Select Your Language

Notifications

webdunia
webdunia
webdunia
webdunia

ಬಿಜೆಪಿಗೆ ಸೇಪರ್ಡೆಯಾಗಲಿದ್ದಾರಂತೆ ನಟ ಶ್ರೀನಗರ ಕಿಟ್ಟಿ?

ಬಿಜೆಪಿಗೆ ಸೇಪರ್ಡೆಯಾಗಲಿದ್ದಾರಂತೆ ನಟ ಶ್ರೀನಗರ ಕಿಟ್ಟಿ?
ಬೆಂಗಳೂರು , ಶನಿವಾರ, 23 ಜುಲೈ 2016 (13:35 IST)
ನಟ ಶ್ರೀನಗರ ಕಿಟ್ಟಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ರಾಜಕೀಯಕ್ಕೆ ಶ್ರೀನಗರ ಕಿಟ್ಟಿ ಎಂಟ್ರಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ. ಮೂಲಗಳ ಪ್ರಕಾರ, ಕಿಟ್ಟಿ ಶುಕ್ರವಾರ ಬಿಜೆಪಿ ನಾಯಕರನ್ನು ಭೇಟಿಯಾಗಿದ್ದಾರಂತೆ. ಈ ವೇಳೆ ರಾಜಕೀಯಕ್ಕೆ ಎಂಟ್ರಿ ನೀಡುವ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. 

 
ಮೂಲಗಳ ಪ್ರತಾರ ಶ್ರೀನಗರ ಕಿಟ್ಟಿ ರಾಜಕೀಯ ಯೋಜನೆಗಳ ಬಗ್ಗೆ ಬಿಜೆಪಿಯ ಹಿರಿಯ ವರಿಷ್ಠರ ಜೊತೆಗೆ ಚರ್ಚೆ ನಡೆಸಿದ್ದಾರಂತೆ.
ಆದ್ದರಿಂದ ಬಿಡೆಪಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎನ್ನಲಾಗುತ್ತಿದೆ.

ಹ್ಯಾಟ್ರಿಕ್ ಹಿರೋ ಶಿವರಾಜ್‌ಕುಮಾರ್ ಅಭಿನಯದಲ್ಲಿ ಮೂಡಿ ಬರುತ್ತಿರುವ ಬಹು ನಿರೀಕ್ಷಿತ ಲೀಡರ್ ಚಿತ್ರದ ಮೂಲಕ ನಟ ಶ್ರೀನಗರ ಕಿಟ್ಟಿ ಭಾವನಾ ಬೆಳೆಗೆರೆ ಪುತ್ರಿ ಪರಿಣಿತಿ ಸಿನಿಮಾರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. 

ಚಿತ್ರದಲ್ಲಿ ಶಿವರಾಜ್ ಕುಮಾರ್ ಪಾತ್ರಕ್ಕಾಗಿ ಚಿತ್ರತಂಡ ಹುಡುಕಾಟ ನಡೆಸಿದ್ದ ವೇಳೆ ಶ್ರೀನಗರ ಕಿಟ್ಟಿಯವರ ಮಗಳು ಪರಿಣಿತಿ ಚಿತ್ರತಂಡದ ಕಣ್ಣಿಗೆ ಬಿದ್ದಿದ್ದು, ಶಿವರಾಜ್ ಕುಮಾರ್ ಅವರ ಮಗಳು ಪಾತ್ರ ಈಕೆಯೇ ಸೂಕ್ತ ಎಂದು ಶ್ರೀನಗರ ಕಿಟ್ಟಿಯರನ್ನು ಕೇಳಿದ್ದಾರೆ.

ಲೀಡರ್ ಚಿತ್ರದಲ್ಲಿ ಶೇಕಡಾ 50 ಭಾಗ ಪರಿಣಿತಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರತಂಡ ಶಿವಣ್ಣ -ಪರಿಣಿತಿ ಫೊಟೋಶೂಟ್ ನಡೆಸಿದ್ದು, ಫೊಟೋಗಳು ಎಲ್ಲರ ಗಮನ ಸೆಳೆಯುತ್ತಿವೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 

 
 

Share this Story:

Follow Webdunia kannada

ಮುಂದಿನ ಸುದ್ದಿ

ಕೋರಿಯೋಗ್ರಾಫರ್ ಆದ ನಟ ಶಿವರಾಜ್‌ಕುಮಾರ್