Webdunia - Bharat's app for daily news and videos

Install App

ಮದುವೆಯ ಮಮತೆಯ ಕರೆಯೋಲೆ ಇವತ್ತು ತೆರೆಗೆ

Webdunia
ಶುಕ್ರವಾರ, 8 ಜನವರಿ 2016 (10:56 IST)
ಸ್ಯಾಂಡಲ್ ವುಡ್‌ನ ಗೀತ ಸಾಹಿತಿ ಕವಿರಾಜ್ ಅವರ ಚೊಚ್ಚಲ ಕೂಸು ಮದುವೆ ಮಮತೆಯ ಕರೆಯೋಲೆ ಸಿನಿಮಾ ಇವತ್ತು ತೆರೆಗೆ ಅಪ್ಪಳಿಸಲಿದೆ. ಜೊತೆ ಜೊತೆಯಲ್ಲಿ ನವಗ್ರಹ, ಬುಲ್ ಬುಲ್‌ನಂತಹ ಯಶಸ್ವಿ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ದಿನಕರ್ ತೂಗುದೀಪ ಅವರು `ಮದುವೆಯ ಮಮತೆಯ ಕರೆಯೋಲೆ’ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

ಈ ಸಿನಿಮಾದಲ್ಲಿ ಮೈಸೂರು ಮೂಲದ ಸೂರಜ್ ಎನ್ನುವ ಹೊಸ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಐದು ಸಾವಿರ ಮಂದಿ ಯುವ ಕಲಾವಿದರಲ್ಲಿ ನಾಯಕನಾಗಿ ಸೂರಜ್ ಆಯ್ಕೆಯಾಗಿರುವುದು ವಿಶೇಷ. ಇನ್ನು ನಾಯಕಿಯಾಗಿ ಸ್ಯಾಂಡಲ್ ವುಡ್‌ನ ಕ್ಯೂಟ್ ಬೇಬಿ ಅಮೂಲ್ಯ ಅವರು ಕಾಣಿಸಿಕೊಂಡಿದ್ದಾರೆ. ಅಂದ್ಹಾಗೆ ಎರಡು ಕುಟುಂಬದ ಕಥೆಯನ್ನು ಇಟ್ಟುಕೊಂಡು ಈ ಸಿನಿಮಾವನ್ನು ಮಾಡಲಾಗಿದೆಯಂತೆ.  ಪ್ರೀತಿ ಎರಡನೇ ಭಾಗವಾಗಿದ್ದರೂ ಮಾನವೀಯ ಮೌಲ್ಯವನ್ನು ಜೀವನ ಎಷ್ಟು ಸುಂದರ ಎನ್ನುವುದನ್ನು ಈ ಸಿನಿಮಾ ಹೇಳುತ್ತಂತೆ. 
 
ಬಹುತಾರಾಗಣವಿರುವ ಈ ಸಿನಿಮಾದಲ್ಲಿ ಅನಂತ್ ನಾಗ್ ಒಂದು ವಿಭಿನ್ನ ಪಾತ್ರದಲ್ಲಿ ಮಿಂಚಿದ್ದಾರಂತೆ. ಇನ್ನುಳಿದಂತೆ ಅಚ್ಯುತ್ ರಾವ್, ಸುಂದರ್ ಪಾಪ ಪಾಂಡು ಧಾರಾವಾಹಿ ಖ್ಯಾತಿಯ ಶಾಲಿನಿ, ಕಾಮಿಡಿ ಕಿಂಗ್ ಚಿಕ್ಕಣ್ಣ ಮುಂತಾದವರು ಸಿನಿಮಾದಲ್ಲಿದ್ದಾರೆ. ಈ ಸಿನಿಮಾ ಈಗಗಾಲೇ ಸಾಕಷ್ಟು  ನಿರೀಕ್ಷೆ ಹುಟ್ಟಿಸಿದ್ದು ಸಿನಿಮಾ ರಿಲೀಸ್ ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments