Webdunia - Bharat's app for daily news and videos

Install App

ವಿಭಜನೆಯಾದ ಬಾಲಿವುಡ್!

Webdunia
ಸೋಮವಾರ, 24 ಅಕ್ಟೋಬರ್ 2016 (10:10 IST)
ಮುಂಬೈ: ಏ ದಿಲ್ ಹೇ ಮುಷ್ಕಿಲ್ ಸಿನಿಮಾ ಏನೆಲ್ಲಾ ಮಾಡಿದೆ ನೋಡಿ. ನಿರ್ಮಾಪಕರು ಸೈನಿಕರ ಯೋಗಕ್ಷೇಮಾಭಿವೃದ್ಧಿ ನಿಧಿಗೆ 5 ಕೋಟಿ ಕೊಡಲು ಒಪ್ಪಿರುವುದು ಮತ್ತು ಪಾಕ್ ಕಲಾವಿದರನ್ನು ಇನ್ನು ಸಿನಿಮಾದಲ್ಲಿ ಬಳಸುವುದಿಲ್ಲ ಎಂಬ ವಿಚಾರದಲ್ಲಿ ಬಾಲಿವುಡ್ ಇಬ್ಬಾಗವಾಗಿದೆ.

“ಪಾಕಿಸ್ತಾನ ಕಲಾವಿದರನ್ನು ಬಳಸಿಕೊಂಡ ಸಿನಿಮಾ ನಿರ್ಮಾಪಕರು ಸೈನಿಕರ ನಿಧಿಗೆ 5 ಕೋಟಿ ರೂ. ನೀಡಬೇಕು ಎಂಬುದು ನಿಜಕ್ಕೂ ಸರಿಯಲ್ಲ. ದಾನ ಮಾಡುವುದು ಒತ್ತಾಯ ಪೂರ್ವಕವಾಗಿರಬಾರದು. ಹೃದಯಪೂರ್ವಕವಾಗಿರಬೇಕು” ಎಂದು ನಿರ್ಮಾಪಕ ಅಶೋಕೆ ಪಂಡಿತ್ ಹೇಳಿದ್ದಾರೆ.

ದೇಶದ ಗೌರವದ ಪ್ರತೀಕವಾಗಿರುವ ಸೈನಿಕರ ಹೆಸರಲ್ಲಿ ಹಣ ಸೂರೆ ಮಾಡುತ್ತಿದೆ ಎಂದು ನಟಿ ತಾರಾ ದೇಶಪಾಂಡೆ ಎಂಎನ್ಎಸ್ ಸಂಘಟನೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನು ನಿರ್ಮಾಪಕಿ ಕಂ ನಟಿ ಪೂಜಾ ಭಟ್ ಕೂಡಾ ಇದೇ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆದರೆ ಅಭಯ್ ಡಿಯೋಲ್ ಅವರು ಮಾತ್ರ ಇದನ್ನು ಬೆಂಬಲಿಸಿದ್ದಾರೆ. “ಪಾಕಿಸ್ತಾನಕ್ಕೆ ಸಹಕಾರಿಯಾಗುವಂತಹ ಎಲ್ಲವನ್ನೂ ನಿಷೇಧಿಸಬೇಕು. ಅದು ಸಿನಿಮಾ ಮಾತ್ರವಲ್ಲ, ರಫ್ತು, ಆಮದು ಎಲ್ಲವೂ ಇದರಲ್ಲಿ ಒಳಗೊಳ್ಳಬೇಕು” ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments