿಲ್ಲ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments