Select Your Language

Notifications

webdunia
webdunia
webdunia
webdunia

ಸಕ್ಕರೆ ನಾಡಲ್ಲಿ 'ಜ್ವಾಗಾರ್ 'ಚಿತ್ರದ ಧ್ವನಿ ಸುರಳಿ ಸೆಪ್ಟೆಂಬರ್ 2ಕ್ಕೆ ಬಿಡುಗಡೆ

ಸಕ್ಕರೆ ನಾಡಲ್ಲಿ  'ಜ್ವಾಗಾರ್ 'ಚಿತ್ರದ ಧ್ವನಿ ಸುರಳಿ ಸೆಪ್ಟೆಂಬರ್ 2ಕ್ಕೆ ಬಿಡುಗಡೆ
ಬೆಂಗಳೂರು , ಶನಿವಾರ, 13 ಆಗಸ್ಟ್ 2016 (12:32 IST)
ಸಕ್ಕರೆ ನಾಡಲ್ಲಿ ನಟ ನಿಖಿಲ್ ಗೌಡ ಅಭಿನಯದ 'ಜಾಗ್ವಾರ್' ಚಿತ್ರದ ಧ್ವನಿ ಸುರುಳಿ ಕಾರ್ಯಕ್ರಮ ನಡೆಯಲಿದೆ.  ಸೆಪ್ಟೆಂಬರ್ 2ರಂದು ಮಂಡ್ಯ ನಾಡಲ್ಲಿ 'ಜಾಗ್ವಾರ್' ಚಿತ್ರದ ಧ್ವನಿ ಸುರಳಿ ನಡೆಯಲಿದೆ. ಇಲ್ಲಿನ ಸರ್. ಎಂ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಅದ್ಧೂರಿ ಬಿಡುಗಡೆ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾರೆ ಹೆಚ್.ಡಿ ಕುಮಾರ್ ಸ್ವಾಮಿ. 


ಮಂಡ್ಯ ಜಿಲ್ಲೆಯಲ್ಲಿ ಹಿರಿಯ ಕಲಾವಿದರೂ ಆರ್ಥಿಕ ನಷ್ಟ ಅನುಭವಿಸುತ್ತಾರೆ. ಇನ್ನೂ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವ ಮೂಲಕ ಧ್ವನಿ ಸುರುಳಿ ಕಾರ್ಯಕ್ರಮ ನಡೆಯಲಿದೆ ಎಂದು ಹೆಚ್‌ಡಿಕೆ ಹೇಳಿದರು. 
 
ಬಹುತೇಕರು ಬೆಂಗಳೂರಿನಲ್ಲೇ ಧ್ವನಿ ಸುರುಳಿ ಬಿಡುಗಡೆ ಮಾಡುವಂತೆ ಬೇಡಿಕೆ ಇಟ್ಟಿದ್ದರು.. ಆದ್ರೆ ಈ ಬೇಡಿಕೆಯನ್ನು ಬದಿಗಿಟ್ಟು ಜೆಡಿಎಸ್ ನಾಯಕರು ಹಾಗೂ ಅಭಿಮಾನಿಗಳು ಮನವಿಗೆ ಓಗೊಟ್ಟು ಮಂಡ್ಯದಲ್ಲಿ ವಿಶಿಷ್ಟವಾಗಿ ಬಿಡುಗಡೆ ಮಾಡುವ ತಯಾರಿ ನಡೆಸಿರುವುದಾಗಿ ಚಿತ್ರದ ನಿರ್ಮಾಪಕರು ಆಗಿರೋ ಎಚ್.ಡಿ ಕುಮಾರ್ ಸ್ವಾಮಿ ಹೇಳಿದ್ದಾರೆ. 
 
ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಗೌಡ 'ಜಗ್ವಾರ್' ಚಿತ್ರದಲ್ಲಿ ಅಭಿನಯಿಸುತ್ತಿರುವುದು ಎಲ್ಲರಿಗೂ ಗೊತ್ತು. ಟೀಮ್ ಕೂಡ ಚಿತ್ರದ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದು, ಇಚೆಗಷ್ಟೇ ಬಲ್ಗೇರಿಯಾದಿಂದ ನಿಖಿಲ್ ಶೂಟಿಂಗ್ ಮುಗಿಸಿ ವಾಪಸ್ ಆಗಿದ್ದರು. ಅಂದಹಾಗೆ 'ಜಗ್ವಾರ್' ಚಿತ್ರದ ಶೂಟಿಂಗ್ ಶೆಡ್ಯೂಲ್‌ನಲ್ಲಿ ಬ್ಯೂಸಿ ಇರುವ ನಿಖಿಲ್‌ಗೆ ನಿದ್ದೆ ಮಾಡುವುದಕ್ಕೆ ಟೈಮೇ ಸೀಗುತ್ತಿಲ್ವಂತೆ..

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 
 
 

Share this Story:

Follow Webdunia kannada

ಮುಂದಿನ ಸುದ್ದಿ

ಚಿತ್ರ ವೀಕ್ಷಿಸಲು ಬರೋಬ್ಬರಿ 70 ಟಿಕೆಟ್‌ ಖರೀದಿ ಮಾಡಿದ ವಿಶಿಷ್ಟ ಅಭಿಮಾನಿ