Webdunia - Bharat's app for daily news and videos

Install App

ಆಮೀರ್ ಖಾನ್ ಗೆ ವಸ್ತ್ರದಾನ ಮಾಡಿ ಮಾನ ಕಾಪಾಡಿದ ವಿಲೆಪಾರ್ಲೆ ಎಮ್ಮೆಲ್ಯೇ

Webdunia
ಬುಧವಾರ, 13 ಆಗಸ್ಟ್ 2014 (10:15 IST)
ದೇಹದ ಮೇಲೆ ನೂಲಿನೆಳೆಯು ಇಲ್ಲದಂತೆ  ಚಿತ್ರವನ್ನು ತೆಗೆಸಿ  ಒಂದು ಟ್ರಾನ್ಸಿಸ್ಟರ್  ಅಡ್ಡ ಹಿಡಿದು ನಿಂತಿರುವ ಆಮೀರ್ ಖಾನ್ ಪೀಕೆ ಚಿತ್ರದ ಪೋಸ್ಟರ್ ಬಗ್ಗೆ ಸಾಕಷ್ಟು ಸುದ್ದಿಗಳಿವೆ. ಆದರೆ ಇದು ಅಶ್ಲೀಲ ಅಲ್ಲ, ಇದೊಂದು ಕಲಾತ್ಮಕ ಸಂಗತಿ ಎಂದು ಆಮೀರ್ ಹೇಳಿದ್ದರು ಸಹ ಯಾರು ಒಪ್ಪುವ ಮನಸ್ಸು ಹೊಂದಿಲ್ಲ. ಹೆಣ್ಣುಮಕ್ಕಳು ಅದೆಷ್ಟೇ ಬಟ್ಟೆ ಬಿಚ್ಚಲಿ ತೊಂದ್ರೆ ಇಲ್ಲ, ಆದರೆ ಗಂಡಸರು ನೋ ನೋ ಅನ್ನುವ ಮಂದಿ ಹೆಚ್ಚಾಗಿರುವ ಸಮಾಜದಲ್ಲಿ ಇಂತಹ ದೃಶ್ಯಗಳನ್ನು ಕಾಣಲು ಮನಸ್ಸೆಲ್ಲಿ ಬರುತ್ತೆ. ಹಾಗೆ ಆಗಿದೆ ಆಮೀರ್ ವಿಷಯದಲ್ಲೂ ಸಹಿತ. ಅವರ ಈ ಬೆತ್ತಲೆ ಚಿತ್ರಕ್ಕೆ ಸಚಿವರೊಬ್ಬರು ಬಟ್ಟೆ ತೊಡಿಸಿ ಮಾನ ಕಾಪಾಡಿದ್ದಾರೆ. ವಿಲೆ ಪಾರ್ಲೆ  ಕಾಂಗ್ರೆಸ್ ಎಂ ಎಲ್ ಎ   ಕೃಷ್ಣ ಹೆಗ್ಡೆ ಅವರು ಆಮೀರ್ ಖಾನ್ ಗೆ ವಸ್ತ್ರದಾನ ಮಾಡುವುದರ ಮುಖಾಂತರ ಆಮೀರ್ ಮಾನ ಉಳಿಸುವಲ್ಲಿ ಯಶಸ್ವಿ ಆಗಿದ್ದಾರೆ. ಭಾರತೀಯ ಸಂಸ್ಕೃತಿಗೆ ಇಂತಹವು ಸರಿಯಲ್ಲ ಎಂದು ಹೇಳಿ ಆ ಪೋಸ್ಟರ್ಗೆ ಎಲೆ ಹಸಿರು ಶಾರ್ಟ್ಸ್  ಮತ್ತು ಬೂದು ಬಣ್ಣದ ಟೀ ಶರ್ಟ್ಸ್  ಹಾಕಿ ಆಮೀರ್ ಮಾನ ಕಾಪಾಡಿದ್ದಾರೆ. 
 
ಆಮೀರ್ ಅತ್ಯುತ್ತಮ ನಟ. ಆತನ ಸತ್ಯಮೇವ ಜಯತೆ ಯಂತಹ ಕಾರ್ಯಕ್ರಮಗಳು ಮಾಡಿ ಎಲ್ಲರ ಮನ ಗೆದ್ದಿದ್ದಾರೆ. ಆದರೆ ಇಂತಹ ವರ್ತನೆಗಳು ಅವರ ಅಭಿಮಾನಿಗಳ ಮನಕ್ಕೆ ಇಷ್ಟ ಆಗಲ್ಲ ಎನ್ನುವ ಸತ್ಯವನ್ನು ಬಿಚ್ಚಿದ್ದಾರೆ ಹೆಗಡೆಯವರು.ಆದರೆ ಸಿನಿಮಾ ಕಂಡಾಗ ನಿಜ ಏನು ಅಂತ ತಿಳಿಯುತ್ತೆ ಎನ್ನುವುದನ್ನು ಮಾತ್ರ ಆಮೀರ್ ಬಿಟ್ಟಿಲ್ಲ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments