Select Your Language

Notifications

webdunia
webdunia
webdunia
webdunia

ಸೈಫ್ ಪದ್ಮಶ್ರೀ ಪ್ರಶಸ್ತಿ ವಿವಾದದ ಬಗ್ಗೆ ಸತ್ಯ ಹೇಳಿದ ಬೇಗಂ ಕರೀನ

ಸೈಫ್ ಪದ್ಮಶ್ರೀ ಪ್ರಶಸ್ತಿ ವಿವಾದದ ಬಗ್ಗೆ ಸತ್ಯ ಹೇಳಿದ  ಬೇಗಂ ಕರೀನ
ಮುಂಬೈ , ಬುಧವಾರ, 13 ಆಗಸ್ಟ್ 2014 (10:13 IST)
ಸೈಫ್ ಅಲಿ ಖಾನ್  ಹೆಂಡತಿ ಹಾಗು ಬಾಲಿವುಡ್ ತಾರೆ ಕರೀನ ಕಪೂರ್ ಖಾನ್ ಅಂತೂ ತಮ್ಮ ಪತಿಯ ಪದ್ಮಶ್ರೀ ಪ್ರಶಸ್ತಿ ವಿವಾದದ  ಬಗ್ಗೆ ಪ್ರತಿಕ್ರಿಯೆ  ತೋರಿದ್ದಾರೆ. ಅವೆಲ್ಲ ಸುಳ್ಳು ಅವರಿಗೆ ನೀಡಿರುವ ಪದ್ಮಶ್ರೀ ಪ್ರಶಸ್ತಿಯನ್ನು ಹಿಂದೆ ತೆಗೆದುಕೊಳ್ಳುವುದಿಲ್ಲ ಎನ್ನುವುದನ್ನು ಅಧಿಕಾರಿಗಳು ತಮಗೆ ತಿಳಿಸಿದ್ದಾರೆ. ಯಾವುದೋ ಒಂದು ವಿವಾದದ ಕಾರಣದಿಂದ ಅವರ ಈ ಅತ್ಯುನ್ನತ ಪ್ರಶಸ್ತಿಯನ್ನು ಹಿಂದೆ ಪಡೆಯಲಾಗುವುದು ಎನ್ನುವ ಸುದ್ದಿ ಹರಡಿತ್ತು.  ಸೈಫ್ ಅವರು ಚಿತ್ರರಂಗದಲ್ಲಿ ಮಾಡಿದ ಸಾಧನೆಗೆ  2010 ರಲ್ಲಿ ಈ ಪ್ರಶಸ್ತಿ ಸಿಕ್ಕಿತ್ತು.
 
ಸೈಫ್ ಹೋಗಿದ್ದ ಹೋಟೆಲ್ ಒಂದರಲ್ಲಿ ಅದೂ ಅಲ್ಲಿಗೆ ಊಟಕ್ಕೆ ಬಂದಿದ್ದ ವ್ಯಕ್ತಿ ಒಬ್ಬರ ಮೇಲೆ ನಡೆಸಿದ ದಾಳಿಯನ್ನು ಮುಂದೆ ಇಟ್ಟು  ಸೈಫ್ ಅವರ ಪ್ರಶಸ್ತಿಯನ್ನು ಹಿಂದೆ ಪಡೆಯ ಬೇಕು ಎನ್ನುವ ದೂರು ನೀಡಿದ್ದರು ಅಗರ್ ವಾಲ್ ಎನ್ನುವಾತ. ಈ ಸುದ್ದಿ  ಎಲ್ಲೆಡೆ ಹರಡಿತ್ತು.ಆದರೇ ಅವೆಲ್ಲಾ ಸತ್ಯಕ್ಕೆ ಹತ್ತಿರವಾದುದಲ್ಲ ಎಂದು ಬೇಗಂ ಹೇಳಿದ್ದಾರೆ. ಅಂತೂ ಸೈಫ್ ಅವಾರ್ಡ್ ಅವರ ಹತ್ರಾನೆ ಇರುತ್ತೆ ಅಂತ ಆಯ್ತು !  

Share this Story:

Follow Webdunia kannada