Webdunia - Bharat's app for daily news and videos

Install App

ತ್ರಿವಳಿ ತಲಾಖ್ ನಿಲ್ಲಬೇಕು ಎಂದ ಚಿತ್ರ ಸಾಹಿತಿ ಜಾವೇದ್ ಅಖ್ತರ್

Webdunia
ಶನಿವಾರ, 12 ನವೆಂಬರ್ 2016 (23:45 IST)
ಮುಂಬೈ: ದೇಶದಲ್ಲಿ ಮುಸ್ಲಿಂ ಸಂಪ್ರದಾಯದಂತೆ ತ್ರಿವಳಿ ತಲಾಖ್ ಪದ್ಧತಿ ನಿಲ್ಲಿಸುವ ಬಗ್ಗೆ ಚರ್ಚೆಗಳಾಗುತ್ತಿರಬೇಕಾದರೆ, ಬಾಲಿವುಡ್ ಚಿತ್ರ ಸಾಹಿತಿ ಜಾವೇದ್ ಅಖ್ತರ್ ಇಂತಹ ಪದ್ಧತಿ ನಿರ್ನಾಮವಾಗಬೇಕು ಎಂದಿದ್ದಾರೆ.

ನರೇಂದ್ರ ಮೋದಿ ಸರ್ಕಾರ ತ್ರಿವಳಿ ತಲಾಖ್ ನಿಲ್ಲಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಿರುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು “ನಾನು ಹಲವು ವರ್ಷಗಳಿಂದಲೂ ಇಂತಹದ್ದೊಂದು ಪದ್ಧತಿ ನಾಗರಿಕ ಸಮಾಜದಿಂದ ಕಿತ್ತೊಗೆಯಬೇಕು ಎಂದು ವಾದಿಸುತ್ತಿದ್ದೆ. ಆದರೆ ನಮ್ಮದು ಬೃಹತ್ ರಾಷ್ಟ್ರವಾದ್ದರಿಂದ ಏಕರೂಪ ನಾಗರಿಕ ಸಂಹಿತೆ ಎಷ್ಟರಮಟ್ಟಿಗೆ ಜಾರಿಯಾಗುತ್ತದೆ  ಎಂದು ಗೊತ್ತಿಲ್ಲ” ಎಂದಿದ್ದಾರೆ.

ಇಂತಹ ವಿಷಯಗಳನ್ನು ನಾಗರಿಕರ ಚರ್ಚೆಗೆ ಬಿಡಬೇಕೆಂದ ಅವರು ರಾಜಕೀಯ ನಾಯಕರ ದುರುದ್ದೇಶದಿಂದ ಕೂಡಿದ ಉತ್ತಮ ಯೋಜನೆಗಳೂ ಒಳ್ಳೆಯದಲ್ಲ ಎಂದರು. ಇಂದು ಇಸ್ಲಾಂ ಮತ್ತು ಹಿಂದೂ ಧರ್ಮಗಳು ಎರಡೂ ಅಪಾಯದಲ್ಲಿದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮಾಧ್ಯಮದ ಮುಂದೆ ಮಹಿಳೆಗೆ ಕ್ಷಮೆ ಕೇಳಿದ ಯುವ ರಾಜ್‌ಕುಮಾರ್, ಕಾರಣ ಇಲ್ಲಿದೆ

ರಜನಿಕಾಂತ್ ನಟನೆಯ ಜೈಲರ್ 2 ಚಿತ್ರತಂಡದ ಜತೆ ಸೇರಿಕೊಂಡ್ರಾ ಬಾಲಿವುಡ್‌ನ ಸೂಪರ್ ಸ್ಟಾರ್‌

ರಾಜ್‌ ನಿಡಿಮೋರು, ಸುಮಂತಾ ಡೇಟಿಂಗ್ ವದಂತಿ: ಗಮನ ಸೆಳೆಯುತ್ತಿದೆ ಮಾಜಿ ಪತ್ನಿ ಪೋಸ್ಟ್‌

ನನ್ನ ತಪ್ಪೇನಿಲ್ಲ, ಯಾವ ಬೆದರಿಕೆಗೂ ಬಗ್ಗುವುದಿಲ್ಲ: ಗಂಭೀರ ಆರೋಪಕ್ಕೆ ಗೋಲ್ಡ್ ಸುರೇಶ್ ಪ್ರತಿಕ್ರಿಯೆ

ಥಗ್‌ ಲೈಫ್‌ ಸಿನಿಮಾಕ್ಕೆ ರಾಜ್ಯದಲ್ಲಿ ನಿರ್ಬಂಧ ಹೇರಿಲ್ಲ: ಚಾಟಿ ಬೆನ್ನಲ್ಲೇ ಸುಪ್ರೀಂಗೆ ಸರ್ಕಾರದ ಪ್ರತಿಕ್ರಿಯೆ

ಮುಂದಿನ ಸುದ್ದಿ
Show comments