ಸದ್ಯ ಸ್ಯಾಂಡಲ್ ವುಡ್ ನಲ್ಲಿ ಜಿಂಗರ್ ಥಂಡ್ ಸಿನಿಮಾದ ಹವಾ ಜೋರಾಗಿದೆ. ಸಿನಿಮಾಕ್ಕೆ ಭರ್ಜರಿಯಾಗಿ ಓಪನಿಂಗ್ ಸಿಕ್ಕಿರೋದರಿಂದ ಸಿನಿಮಾ ತಂಡ ಕೂಡ ಫುಲ್ ಖುಷಿಯಾಗಿದೆ. ಇದೇ ಖುಷಿಯನ್ನು ಸಿನಿಮಾ ತಂಡ ಊರೂರು ಸುತ್ತುವ ಮೂಲಕ ಜನರೊಂದಿಗೆ ಹಂಚಿಕೊಳ್ಳುತ್ತಿದೆ.
ಜಿಗರ್ ಥಂಡ್ ಸಿನಿಮಾಕ್ಕೆ ಜನರು ನೀಡಿರುವ ರೆಸ್ಪಾನ್ಸ್ ನೋಡಿ ಫುಲ್ ಖುಷಿಯಾಗಿರುವ ಸಿನಿಮಾ ತಂಡ ಅದಕ್ಕಾಗಿ ರೋಡ್ ಟ್ರಿಪ್ ಹಮ್ಮಿಕೊಂಡಿತ್ತು. ರಾಜ್ಯದಾದ್ಯಂತ ಸಂಚರಿಸಿದ ಸಿನಿಮಾ ತಂಡದ ಸದಸ್ಯರು ಅಭಿಮಾನಿಗಳೊಂದಿಗೆ ಕಾಲ ಕಳೆದರು. ಸಿನಿಮಾದ ನಾಯಕ ರಾಹುಲ್, ನಟ ರವಿಶಂಕರ್ ಹಾಗೇ ಸಿನಿಮಾಟೋಗ್ರಾಫರ್ ಜೈ ಆನಂದ್ ಅವರನ್ನು ಒಳಗೊಂಡ ತಂಡ ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಿಗೆ ಭೇಟಿ ಕೊಡ್ತು. ಮಂಡ್ಯ, ತುಮಕೂರು, ಮೈಸೂರು,ಹಾಸನ್, ಬೆಳಗಾವಿ, ಧಾರವಾಡ, ಹುಬ್ಬಳ್ಳಿ,ದಾವಣಗೆರೆ ಹೀಗೆ ಬೇರೆ ಬೇರೆ ಕಡೆ ಸಂಚರಿಸಿ ಜನರೊಂದಿಗೆ ಸಿನಿಮಾದ ಯಶಸ್ಸಿನ ಖುಷಿಯನ್ನು ಹಂಚಿಕೊಂಡ್ರು.
ಇನ್ನು ಜನರೊಂದಿಗೆ ಕಾಳ ಕಳೆದಿದ್ದು ನಮಗೆ ತುಂಬಾನೇ ಖುಷಿಯಾಯ್ತು ಅಂತಾ ಸಿನಿಮಾ ನಾಯಕ ರಾಹುಲ್ ಅವರು ಹೇಳಿದ್ರು.ಅಲ್ಲದೇ ಜನರೊಂದಿಗೆ ನಾವು ನಾವು ಮಾತನಾಡುವಾಗ ತುಂಬಾನೇ ಎಂಜಾಯ್ ಮಾಡಿದ್ದವು. ನಮ್ಮ ಸಿನಿಮಾವನ್ನು ಅವರು ಎಷ್ಟರಮಟ್ಟಿಗೆ ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ ಅಂದ್ರೆ ಸಿನಿಮಾದ ಪ್ರತಿ ಡೈಲಾಗ್ ಗಳು ಅವರ ಬಾಯಲ್ಲಿ ಇವೆ. ಇದನ್ನು ನೋಡಿದಾಗ ಖುಷಿಯಾಯ್ತು ಅಂತಾ ಅವರು ಹೇಳಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.