Select Your Language

Notifications

webdunia
webdunia
webdunia
webdunia

ನಾಸ್ತಿಕ ದೆವ್ವಗಳ ರಾಮ್ ಗೋಪಾಲ್ ವರ್ಮ್ ಆಸ್ತಿಕರಾಗಿದ್ದಾರೆ.. ಆಹಾ ಏನೀ ಬದಲಾವಣೆ!!

ನಾಸ್ತಿಕ ದೆವ್ವಗಳ ರಾಮ್ ಗೋಪಾಲ್ ವರ್ಮ್ ಆಸ್ತಿಕರಾಗಿದ್ದಾರೆ.. ಆಹಾ ಏನೀ ಬದಲಾವಣೆ!!
ಮುಂಬೈ , ಮಂಗಳವಾರ, 2 ಸೆಪ್ಟಂಬರ್ 2014 (09:32 IST)
ನಿನ್ನೆ ಮೊನ್ನೆ ಯವರೆಗೂ ದೇವರಿಗಿಂತ ದೆವ್ವ ಬೆಟರ್ ಎಂದು ದೆವ್ವವನ್ನು ಹಾಡಿ ಹೊಗಳುತ್ತಿದ್ದ ನಿರ್ದೇಶಕ  ರಾಮ್  ಗೋಪಾಲ್ ವರ್ಮ . ಅದ್ಯಾಕೋ ಗೊತ್ತಿಲ್ಲ ಗಣಪತಿ ಹಬ್ಬದ ಸಮಯದಲ್ಲಿ ದೇವರ ಬಗ್ಗೆ ಒಳ್ಳೆಯ ಮಾತಾಡಿದ್ದಾರೆ.ಆತನಿಗೆ ದೇವರ ಬಗ್ಗೆ ಸಕತ್ ಇಷ್ಟ  ಆಗಿದೆ. ಅದಕ್ಕೆ ಪೂರಕವಾಗಿ ಆತ ಭಯ ಭಕ್ತಿ ವ್ಯಕ್ತ ಪಡಿಸುವಂತೆ  ಟ್ವೀಟ್ ಮಾಡಿದ್ದಾರೆ.ಈ ಮುಖಾಂತರ ಆತ ನಾಸ್ತಿಕತೆಯಿಂದ ಆಸ್ತಿಕತೆಯತ್ತ ಸಾಗಿದ್ದಾರೆ ಎನ್ನುವ ಸಂಗತಿ ಸ್ಪಷ್ಟವಾಗಿ ಕಂಡು ಬಂದಿದೆ ಎಂದೇ ಹೇಳ ಬಹುದಾಗಿದೆ. 
 
ನನ್ನ ಸಿನಿಮಾಗಳು   ಸೋಲುವುದಕ್ಕೆ ಮುಖ್ಯ ಕಾರಣ ನಾನು ದೇವರನ್ನು ದೂಷಣೆ ಮಾಡಿರುವುದೇ ಆಗಿದೆ ಎನ್ನುವ ಸಂಗತಿಯನ್ನು ಆತ ತಿಳಿಸಿದ್ದಾರೆ. ಯಾವುದೇ ಅಪಘಾತ, ಸಾವು ನೋವುಗಳು ನಡೆದಾಗ ದೇವರು ಒಳ್ಳೆಯವನಾಗಿ ಇದ್ದಿದ್ದರೆ ಯಾಕೆ ಆ ಅಮಾಯಕರನ್ನು ರಕ್ಷಿಸುತ್ತಾ ಇರಲಿಲ್ಲವೇ ಎಂದು ಹೇಳಿ ತನಗೊಂದು ಹೊಸ ಇಮೇಜ್ ಸೃಷ್ಟಿ ಮಾಡಿಕೊಂಡಿದ್ದರು. ಅದೇರೀತಿ ಇತ್ತೀಚಿನ ಕೆಲವು ದಿನಗಳ  ಹಿಂದೆ ಆತ ಲಕ್ಷ್ಮಿಯನ್ನು ಬ್ಯಾಡ್ ಗಾಡ್ ಎಂದು, ಶಿವನ ಬಗ್ಗೆ ತನಗಿಷ್ಟ ಬಂದಂತೆ ಮಾತಾಡಿ ಈಗ ಗಣಪತಿ ಭಕ್ತ ಆಗಲು ಹೊರಟ ಸಂಗತಿ ಬಾಲಿವುಡ್ ಮಾತ್ರವಲ್ಲ ಟಾಲಿವುಡ್ ಮಂದಿಯನ್ನು ಸಹಿತ ಆಶ್ಚರ್ಯದ ಕಡಲಲ್ಲಿ ತೋಯಿಸಿದೆ.
 ಗಣನಾಥನ ಬಗ್ಗೆ ಅಂದು ಆತ ಚತುರ್ಥಿಯ ದಿನ  ಗಣೇಶ ಹುಟ್ಟಿದ ದಿನ .. ಇಂದು ಆತನ ತಂದೆ ಶಿವ ತಲೆಯನ್ನು  ಕತ್ತರಿಸಿದ ದಿನ ಎಂದು ಹೇಳಿ ಟ್ವಿಟ್ ಮಾಡಿದ್ದರು  ಅದು ಹಿಂದೂಗಳ ಅದರಲ್ಲೂ ಗಣೇಶನ ಭಕ್ತರ ಮನಕ್ಕೆ ನೋವು ಉಂಟು ಮಾಡಿತ್ತು. ಆದರೆ ಅದರ ಬಗ್ಗೆ ಆತ ಕ್ಷಮೆ ಕೇಳಿದ್ದಾರೆ. ಈರೀತಿ ಎಂದಿಗೂ ಆತ ಮಾಡಿದ ತಪ್ಪಿಗೆ ಕ್ಷಮೆ ಕೇಳೆ ಇರಲಿಲ್ಲ. 

Share this Story:

Follow Webdunia kannada