Select Your Language

Notifications

webdunia
webdunia
webdunia
webdunia

ಮಣಿರತ್ನಂ ಚಿತ್ರದಲ್ಲಿ ಆಲಿಯ ಭಟ್ ಗೆ ಅವಕಾಶ ?

ಮಣಿರತ್ನಂ ಚಿತ್ರದಲ್ಲಿ ಆಲಿಯ ಭಟ್ ಗೆ ಅವಕಾಶ ?
, ಮಂಗಳವಾರ, 26 ಆಗಸ್ಟ್ 2014 (10:09 IST)
ಮಣಿರತ್ನಂ ಭಾರತೀಯ ಚಿತ್ರರಂಗದ ಅನರ್ಘ್ಯ ರತ್ನ. ನಿರ್ದೇಶನದ ವಿಷಯದಲ್ಲಿ ಅವರ ಸಾಧನೆ ಅಪಾರ. ಅತ್ಯುತ್ತಮ ಚಿತ್ರಗಳನ್ನು ನೀಡಿರುವ ಮಣಿರತ್ನಂ ಅವರ ನಿರ್ದೇಶನದಲ್ಲಿ ಸೂಪರ್ ಸ್ಟಾರ್ ರಜನಿ ಕಾಂತ್, ಪದ್ಮಭೂಷಣ  ಕಮಲಾ ಹಾಸನ್ ಮಾತ್ರವಲ್ಲದೆ ಈಗಿನ ನಟ ಕಾರ್ತಿಕ್ ವರೆಗೂ ನಟಿಸಿದ್ದಾರೆ. 

ಕೇವಲ ಕಾಲಿವುಡ್ ಮಾತ್ರವಲ್ಲ ಟಾಲಿವುಡ್, ಬಾಲಿವುಡ್ ನಲ್ಲಿಯೂ ಸಹಿತ ತನ್ನ ಇರುವಿಕೆಯನ್ನು ಸಾಧನೆ ಮೂಲಕ ತೋರಿಸಿರುವ ಪ್ರತಿಭಾವಂತ ನಿರ್ದೇಶಕ ಇವರು ಅಂತಿಮವಾಗಿ ನಿರ್ದೇಶಿಸಿದ್ದ ಚಿತ್ರ ಕಡಲ್. ಅದಾದ ಬಳಿಕ ಯಾವ ಚಿತ್ರಕ್ಕೂ ಅವರು ಆಕ್ಷನ್ ಕಟ್ ಹೇಳಿಲ್ಲ.ಆದರೆ ಸುದ್ದಿ ಪ್ರಕಾರ  ಮಣಿರತ್ನಂ ಈಗ ಮುಂದಿನ ಚಿತ್ರಕ್ಕೆ ಸಿದ್ಧತೆ ನಡೆಸಿದ್ದಾರೆ 

ಕಾಲಿವುಡ್, ಬಾಲಿವುಡ್ , ಟಾಲಿವುಡ್ ಕಲಾವಿದರನ್ನು ಸೇರಿಸಿ ಚಿತ್ರ ನಿರ್ಮಿಸ ಬೇಕು ಎನ್ನುವ ಅವರ ಆಶಯ ನನಸಾಗಿಲ್ಲ, ನಾಗಾರ್ಜುನ್, ಮಹೇಶ್ ಬಾಬು, ಐಶ್ವರ್ಯ ರೈ, ಶ್ರುತಿ ಹಾಸನ್ ಎಲ್ಲರನ್ನು ಒಗ್ಗೂಡಿಸಿ ಎರಡು ಭಾಷೆಗಳಲ್ಲಿ ಚಿತ್ರ ನಿರ್ಮಿಸ ಬೇಕು ಎನ್ನುವ ಆಸೆ ಹೊಂದಿದ್ದರು. ಆದರೆ ಅದು ಸಾಧ್ಯ ಆಗಲಿಲ್ಲ. ಮಲೆಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ ಅವರ ಅಳಿಯ ದುಲ್ಕರ್ ಸಲ್ಮಾನ್ , ಶ್ರುತಿ ಹಾಸನ್ ಅವರ ನಟನೆಯ ಅಲೈ ಪಾಯಿದೆ ಚಿತ್ರವನ್ನು ನಿರ್ದೇಶಿಸುವ ಸುದ್ದಿ ಚಾಲ್ತಿಯಲ್ಲಿ ಇತ್ತು. ಈ ಚಿತ್ರಕ್ಕೆ ದುಲ್ಕರ್ ನಿಂದ ಹೆಚ್ಚು ದಿನಗಳ ಕಾಲ್ಶೀಟ್ ಪಡೆದ ಸುದ್ದಿ ಇದೆ.  
 
webdunia
ಆದರೆ ಈಗ ಶ್ರುತಿ ಹಾಸನ್ ಬದಲಾಗಿ ಬಾಲಿವುಡ್ ಮುದ್ದು ಬೇಬಿ  ಆಲಿಯ ಭಟ್ ನ್ನು ಆಯ್ಕೆ ಮಾಡಿಕೊಂಡಿದ್ದಾರಂತೆ ಮಣಿ . ಈ ವಿಷಯದ ಬಗ್ಗೆ ಏನನ್ನು ಹೇಳಲು ಆಲಿಯ ಮ್ಯಾನೇಜರ್ ಸಮ್ಮತಿಸಿಲ್ಲ. ಅದೇರೀತಿ ದುಲ್ಕರ್ ಸಹಿತ ಸಿನಿಮಾ ಬಗೆ ಎರಡು ಮಾತಾಡಿಲ್ಲ. ಆದರು ಈ ಜೋಡಿ ಮಣಿ ಗರಡಿಯಲ್ಲಿ ಹೊಳಪು ಪಡೆದುಕೊಳ್ಳುವುದು ಬಹುತೇಕ ನಿಶ್ಚಿತ ಆಗಿದೆ. 

Share this Story:

Follow Webdunia kannada