ಒಂದು ಕಾಲದಲ್ಲಿ ದಕ್ಷಿಣ ಭಾರತವಲ್ಲ ಉತ್ತರ ಭಾರತದ ಚಿತ್ರರಂಗವನ್ನು ಆಳಿದ ನಟಿ ಶ್ರೀದೇವಿ. ಆಕೆ ನಟಿಸಿ ಮತ್ತು ನಿರ್ದೇಶಕ ಭಾರತೀರಾಜ ನಿರ್ದೇಶನದ ಚಿತ್ರ ಎರ್ರಗುಲಾಬಿಲು ಸೂಪರ್ ಡೂಪರ್ ಹಿಟ್ ಆಗಿತ್ತು. ಆ ಸಕ್ಸಸ್ ಹವಾ ಇನ್ನು ಇದೆ. ಸುಮಾರು 35 ವರ್ಷಗಳಾದರೂ ಸಹಿತ ಆ ಚಿತ್ರದ ಬಗ್ಗೆ ಜನಕ್ಕಿರುವಂತಹ ಕ್ರೇಜ್ ಕಡಿಮೆ ಆಗಿಲ್ಲ ಎಂದೇ ಹೇಳ ಬಹುದಾಗಿದೆ.
ಒಂದು ನೈಜ ಘಟನೆಯನ್ನು ಆಧರಿಸಿ ನಿರ್ಮಿಸಿದ ಆ ಚಿತ್ರದಲ್ಲಿ ಭಾರತಿರಾಜ ಅವರು ಕಮಲ್ ಹಾಸನ್ ಅವರಿಗೆ ನೆಗಟಿವ್ ಶೆಡ್ ನೀಡಿ ಆ ಮುಖಾಂತರ ಸೂಪಹಿತ್ ಚಿತ್ರ ನೀಡಿದ್ದಲ್ಲದೆ ಕಮಲ್ ಹಾಸನ್ ಅವರ ತಾರ ಬದುಕಿನ ಮೈಲುಗಲ್ಲಿನ ಚಿತ್ರವಾಗಿ ಮಾಡಿದ್ದು ಇತಿಹಾಸ. ಈಗ ಆ ಚಿತ್ರವನ್ನು ತಮಿಳಿಗೆ ರೀಮೇಕ್ ಮಾಡುವತ್ತ ಗಮನ ನೆಟ್ಟಿದ್ದಾರೆ ಎನ್ನುವ ಸುದ್ದಿ ಈಗ ಟಾಲಿವುಡ್ ನಲ್ಲಿ ಹರಿದಾಡುತ್ತಿದೆ.
1978 ರಲ್ಲಿ ಸಿಗಪ್ಪು ರೋಜಾಕಲ್ ಎನ್ನುವ ಹೆಸರಲ್ಲಿ ಬಿಡುಗಡೆ ಆದ ಈ ಚಿತ್ರವನ್ನು ಪುನರ್ ನಿರ್ಮಾಣ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ ಭಾರತಿರಾಜ ಅವರ ಪುತ್ರ ಮನೋಜ್ ರಾಜ ಅವರು. ಅವರು ಈ ಚಿತ್ರದಲ್ಲಿ ಶ್ರೀದೇವಿ ಜಾಗದಲ್ಲಿ ಕಮಲ್ ಪುತ್ರಿ ಶ್ರುತಿ ಹಾಸನ್ ಅವರನ್ನು ಹಾಕಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಈ ಚಿತ್ರದಲ್ಲಿ ನಟಿಸಲೆಂದು ಶ್ರುತಿ ಕೆಲವೊಂದು ಟಿಪ್ಸ್ ಶ್ರೀದೇವಿ ಬಳಿ ತೆಗೆದುಕೊಳ್ಳುವ ಉದ್ದೇಶ ಹೊಂದಿದ್ದಾಳಂತೆ ಈ ಚೆಲುವೆ. ಒಂದೊಮ್ಮೆ ಶ್ರೀದೇವಿ ತಾರ ಬದುಕನ್ನು ಉಜ್ವಲ ಮಾಡಿದ ಈ ಚಿತ್ರ ಶ್ರುತಿಗೆ ಎಂತಹ ಸಕ್ಸಸ್ ನೀಡುತ್ತದೆಯೋ ಕಾದು ನೋಡುವ!