Select Your Language

Notifications

webdunia
webdunia
webdunia
webdunia

ಕಾಟನ್ ಪೇಟೆ ಸಿನಿಮಾ ತಂಡದ ವಿರುದ್ಧ ಆದಿತ್ಯಾ ಗರಂ

ಕಾಟನ್ ಪೇಟೆ ಸಿನಿಮಾ ತಂಡದ ವಿರುದ್ಧ ಆದಿತ್ಯಾ ಗರಂ
ಬೆಂಗಳೂರು , ಶನಿವಾರ, 23 ಜುಲೈ 2016 (09:05 IST)
ಕಳೆದ ವಾರವಷ್ಟೇ ನಿರ್ದೇಶಕ ಓಂ ಪ್ರಕಾಶ್ ಹಾಗೂ ನಿರ್ಮಾಪಕ ಸುಧೀಂದರ ಬಿ.ಎಸ್ ಅವರ ತಮ್ಮ ಕಾಟನ್ ಪೇಟೆ ಅನ್ನೋ ಸಿನಿಮಾದ ಕೆಲಸವನ್ನು ಆರಂಭಿಸಿದ್ದರು.ಆದರೆ ಇನ್ನೇನು ಸಿನಿಮಾದ ಕೆಲಸ  ಆರಂಭವಾಯ್ತು ಅನ್ನೋವಾಗಲೇ ಸಿನಿಮಾಕ್ಕೆ ಸಂಕಷ್ಟ ಎದುರಾಗಿದೆ. ನಟ ಆದಿತ್ಯಾ ಅವರು ಸಿನಿಮಾ ತಂಡದ ವಿರುದ್ಧ ಗರಂ ಆಗಿದ್ದಾರೆ.

ಅಷ್ಟಕ್ಕೂ ಆದಿತ್ಯ ಅವರು ಗರಂ ಆಗಿರೋದು ಯಾಕೆ ಗೊತ್ತಾ.ಅಂದ್ಹಾಗೆ ಕಾಟನ್ ಪೇಟೆ ಅನ್ನೋ ಸಿನಿಮಾವನ್ನು 2011 ರಲ್ಲಿ  ನಿರ್ದೇಶಕ ಓಂ ಪ್ರಕಾಶ್ ರಾವ್ ಹಾಗೂ ಸುಧೀಂದ್ರ ಅವರು ಆರಂಭಿಸಿದ್ದರಂತೆ. ಅದರಲ್ಲಿ ನಟ ಆದಿತ್ಯಾ ಹಾಗೂ ನಿಕಿತಾ ತುಕ್ರಾಲ್ ಅವರನ್ನು ನಾಯಕ ನಾಯಕಿಯನ್ನಾಗಿ ಮಾಡಲಾಗಿತ್ತು.ಆದ್ರೆ ದರ್ಶನ್ ಹಾಗೂ ನಿಕಿತಾ ವಿವಾದಿಂದಾಗಿ ಸಿನಿಮಾ ಅರ್ಧಕ್ಕೆ ನಿಂತಿತ್ತು.

ಆದ್ರೀಗ ಅದೇಹೆಸರಿನ ಸಿನಿಮಾವನ್ನು ಓಂಪ್ರಕಾಶ್ ಹಾಗೂ ಸುಧೀಂದ್ರ ಅವರು ದುನಿಯಾ ವಿಜಯ್ ಹಾಗೂ ಪಾರುಲ್ ಯಾದವ್ ಅವರನ್ನು ಹಾಕಿಕೊಂಡು ಮಾಡುತ್ತಿದ್ದಾರೆ . ಇದು ಆದಿತ್ಯಆ ಅವರ ಕಣ್ಣು ಕೆಂಪಗಿಸಿದೆ.

ಕಾಟನ್ ಪೇಟೆ ಸಿನಿಮಾದಲ್ಲಿ ನಾನು ಹಾಗೂ ನಿಕಿತಾ ಸುಮಾರು ಶೇಕಡಾ 80 ರಷ್ಟು ಶೂಟಿಂಗ್ ಕಂಪ್ಲೀಟ್ ಆಗಿದೆ.ಸಿನಿಮಾದ ಕ್ಲೈಮ್ಯಾಕ್ಸ್ ಶೂಟಿಂಗ್ ಮಾತ್ರ ಬಾಕಿ ಉಳಿದಿತ್ತು. ಇದೀಗ ಅದೇ ಕಥೆಯ ಅದೇ ಹೆಸರಿನ ಸಿನಿಮಾವನ್ನು ಇವರಿಬ್ಬರು ಮಾಡುತ್ತಿದ್ದಾರೆ ಅಂತಾ ಆದಿತ್ಯ ಆರೋಪಿಸಿದ್ದಾರೆ.

ನಾನು ಈ ಬಗ್ಗೆ ಮಾತನಾಡಲು ಓಂಪ್ರಕಾಶ್ ವರಿಗೆ ಕಾಲ್ ಮಾಡಿದಾಗ ಅವರು ಪ್ರತಿಕ್ರಿಯೆ ನೀಡಲಿಲಲ್ಲ.ಸುಧೀಂದ್ರ ಅವರನ್ನು ಕೇಳಿದಾಗ ಹೆಸರಷ್ಟೇ ಒಂದೇ.ಆದ್ರೆ ಸಿನಿಮಾ ಬೇರೆ ಅಂತಾ ಹೇಳಿದ್ದಾರೆ. ಹಾಗಾಗಿ ನಾನು ಕಲಾವಿದರ ಸಂಘದಲ್ಲಿ ದೂರು ದಾಖಲಿಸಿದ್ದೇನೆ ಅಂತಾ ಆದಿತ್ಯ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

Share this Story:

Follow Webdunia kannada

ಮುಂದಿನ ಸುದ್ದಿ

ಸ್ಪೆಷಲ್ ನಂಬರ್ ಸಾಂಗ್ ಗೆ ಹೆಜ್ಜೆ ಹಾಕಿದ ನಟಿ ಐಂದ್ರಿತಾರೇ