Select Your Language

Notifications

webdunia
webdunia
webdunia
webdunia

ಇದ್ದಕ್ಕಿದ್ದಂತೆ ಕತ್ರಿನ ನಂದಮೂರಿ ಸಿಂಹ ಬಾಲಕೃಷ್ಣ ರನ್ನು ನೆನಪಿಸಿಕೊಂಡಿದ್ಯಾಕೆ ಹೌದು ಯಾಕೆ ಯಾಕೆ ?

ಇದ್ದಕ್ಕಿದ್ದಂತೆ ಕತ್ರಿನ ನಂದಮೂರಿ ಸಿಂಹ ಬಾಲಕೃಷ್ಣ ರನ್ನು ನೆನಪಿಸಿಕೊಂಡಿದ್ಯಾಕೆ ಹೌದು ಯಾಕೆ ಯಾಕೆ  ?
ಮುಂಬೈ , ಗುರುವಾರ, 21 ಆಗಸ್ಟ್ 2014 (10:02 IST)
ಕೆಲವು ಬಾರಿ ಕಲಾವಿದರು ಯಾರನ್ನು ಹೊಗಳುತ್ತಾರೆ ಮತ್ತು ಯಾರನ್ನು ನೆನಪಿಸಿ ಕೊಳ್ಳುತ್ತಿದ್ದಾರೆ ಎನ್ನುವುದು ಗೊತ್ತೇ ಆಗಲ್ಲ. ಕಾರಣ ಇಷ್ಟೇ ಈಗ ಬಾಲಿವುಡ್ ಟಾಪ್ ಹೀರೋಯಿನ್ ಗಳು ತಮ್ಮ ಹಳೆಯ ಅಂದ್ರೆ ತಾರ ಬದುಕಿನ ಹಿಂದಿನ ದಿನಗಳ ಬಗ್ಗೆ ಅದೆಷ್ಟು ನೆನಪು ಹೊಂದಿರುತ್ತಾರೆ ಎನ್ನುವ ಸಂಗತಿಯನ್ನು ಅವಲೋಕಿಸಿದರೆ ಏನು ಕಾಣಲ್ಲ ಮತ್ತು ಹೇಳಲ್ಲ. ಏಕೆಂದರೆ ಹಳೆಯ ಸಂಗತಿ ಅವರಿಗೆ ಬೇಕಾಗಿರೋಲ್ಲ, ಆದರೆ ಕತ್ರಿನ ಕೈಫ್ ತನ್ನ ಹಳೆಯ ಸಂಗತಿ ಬಗ್ಗೆ ಸಾಕಷ್ಟು ನೆನಪಲ್ಲಿ ಇಟ್ಟುಕೊಂಡಿದ್ದಾಳೆ. ಅದರಲ್ಲೂ  ಟಾಲಿವುಡ್ ನಂದಮೂರಿ ಸಿಂಹ ಬಾಲಕೃಷ್ಣ ಅವರನ್ನು ಸಿಕ್ಕಾಪಟ್ಟೆ ನೆನಪಲ್ಲಿ ಇಟ್ಟುಕೊಂಡಿದ್ದಾಳೆ. 
 
ಅಲ್ಲದೆ ಆಕೆ ತನಗೆ ಅವಕಾಶ ಕೊಟ್ಟ ಅಲ್ಲರಿ ಪಿಡುಗು ಎನ್ನುವ ಫ್ಲಾಪ್ ಚಿತ್ರದ ಬಗ್ಗೆಯೂ ಸಹ ಇತ್ತೀಚಿಗೆ ನಡೆದ ಸಂದರ್ಶನ ಒಂದರಲ್ಲಿ ನೆನಪಿಸಿ ಕೊಂಡಿದ್ದಾಳೆ. ಆ ಚಿತ್ರದಲ್ಲಿ ಬಾಲಕೃಷ್ಣ ಅವರು ಅವಕಾಶ ನೀಡಿ,  ತನಗಾಗಿ ವಿಶೇಷ ಹಾಡು ನ್ಯೂಜಿಲ್ಯಾಂಡ್ ನಲ್ಲಿ ಶೂಟ್ ಮಾಡಿದ್ದನ್ನು ನೆನಪಿಸಿಕೊಂಡು ಅವರಿಂದ ಸಾಕಷ್ಟು ಕಲಿತೆ ಎಂದು ಗುರುವಂದನೆ ಮಾಡಿದ್ದಾಳೆ ಈ ಚೆಲುವೆ. ಚಿತ್ರಗಳ ಅನೇಕ ಲೆಕ್ಕಾಚಾರಗಳು, ನಟನೆಯ ವಿಷಯಕ್ಕೆ ಸಂಬಂಧಪಟ್ಟಂತೆ ಅಗತ್ಯ ಇರುವ ಅಂಶಗಳ ಬಗ್ಗೆ ಬಾಲಯ್ಯ ಹೇಳಿಕೊಟ್ಟದ್ದು ಆ ಸಂದರ್ಶನದಲ್ಲಿ ನೆನಪು ಮಾಡಿಕೊಂಡಿದ್ದಾಳೆ ಕಟ್ . ಅದ್ಯಾಕೆ ಆಕೆಗೆ ಈ ಸಿನಿಮಾ ಮತ್ತು ತೆಲುಗು ಹೀರೋ ನೆನಪು ಬಂತು ಎನ್ನುವ ಗೊಂದಲ ಬಾಲಿವುಡ್  ಮಾಧ್ಯಮದವರಿಗೆ ಆರಂಭ ಆಗಿದೆಯಂತೆ. ಅವರಿಗೆ ಮಾತ್ರವಲ್ಲ ಟಾಲಿವುಡ್ ಮಂದಿ ಸಹಿತ ಆಶ್ಚರ್ಯ ಚಕಿತರಾಗಿದ್ದಾರೆ. ಏನೇ ಇರಲಿ ತನಗೆ ಬದುಕಿನ ಪಾಠ ಹೇಳಿಕೊಟ್ಟ ಅಭಿನಯ ಗುರುವಂದನೆ ಮಾಡಿದ ಕಟ್ ಮನೋಭಾವ ಮೆಚ್ಚಿಕೊಳ್ಳುವುದು ಅತ್ಯಗತ್ಯ.   

Share this Story:

Follow Webdunia kannada