Select Your Language

Notifications

webdunia
webdunia
webdunia
webdunia

ರಮ್ಯಾ ಟ್ವೀಟ್ ಕುರಿತು ಜಿ. ಮಾದೇಗೌಡ ಅಸಮಾಧಾನ

ರಮ್ಯಾ ಟ್ವೀಟ್ ಕುರಿತು ಜಿ. ಮಾದೇಗೌಡ ಅಸಮಾಧಾನ
ಮಂಡ್ಯ , ಶನಿವಾರ, 10 ಸೆಪ್ಟಂಬರ್ 2016 (10:25 IST)
ಕಾವೇರಿ ಹೋರಾಟದಲ್ಲಿ ರಮ್ಯಾ ಟ್ವೀಟ್ ವಿಚಾರಕ್ಕೆ ಸಂಬಂಧಪಟ್ಟಂತೆ ಜಿ ಮಾದೇಗೌಡ ಅಸಮಾಧಾನ
ವ್ಯಕ್ತಪಡಿಸಿದ್ದಾರೆ. ಇಂದು ಮಂಡ್ಯದಲ್ಲಿ ಹೇಳಿಕೆ ನೀಡಿರುವ ಅವರು,  ಬೇಜವಾಬ್ದಾರಿ ಹೇಳಿಕೆ ನೀಡಿರುವವ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.


ಮೊನ್ನೆ ಮನೆಗೆ ಬಂದಾಗ ಬುದ್ಧಿ ಹೇಳಿ ಕಳುಹಿಸಿದ್ದೆ, ಸಮಯ ಬಂದಾಗ ಜನರೇ ಬುದ್ಧಿ ಕಲಿಸುತ್ತಾರೆ ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ. ಮಾದೇಗೌಡ ತಿಳಿಸಿದರು.

ಬೀದಿಗಿಳಿದು ಹೋರಾಡುವವರಿಗಿಂತ, ನಾನು ರೈತರನ್ನು ಬೆಂಬಲಿಸುತ್ತೇನೆ. ಬೀದಿಗಿಳಿದು ಹೋರಾಡುವುದರಿಂದ ಸಮಸ್ಯೆಗೆ ಪರಿಹಾರವಲ್ಲ ಎಂದು ರಮ್ಯಾ ನಿನ್ನೆ ಟ್ವೀಟರ್ ನಲ್ಲಿ ಬರೆದುಕೊಂಡಿದ್ದರು. 
 
ಸ್ಯಾಂಡಲ್‌ವುಡ್‌ನ ನಟ -ನಟಿಯರು ಭಾಗಿಯಾಗಿದ್ರೆ, ಇತ್ತ ಮಾಜಿ ಸಂಸದೆ ನಟಿ ರಮ್ಯಾ ಸುಳಿವಿಲ್ಲ. ರಾಜ್ಯದೆಲ್ಲೆಡೆ ಜನರು, ಚಿತ್ರರಂಗದ ಕಲಾವಿದರು ಭಾಗಿಯಾಗಿದ್ರೆ ರಮ್ಯಾ ಮಾತ್ರ ಇದುವರೆಗೂ ಪ್ರತಿಭಟನೆಯಲ್ಲಿ ಭಾಗಿಯಾಗಲಿಲ್ಲ. 
 
ಪ್ರತಿಭಟನೆಯಲ್ಲಿ ರಮ್ಯಾ ಭಾಗಿಯಾಗದ ಹಿನ್ನೆಲೆ ಕೆಲೆವೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಹೋರಾಟವಾಗುತ್ತಿದ್ದರೂ ತಿರುಗಿಯು ನೋಡಲಿಲ್ಲ ಎಂದು ಮಾಜಿ ಸಂಸದೆ ರಮ್ಯಾ ವಿರುದ್ಧ ಜನರಿಂದ ಆಕ್ರೋಶ ವ್ಯಕ್ತವಾಗುತ್ತಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದೆಲ್ಲೆಡೆ ಮುಂಗಾರು ಮಳೆ 2 ಸಿನಿಮಾ ರಿಲೀಸ್.. ಅಭಿಮಾನಿಗಳ ದಂಡು