ಈ ರೀತಿ ಹೇಳುವ ಪರಿಸ್ಥಿತಿ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಳಿಗೆ ಹೇಳುವ ಪರಿಸ್ಥಿತಿ ಉಂಟಾಗಿದೆ ಎಂದೇ ಹೇಳ ಬಹುದಾಗಿದೆ. ಈ ರೀತಿಯ ಗಾಳಿ ವಾರ್ತೆಗಳು ಹೇಗೆ ಹರಡುತ್ತದೆಯೋ ಗೊತ್ತಿಲ್ಲ. ಕೆಲಸ ಇಲ್ಲದೆ ಸುಖಾ ಸುಮ್ಮನೆ ಹೀಗೆ ಪ್ರಚಾರ ಮಾಡ್ತಾ ಇರ್ತಾರೆ ವದಂತಿಗಳನ್ನು ಎಂದು ಸೋನಾಕ್ಷಿ ಸಿನ್ಹ ಹರಿ ಹಾಯ್ದಿದ್ದಾಳೆ.
ಆಕೆಗೆ ಆ ಪರಿ ಕೋಪ ಬರಲು ಕಾರಣ ಇದೆ. ಸೋನಾಕ್ಷಿ ಮತ್ತು ಅರ್ಜುನ್ ಕಪೂರ್ ಅವರ ನಡುವೆ ಪ್ರೇಮಾಯಣ ನಡೆಯುತ್ತಿದೆ ಎನ್ನುವ ಸುದ್ದಿಯನ್ನು ಬಾಲಿವುಡ್ ಮಾಧ್ಯಮ ಲೋಕ ಬರೆಯುತ್ತಲೇ ಇವೆ. ಸಿಕ್ಕಾಪಟ್ಟೆ ಗಾಸಿಪ್ಗಳನ್ನು ಓದಿ ಸಾಕಾಗಿ ಆಕೆ ಈಗ ಸಿಟ್ಟಿಗೆದ್ದಿದ್ದಾಳೆ. ಆಕೆಯ ಕೋಪ ಮಿತಿಮೀರಿದ್ದು, ಅದಕ್ಕೆ ಈಗ ಪ್ರತಿಕ್ರಿಯೆ ತೋರಿದ್ದಾಳೆ. ಅರ್ಜುನ್ ಹಾಗೂ ನನ್ನ ನಡುವೆ ಅಂತಹದ್ದೇನು ಇಲ್ಲ.
ನಾವಿಬ್ಬರು ಒಟ್ಟಿಗೆ ಸಿನಿಮಾದಲ್ಲಿ ನಟಿಸಿದರೆ ಅದು ಪ್ರೀತಿ ಮಾಡಿದಂತೆ ಎಂದು ಅರ್ಥವೇ? ಒಟ್ಟಿಗೆ ಸಿನಿಮಾ ನೋಡಿದರೆ ಪ್ರೀತಿಸಿದಂತೆ ಎಂದರ್ಥವೆ? ಒಳ್ಳೆಯ ಫೆಂಡ್ ಜೊತೆ ಸಿನಿಮಾ ನೋಡಲೇ ಬಾರದೆ? ನಮ್ಮ ಇಬ್ಬರ ನಡುವೆ ಹರಡುತ್ತಿರುವ ಸುದ್ದಿ ಓದಿ ಸಾಕಾಗಿದೆ. ಇನ್ನು ಮುಂದಾದರು ನಮ್ಮ ಬಗ್ಗೆ ಮಾತನಾಡದಿರಿ. ಅಕಸ್ಮಾತ್ ಮಾತಾಡಿದರೂ ಸಹಿತ ನಾನು ಕೇರ್ ಮಾಡಲ್ಲ . ಇನ್ನು ಮುಂದೆ ನನ್ನ ಬಗ್ಗೆ ಹರಡುವ ಈ ರೀತಿಯ ಸುದ್ದಿಗಳಿಗೆ ಬೆಲೆ ಕೊಡಲ್ಲ ಎಂದು ಹೇಳಿದ್ದಾಳೆ ಸೋನಾಕ್ಷಿ.