ಕಿರುತೆರೆಯಲ್ಲಿ ಸಾಕಷ್ಟು ಸುದ್ದಿ ಮಾಡಿದ ಕಾರ್ಯಕ್ರಮ ಅಮಿತಾಬ್ ಬಚ್ಚನ್ ಅವರ ಕೌನ್ ಬನೇಗಾ ಕರೋಡ್ ಪತಿ. ಆ ಕಾರ್ಯಕ್ರಮದ ಮುಖಾಂತರ ಕಿರುತೆರೆಯ ವೀಕ್ಷಕರಿಗೆ ಹೆಚ್ಚು ಆಪ್ತರಾದರು ಬಿಗ್ ಬಿ.ಕಳೆದ ಕೆಲವು ವರ್ಷಗಳಿಂದ ಈ ರಿಯಾಲಿಟಿ ಷೋ ಮುಖಾಂತರ ತಮ್ಮದೊಂದು ಅಧಿಪತ್ಯವನ್ನು ಕಿರುತೆರೆಯಲ್ಲಿ ಸ್ಥಾಪಿಸಿದ್ದಾರೆ ಬಿಗ್ ಬಚ್ಚನ್. ಆದರೆ ಆ ಕಿರುತೆರೆಯ ಅಧಿಪತ್ಯಕ್ಕೆ ಪೆಟ್ಟು ಬೀಳುವಂತಹ ಪರಿಸ್ಥಿತಿ ಉಂಟಾಗಿದೆ ಈಗ .
ಇತ್ತೀಚಿನವರೆಗೂ ಅಪಾರ ಸಂಖ್ಯೆಯ ಜನರನ್ನು ಕರೋಡ್ಪತಿ ಮಾಡಿದ ಅಮಿತಾಬ್ ಅವರ ಷೋ ಗಿರುವ ಪಾಪ್ಯುಲಾರಿಟಿಯನ್ನು ಎನ್ಕ್ಯಾಶ್ ಮಾಡಿಕೊಳ್ಳುವ ಸಲುವಾಗಿ ಹೊಸ ಧಾರವಾಹಿ ಆರಂಭಿಸಿದರು, ಅದು ಹೆಚ್ಚು ಬಜೆಟ್ ನ ಅದ್ಧೂರಿ ಯುದ್ಧ್ ಹೆಸರಿನ ಈ ಸೀರಿಯಲ್ ಈಗಾಗಲೇ ಪ್ರತಿದಿನ ರಾತ್ರಿ 10 .30 ಗೆ ಪ್ರಸಾರ ಆಗುತ್ತಿದೆ. ಆದರೆ ಇದು ನಿರೀಕ್ಷಿಸಿದಷ್ಟು ರೇಟಿಂಗ್ಸ್ ಪಡೆಯುತ್ತಿಲ್ಲ, ಅದೇ ಸಧ್ಯ ಸೋನಿ ಟೀವಿಯವರ ತಲೆಬಿಸಿ ಮಾಡಿರುವ ಸಂಗತಿ ಆಗಿದೆ.
..........ಇನ್ನು ಇದೆ. ಮುಂದೆ ಓದಿ.
ಈ ಸಂಗತಿ ಬಾಲಿವುಡ್ ಹಾಟ್ ಟಾಪಿಕ್ ಆಗಿ ಬದಲಾಗಿದೆ ಎಂದೇ ಹೇಳ ಬಹುದಾಗಿದೆ. ಇಂಡಿಯನ್ ಟೆಲಿವಿಶನ್ ನ ಅತ್ಯಂತ ಕಾಸ್ಟ್ಲಿ ಸೀರಿಯಲ್ ಯುದ್ಧ್ ಒಂದು ಎಪಿಸೋಡ್ ಗೆ ಸುಮಾರು ಒಂದು ಕೋಟಿ ರೂಪಾಯಿಗಳಷ್ಟು ಖರ್ಚಾಗುತ್ತಿದೆ.
ಆದರೆ ಅದರ ರೇಟಿಂಗ್ಸ್ ಕೇವಲ 0.7 ರಷ್ಟು ದೊಕಿದ್ದು ಇದರಿಂದ ಕಾರ್ಯಕ್ರಮದ ನಿರ್ವಾಹಕರಿಗೆ ಏನು ಮಾಡ ಬೇಕು ಎನ್ನುವುದು ತಿಳಿಯದ ಪರಿಸ್ಥಿತಿ ಎದುರಾಗಿದೆ. ಆದರೂ ಮುಂದೆ ಪರಿಸ್ಥಿತಿ ಸರಿ ಆಗ ಬಹುದೆನ್ನುವ ನಿರೀಕ್ಷೆ ಹೊಂದಿದ್ದಾರೆ ಈ ಕಾರ್ಯಕ್ರಮದ ಆಯೋಜಕರು. ನೋಡುವ ಏನಾಗುತ್ತದೆ ಎಂದು.