ಬೆಂಗಳೂರಿನಿಂದ ತಂದಿದ್ದ ಒಂದೂವರೆ ಕಿಲೋಗಳಷ್ಟು ಚಿನ್ನದ ಆಭರಣ ಕಳುವಾಗಿದೆ. ಈ ಘಟನೆ ನಡೆದಿರುವುದು ಬೇರೆ ಎಲ್ಲೂ ಅಲ್ಲ, ರುದ್ರಮ ದೇವಿ ಚಿತ್ರದ ಶೂಟಿಂಗ್ ಜಾಗದಲ್ಲಿ. ರುದ್ರಮದೇವಿ ಆಂಧ್ರಪ್ರದೇಶ ಆಳಿದ ವೀರರಾಣಿಯ ಕಥೆ ಆಗಿದೆ. ಅರುಂಧತಿ ಖ್ಯಾತಿಯ ರುದ್ರಮದೇವಿ ಪಾತ್ರದಲ್ಲಿ ನಟಿ ಅನುಷ್ಕ ಶೆಟ್ಟಿ ನಟಿಸುತ್ತಾ ಇದ್ದಾಳೆ.
ಹೈದರಾಬಾದ್ ಗೆ ತಂದಿದ್ದ ಈ ಆಭರಣಗಳು ನಾನಕ್ ರಾಮ್ ಗುಡ್ ಎನ್ನುವ ಕಡೆ ಇರುವ ರಾಮಾನಾಯಿಡು ಸ್ಟುಡಿಯೋದಲ್ಲಿ ಈ ಕಳ್ಳತನ ನಡೆದಿದೆ.
ಶನಿವಾರ ಶೂಟಿಂಗ್ ಸಮಯದಲ್ಲಿ ಈ ಆಭರಣಗಳು ಮಾಯ ಆಗಿರುವ ಸಂಗತಿ ಬೆಳಕಿಗೆ ಬಂದಿದೆ. ಇದನ್ನು ಗಮನಿಸಿದ ಸಿನಿಮಾ ಯೂನಿಟ್ ಸ್ಥಳೀಯ ಗಚ್ಚಿ ಬೌಲಿ ಪೊಲೀಸ್ ಠಾಣೆ ಯಲ್ಲಿ ದೂರು ನೀಡಲಾಗಿದ್ದು, ಅಲ್ಲಿ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.
ಈ ಆಭರಣಗಳ ಬೆಲೆ ಸುಮಾರು 45 ಲಕ್ಷಗಳಾಗಿವೆ. ಆ ಸಿನಿಮಾದಲ್ಲಿ ಅನುಷ್ಕಾ ರುದ್ರಮದೇವಿ ಟೈಟಲ್ ರೋಲ್ ನಲ್ಲಿ ನಟಿಸುತ್ತಾ ಇದ್ದಾಳೆ. ವಿಭಿನ್ನ ರೀತಿಯ ಚಿತ್ರಗಳನ್ನು ನೀಡುವ ಗುಣಶೇಖರ್ ಈ ಚಿತ್ರದ ನಿರ್ದೇಶನ ಮಾಡಿದ್ದಾರೆ. ನಮ್ಮ ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸ್ಟಿರಿಯೋ ಸ್ಕೋಪಿಕ್ ತ್ರಿಡಿಯಲ್ಲಿ ನಿರ್ಮಿತಗೊಂಡಿದೆ. ಈ ಮುಖಾಂತರವು ಸಹ ವಿಶೇಷತೆ ಪಡೆದಿದೆ ಸಿನಿಮಾ !