Select Your Language

Notifications

webdunia
webdunia
webdunia
webdunia

ಸ್ಕ್ರೀಪ್ಟ್ ಬದಲಾವಣೆ ಮಾಡುವಂತೆ ಸಲಹೆ ನೀಡಿದ್ರಾ ಅಲ್ಲು ಅರ್ಜುನ್ ?

ಸ್ಕ್ರೀಪ್ಟ್ ಬದಲಾವಣೆ ಮಾಡುವಂತೆ ಸಲಹೆ ನೀಡಿದ್ರಾ ಅಲ್ಲು ಅರ್ಜುನ್ ?
ಹೈದ್ರಾಬಾದ್ , ಗುರುವಾರ, 11 ಆಗಸ್ಟ್ 2016 (15:52 IST)
'ಸರೈನೋಡು' ಚಿತ್ರದ ಬಿಗ್ ಯಶಸ್ಸಿನ ಬಳಿಕ ನಟ ಅಲ್ಲು ಅರ್ಜುನ್ ಕೈಯಲ್ಲಿ ಸಾಕಷ್ಟು ಚಿತ್ರಗಳಿವೆ. ಅವರಿಗಾಗಿ ಹಲವು ಮೂವೀಗಳು ಕಾಯುತ್ತಿವೆ. ಚಿತ್ರದ ನಿರ್ದೇಶಕರು ಕಾಲ್ ಶೀಟ್‌ಗಾಗಿ ಕಾಯುತ್ತಿದ್ದಾರೆ. ಅಲ್ಲು ಅರ್ಜುನ್ ಅಬಿನಯದ ಮುಂಬರುವ ಚಿತ್ರ ತೆರೆ ಮೇಲೆ ಬರಲಿದೆಯಂತೆ. ಇನ್ನೂ ಸದ್ಯಕ್ಕೆ ಚಿತ್ರದ ಟೈಟಲ್ ಯಾವುದು ಅನ್ನೋದು ಗೊತ್ತಾಗಿಲ್ಲ. ಈ ಚಿತ್ರವನ್ನು ಹರೀಶ್ ಶಂಕರ್ ನಿರ್ದೇಶನ ಮಾಡಲಿದ್ದಾರೆ.. 
ಕೆಲ ಸಮಸ್ಯೆಗಳಿಂದ ಚಿತ್ರದ ಶೂಟಿಂಗ್ ಮುಂದೂಡಲಾಗಿದೆ. ಮೂಲಗಳ ಪ್ರಕಾರ ಶೂಟಿಂಗ್ ಸೆಪ್ಟೆಂಬರ್‌ಗೆ ಮುಂದೂಡಲಾಗಿದೆ. ಅಲ್ಲು ಅರ್ಜುನ್ ಸ್ಕ್ರೀಪ್ಟ್‌ ಇಷ್ಟವಾಗಿಲ್ವಂತೆ. ಆದ್ದರಿಂದ ನಿರ್ದೇಶಕ ಹರೀಶ್ ಅವರನ್ನು ಅಲ್ಲು ಸ್ಕ್ರೀಪ್ಟ್ ಬದಲಾಯಿಸುವಂತೆ ಸಲಹೆ ನೀಡಿದ್ದಾರೆ ಎನ್ನಲಾಗುತ್ತಿದೆ.

ಈ ಹಿಂದೆ ರಿಲೀಸ್ ಆಗಿದ್ದ ಹಲವು ಚಿತ್ರಗಳಿಗಿಂತ ಅದೇ ರೀತಿ ಕಥೆ ಒಳಗೊಂಡಿರಬಾರದು ಎಂಬುದು ಅಲ್ಲು ಅಭಿಪ್ರಾಯವಂತೆ. ಅದಕ್ಕಾಗಿ ಅವರು ತಮ್ಮ ಮುಂದಿನ ಚಿತ್ರದ ಸ್ಕ್ರೀಪ್ಟ್ ಬದಲಾಯಿಸುವಂತೆ ಹೇಳಿದ್ದಾರೆ ಎನ್ನಲಾಗುತ್ತಿದೆ.


ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 
 

Share this Story:

Follow Webdunia kannada

ಮುಂದಿನ ಸುದ್ದಿ

ಚಿತ್ರದ ಲೀಡ್ ರೋಲ್‌ನಲ್ಲಿ ಧನುಷ್ ಇಲ್ಲ ಎಂದು ಖಚಿತಪಡಿಸಿದ ಸೌಂದರ್ಯ