Select Your Language

Notifications

webdunia
webdunia
webdunia
webdunia

ಐಶ್ವರ್ಯಾ ರೈಯನ್ನು ಸಾಯಿಸುತ್ತೇನೆ ಎಂದ ನಟ

ಐಶ್ವರ್ಯಾ ರೈಯನ್ನು ಸಾಯಿಸುತ್ತೇನೆ ಎಂದ ನಟ
Mumbai , ಸೋಮವಾರ, 23 ಜನವರಿ 2017 (14:54 IST)
ಬಾಲಿವುಡ್ ನಟ ಕರಣ್ ಜೋಹರ್ ಸೆನ್ಸೇಷನಲ್ ಹೇಳಿಕೆ ಕೊಟ್ಟಿದ್ದಾರೆ. ದೀಪಿಕಾ ಪಡುಕೋಣೆಯನ್ನು ಮದುವೆಯಾಗುತ್ತೇನೆ. ಕತ್ರಿಕಾ ಕೈಫ್ ಜೊತೆ ಸಂಬಂಧ ಇಟ್ಟುಕೊಳ್ಳುತ್ತೇನೆ. ಐಶ್ವರ್ಯಾ ರೈ ಅವರನ್ನು ಕೊಲ್ಲುತ್ತೇನೆ ಎಂದಿದ್ದಾರೆ ಕರಣ್.
 
ಕರಣ್‌ಗೆ ಏನಾದರೂ ತಲೆಗಿಲೆ ಕೆಟ್ಟಿದೆಯಾ? ಯಾಕೀಗೆ ಮಾತನಾಡುತ್ತಿದ್ದಾನೆ ಎಂದು ಎಲ್ಲರೂ ಚಕಿತರಾಗಿದ್ದಾರೆ. ಈ ರೀತಿ ಮಾತನಾಡಿರುವುದು ಬೇರೆಲ್ಲೂ ಅಲ್ಲ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ. ಈ ವಿಡಿಯೋವನ್ನು ಎಲ್ಲರೊಂದಿಗೂ ಶೇರ್ ಮಾಡಿಕೊಂಡಿದ್ದಾರೆ ಕರಣ್.
 
ಕರಣ್‌ಗೆ ಈ ಪ್ರಶ್ನೆ ಎದುರಾಗಿದ್ದು ಆಲಿಯಾ ಭಟ್ ಮತ್ತು ಶಾರುಖ್ ಖಾನ್ ರಿಂದ. ಅವರ ಪ್ರಶ್ನೆಗೆ ಉತ್ತರಿಸುತ್ತಾ ಐಶ್ವರ್ಯಾಳನ್ನು ಕೊಲೆ ಮಾಡುತ್ತೇನೆ ಎಂದಿದ್ದಾರೆ. ಯಾಕೆ ಎಂದು ಶಾರುಖ್ ಕೇಳಿದಾಗ. "ಯಾಕೆಂದರೆ ಅಭಿಷೇಕ್ ಮತ್ತು ನಾನು ಒಟ್ಟಿಗೆ ಬೆಳೆದವರು. ಆದರೆ ಐಶ್ ಜೊತೆಗೆ ನಾನೇನೇ ಮಾಡಕ್ಕೆ ಆಗಲಿಲ್ಲ. ಹಾಗಾಗಿ ಆಕೆಯನ್ನು ಕೊಲ್ಲುತ್ತೇನೆ" ಎಂದು ತಮಾಷೆಯ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ. ಇತ್ತೀಚೆಗಷ್ಟೇ ಕರಣ್ ನಿರ್ದೇಶನದ ಏ ದಿಲ್ ಹೈ ಮುಷ್ಕಿಲ್ ಚಿತ್ರದಲ್ಲಿ ಐಶ್ವರ್ಯಾ ರೈ ಮತ್ತು ಅನುಷ್ಕಾ ಶರ್ಮಾ ಅಭಿನಯಿಸಿದ್ದು ಗೊತ್ತೇ ಇದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

’ಡಮ್ಕಿ ಡಮಾರ್' ಚಿತ್ರದಲ್ಲಿ ಅರ್ಜುನ್ ಜನ್ಯ ಮುನ್ನುಡಿ