Webdunia - Bharat's app for daily news and videos

Install App

ನಿರ್ದೇಶಕ ಭಟ್‌ ಕುಟುಂಬಕ್ಕೆ ಜೀವ ಬೆದರಿಕೆ ಕರೆ

Webdunia
ಗುರುವಾರ, 2 ಮಾರ್ಚ್ 2017 (17:50 IST)
ಬಾಲಿವುಡ್ ಪ್ರಮುಖ ನಟಿ ಆಲಿಯಾ ಭಟ್ ಕುಟುಂಬವನ್ನು ನಿರ್ನಾಮ ಮಾಡುತ್ತೇವೆಂದು ಅಪರಿಚಿತ ವ್ಯಕ್ತಿಯೊಬ್ಬ ಬೆದರಿಸಿದ್ದಾನೆ. ಆಲಿಯಾ ಭಟ್ ತಂದೆ, ನಿರ್ಮಾಪಕ ಮಹೇಶ್ ಭಟ್‌ಗೆ ದೂರವಾಣಿ ಕರೆ ಮಾಡಿ ರೂ.50 ಲಕ್ಷ ಕೊಡಬೇಕೆಂದು ಬೇಡಿಕೆ ಇಟ್ಟಿದ್ದಾರೆ.
 
ಒಂದು ವೇಳೆ ದುಡ್ಡು ಕೊಡದಿದ್ದರೆ ಮಗಳು ಆಲಿಯಾ ಭಟ್, ಪತ್ನಿ ಸೋನಿ ರಜ್ದಾನ್‍ರನ್ನು ಸಾಯಿಸುವುದಾಗಿ ಬೆದರಿಸಲಾಗಿದೆ. ಈ ಸಂಬಂಧ ಮಹೇಶ್ ಭಟ್ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಪ್ರಕರಣವನ್ನು ಮುಂಬೈ ಪೊಲೀಸರು ಸುಲಿಗೆ ವಿರೋಧಿ ಘಟಕ (ಎಎನ್‌ಸಿ)ಗೆ ಹಸ್ತಂತರಿಸಿದ್ದಾರೆ. 
 
ಈ ಘಟನೆ ಬಗ್ಗೆ ಪೊಲೀಸರು ಮಾತನಾಡುತ್ತಾ, ಅಪರಿಚಿತ ವ್ಯಕ್ತಿ ಮಹೇಶ್ ಭಟ್‌ಗೆ ಫೋನ್ ಮಾಡಿ ರೂ.50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾನೆ. ಮೊದಲು ಈ ಬೆದರಿಕೆಯನ್ನು ಅವರು ಗಂಭೀರವಾಗಿ ಪರಿಗಣಿಸಿಲ್ಲ. ಯಾರೋ ಸುಮ್ಮನೆ ಮಾಡುತ್ತಿದ್ದಾರೆ ಎಂದುಕೊಂಡಿದ್ದರು. ಆದರೆ ವಾಟ್ಸಾಪ್ ಸಂದೇಶಗಳ ಮೂಲಕ ಮತ್ತೆ ಬೆದರಿಕೆ ಬಂದ ಕಾರಣ ಅವರು ಪೊಲೀಸರ ಮೊರೆ ಹೋಗಿದ್ದಾರೆ. 
 
ತಾವು ಬೇಡಿಕೆ ಇಟ್ಟಿರುವ ಹಣವನ್ನು ಲಖನೌ ಬ್ಯಾಂಕ್ ಶಾಖೆಯಲ್ಲಿ ತುಂಬಬೇಕೆಂದು ಹೇಳಿದ್ದಾಗಿ ಮಹೇಶ್ ಭಟ್ ತಿಳಿಸಿದ್ದಾರೆ. ಒಂದು ವೇಳೆ ಹಣ ತುಂಬದಿದ್ದರೆ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದಿದ್ದಾರೆ. ಫೆ.26ರ ರಾತ್ರಿ ತಮಗೆ ಬೆದರಿಕೆ ಕರೆ ಬಂದಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. 
 
ಮಹೇಶ್ ಭಟ್ ಕುಟುಂಬಕ್ಕೆ ಬೆದರಿಕೆ ಬರುತ್ತಿರುವುದು ಇದು ಎರಡನೇ ಬಾರಿ. ಈ ಹಿಂದೆ ಇದೇ ರೀತಿ ಬೆದರಿಸಿದ್ದ 13 ಮಂದಿ ಗ್ಯಾಂಗನ್ನು ಪೊಲೀಸರು 2014ರಲ್ಲಿ ಬಂಧಿಸಿದ್ದರು. ಸೆಕ್ಷನ್ 387ರಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಭಟ್ ಕುಟುಂಬಕ್ಕೆ ಭದ್ರತೆ ಹೆಚ್ಚಿಸಿದ್ದಾರೆ.
 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Rakesh Poojari: ರಾಕೇಶ್ ಪೂಜಾರಿ ತಂಗಿಗಾಗಿ ಕಾಮಿಡಿ ಕಿಲಾಡಿಗಳು ಟೀಂನಿಂದ ದೊಡ್ಡ ನಿರ್ಧಾರ

ಹೃದಯ ಶ್ರೀಮಂತನಿಗೆ ಹೃದಯಾಘಾತವೇ: ರಾಕೇಶ್‌ ಅಗಲಿಕೆಗೆ ಸ್ನೇಹಿತೆ ನಯನ ಕಂಬನಿ ನುಡಿಗಳು

Rakesh Poojary No More: ರಾಕೇಶ್‌ಗೆ ಅಂತಿಮ ನಮನ ಸಲ್ಲಿಸಿ, ಅಳುತ್ತಲೇ ಕೂತಾ ರಕ್ಷಿತಾ ಪ್ರೇಮ್‌, ಅನುಶ್ರೀ, ಕಿರುತೆರೆ ಕಲಾವಿದರು

ಬಾಹುಬಲಿ, ಕೆಜಿಎಫ್ ಅಂತಹ ಪ್ಯಾನ್‌ ಇಂಡಿಯಾ ಸಿನಿಮಾ ಬಗ್ಗೆ ನಿರ್ಮಾಪಕ ಅನುರಾಗ್ ಕಶ್ಯಪ್ ಟೀಕೆ

Actor Upendra: ಪತ್ನಿ ಮಕ್ಕಳೊಂದಿಗೆ ಮಂತ್ರಾಲಯಕ್ಕೆ ತೆರಳಿದ ಉಪೇಂದ್ರ, ರಥ ಎಳೆದು ಹರಕೆ ತೀರಿಸಿದ ರಿಯಲ್ ಸ್ಟಾರ್‌

ಮುಂದಿನ ಸುದ್ದಿ
Show comments