Webdunia - Bharat's app for daily news and videos

Install App

ಸಂಜಯ್ ಗಾಗಿ ಅನೇಕ ಸ್ಕ್ರಿಫ್ಟ್ ಗಳು ರೆಡಿಯಿವೆ- ವಿದು ವಿನೋದ್ ಛೋಪ್ರಾ

Webdunia
ಗುರುವಾರ, 25 ಫೆಬ್ರವರಿ 2016 (11:50 IST)
ಮಾರ್ಚ್ 12 1993ರಲ್ಲಿ ನಡೆದ ಮುಂಬೈ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ  ಕಳೆದ ಐದು ವರ್ಷಗಳ ಸಂಜಯ್ ದತ್ ಯರವಾಡ ಜೈಲಿನಲ್ಲಿದ್ದರು. ಇವತ್ತು ಸಂಜಯ್ ದತ್ ಅವರು ಜೈಲಿನಿಂದ ಬಿಡುಗಡೆಯಾಗುತ್ತಿದ್ದಾರೆ. ಸಂಜಯ್ ಅವರು ಎದುರುಗೊಳ್ಳೋದಕ್ಕೆ ಅವರ ಅಭಿಮಾನಿಗಳು, ಬಾಲಿವುಡ್ ಸ್ನೇಹಿತರು ಹಾಗೇ ಕುಟುಂಬದವರು ರೆಡಿಯಾಗಿದ್ದಾರೆ. ಇನ್ನು ಸಂಜಯ್ ರಿಲೀಸ್ ಆಗುತ್ತಿದ್ದರಿಂದ ಅವರ ಗೆಳೆಯ ನಿರ್ಮಾಪಕ ವಿದು ವಿನೋದ್ ಛೋಪ್ರಾ ಫುಲ್ ಖುಷಿಯಾಗಿದ್ದಾರಂತೆ.
 
ಬಾಲಿವುಡ್ ನಲ್ಲಿ ಸಂಜಯ್ ದತ್ ಅವರ ಆಪ್ತರಲ್ಲಿ ಒಬ್ಬರು ವಿದು ವಿನೋದ್ ಛೋಪ್ರಾ ಪ್ರಮುಖರು. ಈ ಹಿಂದೆಯೇ ಸಂಜಯ್ ಜೈಲಿನಲ್ಲಿರುವಾಗಲೇ ವಿನೋದ್ ನಾನು ಸಂಜುಗಾಗಿ ಸಿನಿಮಾ ಮಾಡುತ್ತೇನೆ ಅಂತಾ ಹೇಳಿದ್ದರು. ಇದೀಗ ಮತ್ತೆ ಅದನ್ನೇ ಹೇಳಿದ್ದಾರೆ ವಿನೋದ್. ಸಂಜಯ್ ಜೈಲಿನಿಂದ ರಿಲೀಸ್ ಆಗುತ್ತಿರೋದು ನನಗೆ ತುಂಬಾನೇ ಖುಷಿಯಗುತ್ತಿದೆ. ನನ್ನಲ್ಲಿ ಅವರಿಗಾಗಿ ಅನೇಕ ಸ್ಕ್ರಿಫ್ಟ್ ಗಳಿವೆ. ಸಂಜಯ್ ಬಿಡುಗಡೆ ಯಾವಾಗ ಆಗ್ತಾರೆ ಅಂತಾ ನಾನು ಕಾಯುತ್ತಿದ್ದೆ ಅಂತಾ ಅವರು ಹೇಳಿದ್ದಾರೆ.ಅವನು ಬಂಜದ ನಂತರ ಅವನ ಜೊತೆ ಸಿನಿಮಾದ ಬಗ್ಗೆ ಮಾತನಾಡುತ್ತೇನೆ ಅಂತಾ ಅವರು ಹೇಳಿದ್ದಾರೆ.
 
ಅಲ್ಲದೇ ಸಂಜಯ್ ಐದು ವರ್ಷಗಳ ಕಾಲ ಶಿಕ್ಷೆ ಅನುಭವಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ವಿದು ವಿನೋದ್ ಅವನು ಮಾಡಿದ ತಪ್ಪಿಗೆ ಸರಿಯಾದ ಶಿಕ್ಷೆಯನ್ನು ಆ ಅನುಭವಿಸಿದ್ದಾನೆ.ಇದು ಅವನಿಗೆ ಪುರ್ನಜನ್ಮ.ನಾವೆಲ್ಲಾ ಅವನ ಜೊತೆ ಇರುತ್ತೇವೆ.ಅವನಿಗೆ ಕಳೆದ ಕೆಲ ವರ್ಷಗಳಿಂದ ಕೈಯಲ್ಲಿ ಅನೇಕ ಸಿನಿಮಾದ ಕಥೆಗಳನ್ನು ಇಟ್ಟುಕೊಂಡು ಕಾಯುತ್ತಿದ್ದೇನೆ ಅಂತಾ ಅವರು ಹೇಳಿದ್ದಾರೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments