Select Your Language

Notifications

webdunia
webdunia
webdunia
webdunia

ಸಂಜಯ್ ಗಾಗಿ ಅನೇಕ ಸ್ಕ್ರಿಫ್ಟ್ ಗಳು ರೆಡಿಯಿವೆ- ವಿದು ವಿನೋದ್ ಛೋಪ್ರಾ

ಸಂಜಯ್ ಗಾಗಿ ಅನೇಕ ಸ್ಕ್ರಿಫ್ಟ್ ಗಳು ರೆಡಿಯಿವೆ- ವಿದು ವಿನೋದ್ ಛೋಪ್ರಾ
ಮುಂಬೈ , ಗುರುವಾರ, 25 ಫೆಬ್ರವರಿ 2016 (11:50 IST)
ಮಾರ್ಚ್ 12 1993ರಲ್ಲಿ ನಡೆದ ಮುಂಬೈ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ  ಕಳೆದ ಐದು ವರ್ಷಗಳ ಸಂಜಯ್ ದತ್ ಯರವಾಡ ಜೈಲಿನಲ್ಲಿದ್ದರು. ಇವತ್ತು ಸಂಜಯ್ ದತ್ ಅವರು ಜೈಲಿನಿಂದ ಬಿಡುಗಡೆಯಾಗುತ್ತಿದ್ದಾರೆ. ಸಂಜಯ್ ಅವರು ಎದುರುಗೊಳ್ಳೋದಕ್ಕೆ ಅವರ ಅಭಿಮಾನಿಗಳು, ಬಾಲಿವುಡ್ ಸ್ನೇಹಿತರು ಹಾಗೇ ಕುಟುಂಬದವರು ರೆಡಿಯಾಗಿದ್ದಾರೆ. ಇನ್ನು ಸಂಜಯ್ ರಿಲೀಸ್ ಆಗುತ್ತಿದ್ದರಿಂದ ಅವರ ಗೆಳೆಯ ನಿರ್ಮಾಪಕ ವಿದು ವಿನೋದ್ ಛೋಪ್ರಾ ಫುಲ್ ಖುಷಿಯಾಗಿದ್ದಾರಂತೆ.
 
ಬಾಲಿವುಡ್ ನಲ್ಲಿ ಸಂಜಯ್ ದತ್ ಅವರ ಆಪ್ತರಲ್ಲಿ ಒಬ್ಬರು ವಿದು ವಿನೋದ್ ಛೋಪ್ರಾ ಪ್ರಮುಖರು. ಈ ಹಿಂದೆಯೇ ಸಂಜಯ್ ಜೈಲಿನಲ್ಲಿರುವಾಗಲೇ ವಿನೋದ್ ನಾನು ಸಂಜುಗಾಗಿ ಸಿನಿಮಾ ಮಾಡುತ್ತೇನೆ ಅಂತಾ ಹೇಳಿದ್ದರು. ಇದೀಗ ಮತ್ತೆ ಅದನ್ನೇ ಹೇಳಿದ್ದಾರೆ ವಿನೋದ್. ಸಂಜಯ್ ಜೈಲಿನಿಂದ ರಿಲೀಸ್ ಆಗುತ್ತಿರೋದು ನನಗೆ ತುಂಬಾನೇ ಖುಷಿಯಗುತ್ತಿದೆ. ನನ್ನಲ್ಲಿ ಅವರಿಗಾಗಿ ಅನೇಕ ಸ್ಕ್ರಿಫ್ಟ್ ಗಳಿವೆ. ಸಂಜಯ್ ಬಿಡುಗಡೆ ಯಾವಾಗ ಆಗ್ತಾರೆ ಅಂತಾ ನಾನು ಕಾಯುತ್ತಿದ್ದೆ ಅಂತಾ ಅವರು ಹೇಳಿದ್ದಾರೆ.ಅವನು ಬಂಜದ ನಂತರ ಅವನ ಜೊತೆ ಸಿನಿಮಾದ ಬಗ್ಗೆ ಮಾತನಾಡುತ್ತೇನೆ ಅಂತಾ ಅವರು ಹೇಳಿದ್ದಾರೆ.
 
ಅಲ್ಲದೇ ಸಂಜಯ್ ಐದು ವರ್ಷಗಳ ಕಾಲ ಶಿಕ್ಷೆ ಅನುಭವಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ವಿದು ವಿನೋದ್ ಅವನು ಮಾಡಿದ ತಪ್ಪಿಗೆ ಸರಿಯಾದ ಶಿಕ್ಷೆಯನ್ನು ಆ ಅನುಭವಿಸಿದ್ದಾನೆ.ಇದು ಅವನಿಗೆ ಪುರ್ನಜನ್ಮ.ನಾವೆಲ್ಲಾ ಅವನ ಜೊತೆ ಇರುತ್ತೇವೆ.ಅವನಿಗೆ ಕಳೆದ ಕೆಲ ವರ್ಷಗಳಿಂದ ಕೈಯಲ್ಲಿ ಅನೇಕ ಸಿನಿಮಾದ ಕಥೆಗಳನ್ನು ಇಟ್ಟುಕೊಂಡು ಕಾಯುತ್ತಿದ್ದೇನೆ ಅಂತಾ ಅವರು ಹೇಳಿದ್ದಾರೆ.

Share this Story:

Follow Webdunia kannada